ಆ್ಯಪ್ನಗರ

ಬಾಲಭವನದ ಪುಟಾಣಿ ರೈಲು ಕಾರ್ಯಾರಂಭ ಶೀಘ್ರ

ದುರಸ್ತಿ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಬಾಲಭವನದ ಪುಟಾಣಿ ರೈಲು ಒಂದು ಅಥವಾ ಎರಡು ವಾರದ ನಂತರ ಮತ್ತೆ ಕಾರ್ಯಾಚರಿಸಲಿದೆ.

Vijaya Karnataka 18 Mar 2019, 5:00 am
ಬೆಂಗಳೂರು: ದುರಸ್ತಿ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಬಾಲಭವನದ ಪುಟಾಣಿ ರೈಲು ಒಂದು ಅಥವಾ ಎರಡು ವಾರದ ನಂತರ ಮತ್ತೆ ಕಾರ್ಯಾಚರಿಸಲಿದೆ.
Vijaya Karnataka Web 1AAF856B-54C7-41E0-909A-6C969F1730DF


ರೈಲಿನ ಹಳಿಗಳು ತುಕ್ಕು ಹಿಡಿದಿದ್ದು ಹತ್ತು ವರ್ಷಕ್ಕೆ ಒಂದು ಬಾರಿ ಇಲ್ಲವೇ ಎರಡು ಬಾರಿ ರೈಲು ಹಳಿಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತದೆ. ಅದರಂತೆ ಆರೇಳು ವರ್ಷಗಳ ನಂತರ ಇದೀಗ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.

ಬಾಲಭವನದ ಅಧಿಧಿಧಿಕಾರಿಗಳ ಕೋರಿಕೆ ಮೇರೆಗೆ ನೈಋುತ್ಯ ರೈಲ್ವೆ ವಲಯವು ರೈಲು ಹಳಿಯ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಜ.28ರಿಂದ ಕಾಮಗಾರಿ ಆರಂಭವಾಗಿದೆ. ಇದೀಗ ಶೇ.90ರಷ್ಟು ಕಾಮಗಾರಿ ಮುಗಿದಿದೆ. ಸಣ್ಣ ಪುಟ್ಟ ತಾಂತ್ರಿಕ ಪರೀಕ್ಷೆಗಳು ನಡೆಯುತ್ತಿವೆ. ರೈಲು ಇಲಾಖೆಯಿಂದ ಸಂಚಾರಕ್ಕೆ ಹಸಿರು ನಿಶಾನೆ ಸಿಕ್ಕಿದ ಕೂಡಲೇ ಕಾರ್ಯಾರಂಭ ಮಾಡಲಾಗುವುದು ಎನ್ನುತ್ತಾರೆ ಅಧಿಕಾರಿಗಳು.

ಕೆಲ ಶಾಲಾ ಮಕ್ಕಳಿಗೆ ಒಂದೆರಡು ದಿನದಲ್ಲಿ ಬೇಸಿಗೆ ರಜೆ ಆರಂಭವಾಗಲಿದೆ. ಜತೆಗೆ ಬೇಸಿಗೆ ಶಿಬಿರಗಳನ್ನು ಆಯೋಜಿಸಬೇಕಿದೆ. ಹೀಗಾಗಿ ತುರ್ತಾಗಿ ದುರಸ್ತಿ ಮುಗಿಸಬೇಕಿದೆ ಎಂದು ರೈಲ್ವೆ ಇಲಾಖೆಗೂ ಮನವರಿಕೆ ಮಾಡಲಾಗಿದೆ ಎಂದು ಬಾಲಭವನದ ಅಧಿಕಾರಿಗಳು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ