ಆ್ಯಪ್ನಗರ

ಚಿನ್ನಸ್ವಾಮಿ ಸ್ಫೋಟ ಪ್ರಕರಣ: 10 ವರ್ಷಗಳ ಬಳಿಕ ಯಾಸಿನ್ ಭಟ್ಕಳ್ ಸಹಚರನಿಗೆ ಜೈಲು ಶಿಕ್ಷೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಿದ್ದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಯಾಸೀನ್‌ ಭಟ್ಕಳ್‌ ಹಾಗೂ ಇತರ ಆರೋಪಿಗಳಿಗೆ ಫಾಶಿ ಮೊಹಮ್ಮದ್ ಸಹಕರಿಸಿದ್ದ. ಎಂ.ಟೆಕ್‌ ಪದವೀಧರನಾಗಿರುವ ಫಾಶಿ, ಸೌದಿ ಅರೇಬಿಯಾದ ಖಾಸಗಿ ಕಂಪನಿಯಲ್ಲಿ ಕೆಲ ಕಾಲ ಎಂಜಿನಿಯರ್‌ ಆಗಿದ್ದ.

Vijaya Karnataka 10 Jan 2020, 11:27 pm
ಬೆಂಗಳೂರು: ಐಪಿಎಲ್‌ ಟೂರ್ನಮೆಂಟ್‌ ಪಂದ್ಯ ಆರಂಭಕ್ಕೂ ಮುನ್ನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2010ರಲ್ಲಿ ಸಂಭವಿಸಿದ್ದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಫಾಶಿ ಮೊಹಮ್ಮದ್‌ ಎಂಬಾತನಿಗೆ ಎನ್‌ಐಎ ಪ್ರಕರಣಗಳ ವಿಶೇಷ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ.
Vijaya Karnataka Web yasin bhatkal and chinnaswamy
ಚಿನ್ನಸ್ವಾಮಿ ಸ್ಫೋಟ ಪ್ರಕರಣ: 10 ವರ್ಷಗಳ ಬಳಿಕ ಯಾಸಿನ್ ಭಟ್ಕಳ್ ಸಹಚರನಿಗೆ ಜೈಲು ಶಿಕ್ಷೆ


ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ನ್ಯಾಯಾಲಯದ ವಿಚಾರಣೆ ವೇಳೆ ಫಾಶಿ ಮೊಹಮ್ಮದ್‌ ತಪ್ಪೊಪ್ಪಿಕೊಂಡಿದ್ದಾನೆ. ಬಿಹಾರ ಮೂಲದ ಫಾಶಿಗೆ ಎಂಜಿನಿಯರಿಂಗ್‌ ಓದುತ್ತಿದ್ದ ಸಂದರ್ಭದಲ್ಲಿ ಯಾಸೀನ್‌ ಭಟ್ಕಳ್‌ ಪರಿಚಯವಾಗಿತ್ತು. ಅದಾದ ನಂತರ ಯಾಸೀನ್‌ ಭಟ್ಕಳ್‌ ತಂಡದಲ್ಲಿ ಗುರುತಿಸಿಕೊಂಡು ಇತರ ಆರೋಪಿಗಳಿಗೆ ಭಟ್ಕಳ್‌ ಸಹೋದರರನ್ನು ಇದೇ ಫಾಶಿ ಮೊಹಮ್ಮದ್ ಪರಿಚಯಿಸಿದ್ದ.

ಎಂ.ಟೆಕ್‌ ಪದವೀಧರನಾಗಿರುವ ಫಾಶಿ, ಸೌದಿ ಅರೇಬಿಯಾದ ಖಾಸಗಿ ಕಂಪನಿಯಲ್ಲಿ ಕೆಲ ಕಾಲ ಎಂಜಿನಿಯರ್‌ ಆಗಿದ್ದ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಿದ್ದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಯಾಸೀನ್‌ ಭಟ್ಕಳ್‌ ಹಾಗೂ ಇತರ ಆರೋಪಿಗಳಿಗೆ ಫಾಶಿ ಮೊಹಮ್ಮದ್ ಸಹಕರಿಸಿದ್ದ.

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸ್ಫೋಟ: ಮೂವರು ಉಗ್ರರಿಗೆ 7 ವರ್ಷ ಸಜೆ

ಸೌದಿ ಆರೇಬಿಯಾದಿಂದ ಆಗಮಿಸುತ್ತಿದ್ದಂತೆಯೇ ಕೇಂದ್ರ ತನಿಖಾ ಸಂಸ್ಥೆಗಳು ಫಾಶಿ ಮೊಹಮ್ಮದ್‌ನನ್ನು ಬಂಧಿಸಿದ್ದವು. ದಿಲ್ಲಿ ಪೊಲೀಸರ ವಿಚಾರಣೆ ವೇಳೆ ಫಾಶಿ ಮೊಹಮ್ಮದ್ ಬೆಂಗಳೂರು ಸ್ಫೋಟದಲ್ಲಿ ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ನಂತರ ಸಿಸಿಬಿ ಪೊಲೀಸರು ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಹಂತದಲ್ಲಿಯೇ ಫಾಶಿ ತಪ್ಪೊಪ್ಪಿಕೊಂಡ. ಪ್ರಕರಣದ ಸರಕಾರಿ ಅಭಿಯೋಜಕರಾಗಿ ಸಿ.ಎ. ರವೀಂದ್ರ ವಾದ ಮಂಡಿಸಿದ್ದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಫೋಟ ಪ್ರಕರಣ : ಶಿಕ್ಷೆ ಕಡಿತ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ