ಆ್ಯಪ್ನಗರ

ಬೆಂಗಳೂರು: ಕೆಂಗೇರಿ ಸಮೀಪದಲ್ಲೇ ಕಾಣಿಸಿಕೊಂಡ ಚಿರತೆ

ಬಡಾವಣೆಗೆ ಹೊಂದಿಕೊಂಡಿರುವ ರಸ್ತೆ ಬದಿಯ ತೊಗರಿ ಹೊಲದಲ್ಲಿ ಚಿರತೆ ಅವಿತುಕೊಂಡಿರುವ ಶಂಕೆ ಇದೆ. ಹೊಲಕ್ಕೆ ಹೊಂದಿಕೊಂಡಂತಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ನಿವಾಸಿಗಳು ಕುಡಿಯಲು ನೀರು ತರಲು ಹೋಗುವುದಕ್ಕೂ ಭಯಭೀತರಾಗಿದ್ದಾರೆ.

Vijaya Karnataka Web 29 Oct 2020, 11:26 pm
ಬೆಂಗಳೂರು: ಕೆಂಗೇರಿ ಸಮೀಪದ ನೈಸ್‌ ಟೋಲ್‌ ಸಮೀಪವಿರುವ ಬಸವೇಶ್ವರ ನಗರದ ಜಮೀನೊಂದರಲ್ಲಿಬುಧವಾರ ಚಿರತೆ ಕಾಣಿಸಿಕೊಂಡಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಕೊಮ್ಮಘಟ್ಟ ಬಿಡಿಎ ಅಪಾರ್ಟ್‌ಮೆಂಟ್‌ ರಸ್ತೆಯಲ್ಲಿ ಬಸವೇಶ್ವರ ನಗರ ಲೇಔಟ್‌ ಕಡೆ ಬೈಕ್‌ನಲ್ಲಿ ಬರುತ್ತಿದ್ದಾಗ ಕಾರ್ಪೆಂಟರ್‌ ಲೋಕೇಶ್‌ ಎಂಬುವರು ಚಿರತೆಯನ್ನು ನೋಡಿದ್ದಾರೆ. ಚಿರತೆ ಕಂಡು ಲೋಕೇಶ್‌ ಬೆಚ್ಚಿಬಿದ್ದಿದ್ದು, ತಕ್ಷಣವೇ ಸ್ಥಳೀಯರನ್ನು ಕರೆತಂದು ಅರಣ್ಯ ಇಲಾಖೆ ಅಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹುಡುಕಲು ಯಾವುದೇ ಪ್ರಯತ್ನ ನಡೆಸದೆ, ಬೋನು ಕೂಡ ಇಡದೆ 'ಎರಡು ದಿನ ನೋಡಿ ಆಮೇಲೆ ಮತ್ತೆ ಕಾಣಿಸಿಕೊಂಡರೆ ನೋಡೋಣ' ಎಂದು ಕಾಟಾಚಾರದ ಹೇಳಿಕೆ ನೀಡಿ ಹೊರಟು ಹೋಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಬಡಾವಣೆಗೆ ಹೊಂದಿಕೊಂಡಿರುವ ರಸ್ತೆ ಬದಿಯ ತೊಗರಿ ಹೊಲದಲ್ಲಿ ಚಿರತೆ ಅವಿತುಕೊಂಡಿರುವ ಶಂಕೆ ಇದೆ. ಹೊಲಕ್ಕೆ ಹೊಂದಿಕೊಂಡಂತಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ನಿವಾಸಿಗಳು ಕುಡಿಯಲು ನೀರು ತರಲು ಹೋಗುವುದಕ್ಕೂ ಭಯಭೀತರಾಗಿದ್ದಾರೆ.

3 ವಾರದ ಹಿಂದೆಯೂ ಕಾಣಿಸಿಕೊಂಡಿತ್ತು

ಕಳೆದ ಮೂರು ವಾರಗಳ ಹಿಂದೆಯಷ್ಟೇ ಭೀಮನಕುಪ್ಪೆಯಲ್ಲಿಚಿರತೆ ಕಾಣಿಸಿಕೊಂಡಿತ್ತು. ಚಿರತೆಯ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿ ಬಡಾವಣೆಯ ವಾಟ್ಸಾಪ್‌‌‌ಗಳಲ್ಲಿ ವಿಡಿಯೋ ವೈರಲ್‌ ಆಗಿತ್ತು. ಆಗಲೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಕಾಟಾಚಾರಕ್ಕೆ ಎಂಬಂತೆ ಬಂದು ಹೋಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ