ಆ್ಯಪ್ನಗರ

ಭಾರಿ ಮಳೆಗೆ ತುಂಬಿ ಹರಿದ ಬೆಂಗಳೂರಿನ 9 ಕೆರೆಗಳು

ಭಾನುವಾರ ಮತ್ತು ಸೋಮವಾರ ಸುರಿದ ಭಾರಿ ಮಳೆಗೆ ನಗರದಲ್ಲಿ 9 ಕೆರೆಗಳು ತುಂಬಿ ಹರಿದು ಸುತ್ತಮುತ್ತಲಿನ ಮನೆಗಳಿಗೆ ಮತ್ತು ಅಪಾರ್ಟ್‌ಮೆಂಟ್ ಬೇಸ್‌ಮೆಂಟ್‌ಗಳಿಗೆ ನೀರು ನುಗ್ಗುತ್ತಿದೆ. ನಗರದ ನೈಋತ್ಯ ಭಾಗದಲ್ಲಿ ಮಳೆಯ ಆರ್ಭಟ ತೀವ್ರವಾಗಿತ್ತು.

TIMESOFINDIA.COM 25 Sep 2018, 1:52 pm
ಬೆಂಗಳೂರು: ಭಾನುವಾರ ಮತ್ತು ಸೋಮವಾರ ಸುರಿದ ಭಾರಿ ಮಳೆಗೆ ನಗರದಲ್ಲಿ 9 ಕೆರೆಗಳು ತುಂಬಿ ಹರಿದು ಸುತ್ತಮುತ್ತಲಿನ ಮನೆಗಳಿಗೆ ಮತ್ತು ಅಪಾರ್ಟ್‌ಮೆಂಟ್ ಬೇಸ್‌ಮೆಂಟ್‌ಗಳಿಗೆ ನೀರು ನುಗ್ಗುತ್ತಿದೆ. ನಗರದ ನೈಋತ್ಯ ಭಾಗದಲ್ಲಿ ಮಳೆಯ ಆರ್ಭಟ ತೀವ್ರವಾಗಿತ್ತು.
Vijaya Karnataka Web Banglore


ಹುಳಿಮಾವು ಕೆರೆ, ಗೊಟ್ಟಿಗೆರೆ ಕೆರೆ, ಸುಬ್ಬರಾಯನಕೆರೆ, ಕಾಳೇನ ಅಗ್ರಹಾರ ಕೆರೆ, ಬಸವನಪುರ ಕೆರೆ, ದೊರೆಕೆರೆ, ಗುಬ್ಬಲಾಲ ಕೆರೆ, ವಸಂತಪುರ ಕೆರೆ ಮತ್ತು ದೊಡ್ಡಕಲ್ಲಸಂಗ್ರ ಕೆರೆಗಳು ಉಕ್ಕಿ ಹರಿಯುತ್ತಿವೆ.

ಬನ್ನೇರುಘಟ್ಟ ರಸ್ತೆಯ ಹಲವು ವಸತಿ ಸಮುಚ್ಚಯಗಳ ಬೇಸ್‌ಮೆಂಟ್‌ಗಳಿಗೆ ಮತ್ತು ಹುಳಿಮಾವಿನ ಕೋಡಿಚಿಕ್ಕನಹಳ್ಳಿಯ ಹಲವು ಮನೆಗಳು ಪ್ರವಾಹಕ್ಕೆ ನಲುಗಿವೆ.

ಸೋಮವಾರ ಮುಂಜಾನೆ ನಗರದ ಅನೇಕ ಕಡೆ ಅದರಲ್ಲೂ ಮೈಸೂರು ರಸ್ತೆ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.

ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಪಂಪ್ ಮೂಲಕ ನೀರನ್ನು ಹೊರಹಾಕಿದ್ದರಿಂದ ಪ್ರವಾಹ ಸ್ವಲ್ಪಮಟ್ಟಿಗೆ ತಗ್ಗುವಂತಾಯಿತು. ಆದರೆ ಸೋಮವಾರ ರಾತ್ರಿ ಕೂಡ ಮತ್ತೆ ಮಳೆಯಾಗಿದ್ದು ನಿವಾಸಿಗಳು ರಾತ್ರಿ ಎಲ್ಲ ಆತಂಕದಿಂದ ಕಳೆಯುವಂತಾಯಿತು.

ಮೈಸೂರು ರಸ್ತೆ ನಾಯಂಡಹಳ್ಳಿಯಲ್ಲಿ ಪ್ರವಾಹದ ನೀರಲ್ಲಿ ಮೈಸೂರು ನಿವಾಸಿಯೊಬ್ಬರ ಕಾರೊಂದು ಮುಳುಗಿತ್ತು. ಅದರಲ್ಲಿದ್ದವರು ಸಕಾಲಕ್ಕೆ ಕಾರಿಂದ ಹೊರಬಂದಿದ್ದರಿಂದ ಅಪಾಯದಿಂದ ಪಾರಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ