ಆ್ಯಪ್ನಗರ

ನಾನು ಭವಿಷ್ಯ, ಜ್ಯೋತಿಷ್ಯ ಹಿಂದೆ ಹೋಗಲ್ಲ, ನಮ್ಮ ಕುಟುಂಬದವರು ನಂಬುತ್ತಾರೆ: ಕುಮಾರಸ್ವಾಮಿ

ಮೈಸೂರು ಅರಸರ ಜ್ಯೋತಿಷಿ ಒಬ್ಬರು ಹೇಳಿದ ಭವಿಷ್ಯದಿಂದ ಅವರಿಗೆ ಒಳ್ಳೆಯದಾಗಿದೆ. ಹಾಗಾಗಿ ಅವರು ನಂಬಿಕೊಂಡು ಮುಂದುವರಿಸಿದ್ದಾರೆ. ನಾನು ದೇವರನ್ನು ನಂಬುತ್ತೇನೆ‌. 38-78 ಸಂಖ್ಯಾಶಾಸ್ತ್ರವನ್ನು ನಂಬಲ್ಲ ಎಂದು ಎಚ್‌ಡಿಕೆ ತಿಳಿಸಿದರು.

Vijaya Karnataka Web 4 Mar 2019, 5:25 pm
ಬೆಂಗಳೂರು: ನಾನು ಭವಿಷ್ಯ, ಜ್ಯೋತಿಷ್ಯ, ಸಂಖ್ಯಾಶಾಸ್ತ್ರದ ಹಿಂದೆ ಹೋಗುವವನು ಅಲ್ಲ. ಆದರೆ ನಮ್ಮ ಕುಟುಂಬದವರು ಇದನ್ನು ನಂಬುತ್ತಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
Vijaya Karnataka Web ಎಚ್‌ ಡಿ ಕುಮಾರಸ್ವಾಮಿ
ಎಚ್‌ಡಿ ಕುಮಾರಸ್ವಾಮಿ


ಕರ್ನಾಟಕ ಮುನ್ನಡೆ - ಸಮಾಜದ ವಿವಿಧ ಕ್ಷೇತ್ರಗಳ ಪರಿಣಿತರೊಂದಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂವಾದ ನಡೆಸಿದರು.

ರಾಜ್ಯ ಮೈತ್ರಿ ಸರ್ಕಾರದ ಸಾಧನೆಗಳ ಬಗ್ಗೆ ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್‌ಡಿ ಕುಮಾರಸ್ವಾಮಿ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರು.

ನಾನು ಭವಿಷ್ಯ, ಜ್ಯೋತಿಷ್ಯದ ಹಿಂದೆ ಹೋಗುವವನಲ್ಲ.ಆದರೆ ನಮ್ಮ ಕುಟುಂಬ ವರ್ಗದವರು ನಂಬುತ್ತಾರೆ. ನಮ್ಮ ತಂದೆ ಗ್ರಾಮೀಣಭಾಗದಿಂದ ಬಂದವರು. ಅವರಿಗೆ ನಂಬಿಕೆ ಹೆಚ್ಚು‌ ಎಂದು ತಿಳಿಸಿದರು.

ಮೈಸೂರು ಅರಸರ ಜ್ಯೋತಿಷಿ ಒಬ್ಬರು ಹೇಳಿದ ಭವಿಷ್ಯದಿಂದ ಅವರಿಗೆ ಒಳ್ಳೆಯದಾಗಿದೆ. ಹಾಗಾಗಿ ಅವರು ನಂಬಿಕೊಂಡು ಮುಂದುವರಿಸಿದ್ದಾರೆ. ನಾನು ದೇವರನ್ನು ನಂಬುತ್ತೇನೆ‌. 38-78 ಸಂಖ್ಯಾಶಾಸ್ತ್ರವನ್ನು ನಂಬಲ್ಲ ಎಂದು ಎಚ್‌ಡಿಕೆ ತಿಳಿಸಿದರು.

ಪ್ರತಿಬಾರಿಯೂ ಗಡುವಿನಲ್ಲೇ ಸರ್ಕಾರ ನಡೆಸುವ ಪರಿಸ್ಥಿತಿ ಇದೆ‌. ಆದದೆ ನಮ್ಮ ಸರಕಾರದ ಒಳ್ಳೆಯ ಕೆಲಸಗಳ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ಸಿಗುತ್ತಿಲ್ಲ ಎಂಬ ಬೇಸರವಿದೆ ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ