ಆ್ಯಪ್ನಗರ

ಚರ್ಚ್‌ ಸ್ಟ್ರೀಟ್‌ ಬಳಿಕ ಕ್ಲೀನ್ ಏರ್​ ಸ್ಟ್ರೀಟ್ ಯೋಜನೆ ಬೆಂಗಳೂರಿನ ಬೇರೆ ಪ್ರದೇಶಗಳಿಗೂ ವಿಸ್ತರಣೆ: ಈ ಸ್ಥಳದಲ್ಲಿ ವಾಹನಗಳಿಗೆ ವಿಕೇಂಡ್‌ನಲ್ಲಿ ನಿಷೇಧ!

ಬೆಂಗಳೂರಿನ ಸುಪ್ರಸಿದ್ದ ಚರ್ಚ್​​ ಸ್ಟ್ರೀಟ್‌ನಲ್ಲಿ ವಾರಾಂತ್ಯದಲ್ಲಿ ವಾಹನ ಸಂಚಾರ ನಿಷೇಧಿಸಿದಂತೆ ಬೆಂಗಳೂರಿನ ಇತರೆ ಪ್ರದೇಶಗಳಲ್ಲೂ ಕ್ಲೀನ್ ಏರ್​ ಸ್ಟ್ರೀಟ್ ಯೋಜನೆ ಜಾರಿಯಾಗಲಿದೆ. ಸದ್ಯ ಚರ್ಚ್‌ ಸ್ಟ್ರೀಟ್‌ನ ಯೋಜನೆಯಿಂದಾಗಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

Vijaya Karnataka Web 30 Nov 2020, 12:18 pm
ಬೆಂಗಳೂರು: ಬೆಂಗಳೂರಿನ ಸುಪ್ರಸಿದ್ದ ಚರ್ಚ್ ಸ್ಟ್ರೀಟ್‌ನಲ್ಲಿ ವಾರಾಂತ್ಯದಲ್ಲಿ ವಾಹನ ಸಂಚಾರ ನಿಷೇಧಿಸಿ ಭಾರೀ ಯಶಸ್ಸು ಕಂಡ ಬಳಿಕ ಇದೀಗ ಈ ವಿನೂತನ ವಾಹನ ನಿಷೇಧ ಯೋಜನೆಯನ್ನು ನಗರದ ಇತರ ಪ್ರದೇಶಗಳಿಗೆ ವಿಸ್ತರಿಸಲು ನಗರ ಭೂ ಸಾರಿಗೆ ನಿರ್ದೇಶನಾಲಯ ಮುಂದಾಗಿದೆ.
Vijaya Karnataka Web Bengaluru: Security officials stand guard at the entrance of church street, whic...


ವಾರಂತ್ಯದಲ್ಲಿ ವಾಹನ ಸಾಗರವೇ ಹರಿದು ಬರುತ್ತಿದ್ದ ಚರ್ಚ್ ಸ್ಟ್ರೀಟ್ನಲ್ಲಿ ನವೆಂಬರ್‌ 7 ರಿಂದ ಕ್ಲೀನ್ ಏರ್ ಸ್ಟ್ರೀಟ್(ಶುದ್ಧ ಗಾಳಿಯ ಬೀದಿ) ಯೋಜನೆಯಡಿ ನಗರ ಭೂಸಾರಿಗೆ ನಿರ್ದೇಶನಾಲಯ ಶನಿವಾರ ಮತ್ತು ಭಾನುವಾರ ವಾಹನ ಸಂಚಾರ ನಿಷೇಧಿಸಿತ್ತು. ಶುದ್ಧ ಗಾಳಿ, ನೀರು ಪ್ರತಿಯೊಬ್ಬ ನಾಗರೀಕನ ಹಕ್ಕು ಎನ್ನುವ ಧ್ಯೇಯದೊಂದಿಗೆ ಈ ಯೋಜನೆ ಜಾರಿಗೆ ತಂದಿತ್ತು. ಯೋಜನೆ ಆರಂಭವಾಗಿ ತಿಂಗಳು ಆಗುವುದರೊಳಗೆ ಜನರಿಂದ ಭಾರೀ ಸಕರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

ಹೀಗಾಗಿ ಈ ಯೋಜನೆಯನ್ನು ಬೆಂಗಳೂರು ನಗರದ ಇತರೆ ಪ್ರದೇಶಗಳಿಗೂ ವಿಸ್ತರಿಸಲು ನಗರ ಭೂಸಾರಿಗೆ ನಿರ್ದೇಶನಾಲಯ ಮುಂದಾಗಿದೆ. ಬಸವನಗುಡಿಯಲ್ಲಿರುವ ಸುಪ್ರಸಿದ್ಧ ಗಾಂಧಿ ಬಜಾರ್‌ ರಸ್ತೆಯಲ್ಲಿ ವಿಕೇಂಡ್‌ಗೆ ವಾಹನ ಸಂಚಾರ ಬ್ಯಾನ್‌ ಮಾಡುವ ಈ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ಮೂಲಕ ಗಾಂಧಿ ಬಜಾರ್‌ ಪ್ರದೇಶವನ್ನು ಪಾದಚಾರಿ ಸ್ನೇಹಿ ರಸ್ತೆಯನ್ನಾಗಿ ಮಾಡುವ ಯೋಜನೆ ಇಟ್ಟುಕೊಂಡಿದೆ.

ಸಂಕ್ರಾಂತಿ ಬಳಿಕ ಹಾಲು ಉತ್ಪಾದಕರಿಗೆ 2 ರೂ. ಹೆಚ್ಚುವರಿ ಪ್ರೋತ್ಸಾಹ ಧನ, ಬಮೂಲ್‌ ಚಿಂತನೆ!

ಏನಿದು ಯೋಜನೆ?ಶುದ್ಧಗಾಳಿ, ನೀರು ಪ್ರತಿಯೊಬ್ಬ ನಾಗರೀಕನ ಹಕ್ಕು ಎನ್ನುವ ಧ್ಯೇಯದೊಂದಿಗೆ ನಗರ ಭೂಸಾರಿಗೆ ನಿರ್ದೇಶನಾಲಯ ಹಾಗೂ ಯಕೆ ಸಹಭಾಗಿತ್ವದಲ್ಲಿ ಕ್ಲೀನ್ ಏರ್ ಸ್ಟ್ರೀಟ್(ಶುದ್ಧ ಗಾಳಿಯ ಬೀದಿ)ಯೋಜನೆಯನ್ನು ಬೆಂಗಳೂರಿನಲ್ಲಿ ಜಾರಿಗೆ ತಂದಿದೆ. ಚರ್ಚ್‌ ಸ್ಟ್ರೀಟನ್ನು ಶುದ್ಧ ಗಾಳಿಯ ಬೀದಿಯಾಗಿ ಪರಿವರ್ತಿಸುವ ಉದ್ದೇಶದಿಂದ ಇದೀಗ ಶನಿವಾರ ಹಾಗೂ ಭಾನುವಾರ ಈ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಸದ್ಯ 2021ರ ಫೆಬ್ರವರಿ 21ವರೆಗೂ ಈ ಪೈಲಟ್ ಪ್ರಾಜೆಕ್ಟ್ ಜಾರಿಯಲ್ಲಿರಲಿದೆ. ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ