ಆ್ಯಪ್ನಗರ

ಯಲ್ಲೊಎಕ್ಸ್‌ಪ್ರೆಸ್‌ ಕ್ಯಾಬ್‌ ಕಚೇರಿಗಳಲ್ಲಿಸಿಐಡಿ ಶೋಧ

ಸಿಐಡಿಯ ಆರ್ಥಿಕ ಅಪರಾಧಗಳ ತಂಡದ ಅಧಿಕಾರಿಗಳು ಯಲ್ಲೊಎಕ್ಸ್‌ಪ್ರೆಸ್‌ ಕಚೇರಿ ಮತ್ತು ಗೋದಾಮುಗಳಲ್ಲಿಶೋಧ ನಡೆಸಿ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಆರಂಭವಾದ ಶೋಧ ಕಾರ್ಯ, ರಾತ್ರಿವರೆಗೂ ಮುಂದುವರಿದಿತ್ತು.

Vijaya Karnataka 12 Oct 2019, 5:00 am
ವಿಕ ಸುದ್ದಿಲೋಕ ಬೆಂಗಳೂರು
Vijaya Karnataka Web yellow express


ಐಎಂಎ ಹಗರಣ ಮಾದರಿಯ ಯಲ್ಲೊಎಕ್ಸ್‌ಪ್ರೆಸ್‌ ಕ್ಯಾಬ್‌ ಹಗರಣ ಸಂಬಂಧ ತನಿಖೆ ಆರಂಭಿಸಿರುವ ಸಿಐಡಿ ಅಧಿಕಾರಿಗಳು, ಮತ್ತಿಕೆರೆಯ ಗೋಕುಲ ಮತ್ತು ನೆಲಮಂಗಲದಲ್ಲಿರುವ ಕಚೇರಿಗಳಲ್ಲಿಶೋಧ ನಡೆಸಿದರು.

ಸಿಐಡಿಯ ಆರ್ಥಿಕ ಅಪರಾಧಗಳ ತಂಡದ ಅಧಿಕಾರಿಗಳು ಯಲ್ಲೊಎಕ್ಸ್‌ಪ್ರೆಸ್‌ ಕಚೇರಿ ಮತ್ತು ಗೋದಾಮುಗಳಲ್ಲಿಶೋಧ ನಡೆಸಿ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಆರಂಭವಾದ ಶೋಧ ಕಾರ್ಯ, ರಾತ್ರಿವರೆಗೂ ಮುಂದುವರಿದಿತ್ತು.

ಪ್ರಕರಣದಲ್ಲಿಆರೋಪಿಗಳಾಗಿರುವ ರಮಿತ್‌ ಮಲ್ಹೋತ್ರಾ, ಜೋಜೊ ಥಾಮಸ್‌ ಮತ್ತು ಮದಿ ನಾಯರ್‌ ಎಂಬುವರು ಯಲ್ಲೊಎಕ್ಸ್‌ಪ್ರೆಸ್‌ ಸೇರಿದಂತೆ ಐದು ಬೇರೆ ಬೇರೆ ಹೆಸರುಗಳಲ್ಲಿಕಂಪನಿ ತೆರೆದು, ಅದರಲ್ಲಿಹೂಡಿಕೆ ಮಾಡುವಂತೆ ಜನರನ್ನು ಪ್ರಚೋದಿಸಿದ್ದರು.

ತಮ್ಮ ಕಂಪನಿಗೆ 2 ಲಕ್ಷ ರೂ.ಯಿಂದ 2.50 ಲಕ್ಷ ರೂ. ಹೂಡಿಕೆ ಮಾಡಬೇಕು. ಆ ಹಣದಿಂದ ಕ್ಯಾಬ್‌ಗಳನ್ನು ಖರೀದಿಸಿ, ಹೂಡಿಕೆದಾರರ ಹೆಸರಿನಲ್ಲೇ ನೋಂದಣಿ ಮಾಡಿಸಲಾಗುತ್ತದೆ. ಕ್ಯಾಬ್‌ಗಳನ್ನು ಆ್ಯಪ್‌ ಆಧಾರಿತ ಕಂಪನಿಗಳಿಗೆ ಅಟ್ಯಾಚ್‌ ಮಾಡಲಾಗುತ್ತದೆ. ಅದರಿಂದ ಬರುವ ಆದಾಯದಲ್ಲಿಪ್ರತಿ ತಿಂಗಳು 10,000 ರೂ.ಯಿಂದ 25 ಸಾವಿರ ರೂ.ವರೆಗೆ ಹೂಡಿಕೆದಾರರಿಗೆ ನೀಡಲಾಗುತ್ತದೆ ಎಂದು ಆರೋಪಿಗಳು ಭರವಸೆ ನೀಡಿದ್ದರು.

ಬ್ಯಾಂಕೇತರ ಕಂಪನಿಯಾಗಿ ಯಲ್ಲೊಎಕ್ಸ್‌ಪ್ರೆಸ್‌ ನೋಂದಣಿ ಮಾಡಿಕೊಂಡು ಅಕ್ರಮವಾಗಿ ಸಾರ್ವಜನಿಕರಿಂದ ಡೆಪಾಸಿಟ್‌ ಸಂಗ್ರಹಿಸುತ್ತಿರುವ ಕುರಿತು ಆರ್‌ಬಿಐ, ರಾಜ್ಯ ಸರಕಾರಕ್ಕೆ ಎಚ್ಚರಿಸಿತ್ತು. ಈ ಹಿನ್ನೆಲೆಯಲ್ಲಿಪ್ರಕರಣವನ್ನು ಸಿಐಡಿ ತನಿಖೆಗೆ ರಾಜ್ಯ ಸರಕಾರ ವಹಿಸಿತ್ತು. ತನಿಖೆ ಆರಂಭಿಸಿದ ಸಿಐಡಿ ಅಕ್ರಮ ಸಂಬಂಧ ದಾಖಲೆಗಳನ್ನು ಸಂಗ್ರಹಿಸಲು ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ