ಆ್ಯಪ್ನಗರ

11 ತಿಂಗಳ ಮಗುವಿನ ಅಸ್ಥಿ ಮಜ್ಜೆ: ತಲಸ್ಸೇಮಿಯಾ ರೋಗಿಗಳಿಗೆ ಕಸಿ

ತಲಸ್ಸೇಮಿಯಾದಿಂದ ಬಳಲುತ್ತಿದ್ದ ಕಾಂಬೋಡಿಯಾ ಮೂಲದ 9 ಮತ್ತು 11ವರ್ಷದ ಬಾಲಕಿಯರಿಗೆ 11ತಿಂಗಳ ಸಹೋದರನೇ ಬೆಳಕಾಗಿದ್ದು, ನಾರಾಯಣ ಹೆಲ್ತ್‌ ಸಿಟಿಯಲ್ಲಿರುವ ಮಜುಂದಾರ್‌ ಶಾ ಕ್ಯಾನ್ಸರ್‌ ಸೆಂಟರ್‌ನ ವೈದ್ಯರು ಯಶಸ್ವಿಯಾಗಿ ಅಸ್ಥಿ ಮಜ್ಜೆ ಕಸಿ ಚಿಕಿತ್ಸೆ ನಡೆಸಿದ್ದಾರೆ.

Vijaya Karnataka 5 Sep 2018, 11:11 am
ಬೆಂಗಳೂರು: ತಲಸ್ಸೇಮಿಯಾದಿಂದ ಬಳಲುತ್ತಿದ್ದ ಕಾಂಬೋಡಿಯಾ ಮೂಲದ 9 ಮತ್ತು 11ವರ್ಷದ ಬಾಲಕಿಯರಿಗೆ 11ತಿಂಗಳ ಸಹೋದರನೇ ಬೆಳಕಾಗಿದ್ದು, ನಾರಾಯಣ ಹೆಲ್ತ್‌ ಸಿಟಿಯಲ್ಲಿರುವ ಮಜುಂದಾರ್‌ ಶಾ ಕ್ಯಾನ್ಸರ್‌ ಸೆಂಟರ್‌ನ ವೈದ್ಯರು ಯಶಸ್ವಿಯಾಗಿ ಅಸ್ಥಿ ಮಜ್ಜೆ ಕಸಿ ಚಿಕಿತ್ಸೆ ನಡೆಸಿದ್ದಾರೆ.
Vijaya Karnataka Web doctor


‘‘ಕಾಂಬೋಡಿಯಾದ ದಂಪತಿಯ ಇಬ್ಬರು ಹೆಣ್ಣು ಮಕ್ಕಳಿಗೆ ಅಸ್ಥಿ ಮಜ್ಜೆ ಕಸಿ ಮಾಡಲು ದಾನಿಗಳ ದೊರೆಯಲಿಲ್ಲ. ಹೀಗಾಗಿ ಅವರ 11ತಿಂಗಳ ಸಹೋದರ ಹಾಗೂ ತಂದೆಯ ಹ್ಯೂಮನ್‌ ಲ್ಯುಕೋಸೈಟ್‌ ಆ್ಯಂಟಿಜೆನ್‌ (ಎಚ್‌ಎಲ್‌ಎ) ಹೊಂದಿಕೆಯಾದ್ದರಿಂದ ಅಸ್ಥಿ ಮಜ್ಜೆ ಕಸಿ ಮಾಡಲಾಗಿದೆ,’’ ಎಂದು ಮಜುಂದಾರ್‌ ಶಾ ಕ್ಯಾನ್ಸರ್‌ ಸೆಂಟರ್‌ನ ಪಿಡಿಯಾಟ್ರಿಕ್‌ ಹೆಮಾಟಾಲಜಿ ಮತ್ತು ಅಸ್ಥಿ ಮಜ್ಜೆ ಕಸಿ ತಜ್ಞ ಡಾ. ಸುನಿಲ್‌ ಭಟ್‌ ಮಾಹಿತಿ ನೀಡಿದರು.

‘‘ಮಗು 11 ತಿಂಗಳ ಎಳೆಯವನಾಗಿದ್ದರೂ, ದಾನ ಮಾಡಲು ಶಕ್ತವಾಗಿದ್ದ. ಇಷ್ಟಾಗಿಯೂ ದಾನಿಯಿಂದ ಅಸ್ಥಿ ಮಜ್ಜೆ (ಸ್ಟೆಮ್‌ ಸೆಲ್‌) ಪಡೆಯುವುದು ಸವಾಲಿನ ಕೆಲಸವಾಗಿತ್ತು. ಹೀಗಾಗಿ ವೈದ್ಯರ ತಂಡ ಎರಡು ಭಿನ್ನ ಹಂತದಲ್ಲಿ ಅಸ್ಥಿ ಮಜ್ಜೆ ಪಡೆದು 4ರಿಂದ 6 ವಾರಗಳ ಅಂತರದಲ್ಲಿ ಎಚ್‌ಎಲ್‌ಎ ಪಡೆದು, ಕಸಿ ಮಾಡಲಾಗಿದೆ. ಮಗು ಕೂಡ ಚೇತರಿಸಿಕೊಂಡಿದ್ದು, ಅತಿ ಕಿರಿಯ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ,’’ ಎಂದು ಸುನೀಲ್‌ ಭಟ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ