ಆ್ಯಪ್ನಗರ

'ಸಿವಿಲ್‌ ಪೊಲೀಸ್ ವಾರ್ಡನ್' ಆಗಲು ಬೆಂಗಳೂರಿನ ಯುವಜನತೆಗೆ ಪೊಲೀಸ್ ಕಮಿಷನರ್ ಆಹ್ವಾನ!

ಕೊರೊನಾ ನಿಯಂತ್ರಣ ಹಾಗೂ ಕೊರೊನಾ ನಿಯಮಗಳನ್ನ ಜಾರಿಗೊಳಿಸುವ ನಿಟ್ಟಿನಲ್ಲಿ ಬೆಂಗಳೂರಿನ ದೈಹಿಕವಾಗಿ ಸದೃಢ ಹಾಗೂ ಸೇವಾ ಮನಸ್ಸಿನ ನಿವಾಸಿಗಳನ್ನ ಸಿವಿಲ್‌ ಪೊಲೀಸ್‌ ವಾರ್ಡನ್‌ಗಳಾಗಿ ಕಾರ್ಯನಿರ್ವಹಿಸಲು ಆಹ್ವಾನಿಸಿರುವುದಾಗಿ ಬೆಂಗಳೂರು ನಗರದ ಕಮೀಷನರ್‌ ಭಾಸ್ಕರ್‌ ರಾವ್‌ ತಿಳಿಸಿದ್ದಾರೆ

Vijaya Karnataka Web 15 Jul 2020, 9:26 am
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಂಗು ಲಗಾಮು ಇಲ್ಲದೆ ಓಡುತ್ತಿದೆ. ಸದ್ಯ ಕೊರೊನಾ ನಿಯಂತ್ರಣ ಸರಕಾರಕ್ಕೆ ಅತೀ ದೊಡ್ಡ ಸವಾಲಾಗಿ ಬಿಟ್ಟಿದೆ. ಸದ್ಯ ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿಯಿಂದ ಲಾಕ್‌ಡೌನ್‌ ಜಾರಿ ಇದೆ. ಈ ಹಿನ್ನೆಲೆ ಸಿವಿಲ್‌ ಪೊಲೀಸ್ ವಾರ್ಡನ್ ಆಗಲು ಬೆಂಗಳೂರಿನ ಯುವಜನತೆಗೆ ಪೊಲೀಸ್ ಕಮಿಷನರ್ ಆಹ್ವಾನ ನೀಡಿದ್ದಾರೆ.
Vijaya Karnataka Web 71211969


ಈ ಬಗ್ಗೆ ಟ್ವೀಟ್‌ ಮಾಡಿರುವ ಬೆಂಗಳೂರು ನಗರದ ಕಮೀಷನರ್‌ ಭಾಸ್ಕರ್‌ ರಾವ್‌, ಕೊರೊನಾ ನಿಯಂತ್ರಣ ಹಾಗೂ ಕೊರೊನಾ ನಿಯಮಗಳನ್ನ ಜಾರಿಗೊಳಿಸುವ ನಿಟ್ಟಿನಲ್ಲಿ ಬೆಂಗಳೂರಿನ ದೈಹಿಕವಾಗಿ ಸದೃಢ ಹಾಗೂ ಸೇವಾ ಮನಸ್ಸಿನ ನಿವಾಸಿಗಳನ್ನ ಸಿವಿಲ್‌ ಪೊಲೀಸ್‌ ವಾರ್ಡನ್‌ಗಳಾಗಿ ಕಾರ್ಯನಿರ್ವಹಿಸಲು ಆಹ್ವಾನಿಸಿರುವುದಾಗಿ ತಿಳಿಸಿದ್ದಾರೆ. 18 ರಿಂದ 45 ವರ್ಷದೊಳಗಿನ ಪುರುಷರು ಮತ್ತು ಮಹಿಳೆಯರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಬಹುದು ಎಂದು ರಾವ್‌ ತಿಳಿಸಿದ್ದಾರೆ.


ರಾಜ್ಯದಲ್ಲಿ ಕೊರೊನಾ ಎಲ್ಲೆ ಮೀರಿ ಚಲಿಸುತ್ತಿದ್ದು ಕೊರೊನಾ ವಾರಿಯರ್ಸ್‌ಗಳಾದ ಪೊಲೀಸರನ್ನು ಕೊರೊನಾ ಬೆಂಬಿಡದೆ ಕಾಡುತ್ತಿದ್ದು. ಈ ನಿಟ್ಟಿನಲ್ಲಿ ಸದ್ಯ ಪೊಲೀಸರಿಗೆ ಜನರ ಸೇವೆಯ ಅವಶ್ಯಕತೆ ಇದ್ದು, ಈ ಹಿನ್ನೆಲೆ ಸ್ವತಃ ಕಮೀಷನರ್ ಅವರೇ ಬೆಂಗಳೂರಿನ ನಿವಾಸಿಗಳನ್ನ ಸಿವಿಲ್‌ ಪೊಲೀಸ್‌ ವಾರ್ಡನ್‌ ಆಗಿ ಸೇವೆ ಮಾಡುವಂತೆ ಕೇಳಿಕೊಂಡಿದ್ದಾರೆ.
ನಗರದಲ್ಲಿ 21 ಸಾವಿರ ಗಡಿ ತಲುಪಿದ ಕೊರೊನಾ ಪ್ರಕರಣ: ಪಾಲಿಕೆ ಅಧಿಕಾರಿಗಳಿಂದ ಸಾಮೂಹಿಕ ರಜೆ ಹಾಕುವ ಎಚ್ಚರಿಕೆ

ಸಂಭಾವನೆ ಇಲ್ಲ!

ಇನ್ನು ಕೊರೊನಾ ನಿಯಂತ್ರಣಕ್ಕಾಗಿ ನಾಗಿರಕ ಪೊಲೀಸ್‌ ವಾರ್ಡನ್‌ಗಳಾಗಿ ಸ್ವಯಂ ಸೇವೆ ಸಲ್ಲಿಸುತ್ತಿರುವ ಬೆಂಗಳೂರಿನ ನಿವಾಸಿಗಳಿಗೆ ಸಂಭಾವನೆ ನೀಡಲಾಗುತ್ತಿಲ್ಲ ಎಂದು ಬೆಂಗಳೂರು ಸಿಟಿ ಪೊಲೀಸರು ಸ್ಪಷ್ಟೀಕರಣ ನೀಡಿದ್ದಾರೆ. ಸಂಭಾವನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಯಾವುದೇ ಸಂಭಾವನೆ ನೀಡಲಾಗುತ್ತಿಲ್ಲ ಎಂದು ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ