ಆ್ಯಪ್ನಗರ

ಮನೆತನದ ಹೆಸರಿನ ವಿಚಾರವಾಗಿ ಗಲಾಟೆ: ದೂರು

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧುವಿನ ಹೆಸರಿನ ಜತೆ ಬಳಸಿದ ಮನೆತನದ ವಿಚಾರವಾಗಿ ಗಲಾಟೆ ನಡೆದು, ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಲ್ಲೇಶ್ವರದ ಸಪ್ನಾ(24) ಎಂಬುವರು ವೀರಾಜಪೇಟೆ ಬಳಿಯ ಮೈತಾಡಿ ಗ್ರಾಮದ ಶಾರಿ ಕಾರ್ಯಪ್ಪ ಎಂಬುವರ ವಿರುದ್ಧ ದೂರು ದಾಖಲಿಸಿದ್ದಾರೆ.

Vijaya Karnataka 13 Jan 2019, 5:00 am
ಬೆಂಗಳೂರು :ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧುವಿನ ಹೆಸರಿನ ಜತೆ ಬಳಸಿದ ಮನೆತನದ ವಿಚಾರವಾಗಿ ಗಲಾಟೆ ನಡೆದು, ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Vijaya Karnataka Web clashes between families regarding name on wedding invitation
ಮನೆತನದ ಹೆಸರಿನ ವಿಚಾರವಾಗಿ ಗಲಾಟೆ: ದೂರು


ಮಲ್ಲೇಶ್ವರದ ಸಪ್ನಾ(24) ಎಂಬುವರು ವೀರಾಜಪೇಟೆ ಬಳಿಯ ಮೈತಾಡಿ ಗ್ರಾಮದ ಶಾರಿ ಕಾರ್ಯಪ್ಪ ಎಂಬುವರ ವಿರುದ್ಧ ದೂರು ದಾಖಲಿಸಿದ್ದಾರೆ.

ಮಲ್ಲೇಶ್ವರದ ಉದ್ಯಮಿ ಸುಳ್ಳಿಮಡ ಕಾರ್ತಿಕ್‌ ಕುಶಾಲಪ್ಪ ಮತ್ತು ಸಪ್ನಾ ಅವರ ವಿವಾಹ ಡಿ.2ರಂದು ಕೊಡವ ಸಮಾಜದಲ್ಲಿ ನಡೆದಿತ್ತು. ಮದುವೆಗೆ ಮುದ್ರಿಸಿದ್ದ ಆಮಂತ್ರಣ ಪತ್ರಿಕೆಯಲ್ಲಿ, ಸಪ್ನಾ ಅವರ ತಂದೆ ನಾಗಂಡ ಭೀಮಯ್ಯ ಮತ್ತು ತಾಯಿಯನ್ನು ಶಾಂತಿ ಎಂದು ಹೇಳಲಾಗಿತ್ತು.

ಈ ನಡುವೆ ವಧುವಿನ ತಾಯಿಗೆ ಕರೆ ಮಾಡಿದ್ದ ಶಾರಿ ಕಾರ್ಯಪ್ಪ, 'ನಾನು ನಾಗಂಡ ಕುಟುಂಬದ ಮುಖ್ಯಸ್ಥನಾಗಿದ್ದು, ನಿಮ್ಮ ಮಗಳ ಲಗ್ನ ಪತ್ರಿಕೆಯಲ್ಲಿ 'ನಾಗಂಡ' ಎಂದು ಮುದ್ರಿಸಿ ಮನೆತನವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಹೆಸರು ತೆಗೆಯದಿದ್ದರೆ ಮದುವೆ ನಿಲ್ಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಅದಕ್ಕೆ ಸಪ್ನಾ ಅವರ ತಾಯಿ ನಿರಾಕರಿಸಿದ್ದರು. ಈ ವೇಳೆ 5 ಲಕ್ಷ ರೂ. ಕೊಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.

ಮನೆಗೆ ಬಂದು ಗಲಾಟೆ

ಮದುವೆಗೆ ಆಗಮಿಸಿದ್ದವರಿಗೆ ಧನ್ಯವಾದ ತಿಳಿಸಲು ಪತ್ರಿಕೆಯಲ್ಲಿ ಜಾಹೀರಾತು ನೀಡಲಾಗಿತ್ತು. ಮತ್ತೆ ಸಿಟ್ಟಿಗೆದ್ದ ಕಾರ್ಯಪ್ಪ, ಡಿ.11ರ ಸಂಜೆ 7ಗಂಟೆಗೆ ಮಲ್ಲೇಶ್ವರದಲ್ಲಿರುವ ಮನೆಗೆ ಬಂದು ಸಪ್ನಾ ಮತ್ತು ಅವರ ಅತ್ತೆ ಜತೆಗೆ ಜಗಳ ಮಾಡಿ 5 ಲಕ್ಷ ರೂ.ಗೆ ಮತ್ತೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಸಪ್ನಾ ಅವರು ದೂರು ದಾಖಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ