ಆ್ಯಪ್ನಗರ

ಬೆಂಗಳೂರು ಜಲ ಕ್ಷಾಮ: ಅಂತರ್ಜಲಕ್ಕೆ ಕಂಟಕವಾದ ನಗರದ ಕಾಂಕ್ರೀಟೀಕರಣ

ಈಗಲಾದರೂ ಕಾಂಕ್ರೀಟೀಕರಣಕ್ಕೆ ಕಡಿವಾಣ ಹಾಕದಿದ್ದರೆ ಬೆಂಗಳೂರು ನೀರಿಲ್ಲದ ದಿನಗಳನ್ನು ಎದುರಿಸುವ ದಿನಗಳು ಹತ್ತಿರವಿದೆ ಎಂದರ್ಥ.

Agencies 1 Jul 2019, 12:19 pm
ಉದ್ಯಾನವನಗಳ ನಗರ, ಕೆರೆಗಳ ನಗರ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರು ನಗರ ಒಂದು ಕಾಲಕ್ಕೆ ಹಸಿರಿನಿಂದ ಕಂಗೊಳಿಸುತ್ತಿತ್ತು. ಆದರೆ ದಶಕಗಳಿಂದೀಚೆಗೆ ಕಾಂಕ್ರೀಟ್ ಕಾಡಾಗಿ ಪರಿವರ್ತನೆಯಾಗಿದೆ. ಸಂಪೂರ್ಣ ನಗರದ ಭೂಮಿ ಕಾಂಕ್ರೀಟ್ ಮೆತ್ತಿಕೊಂಡಿದ್ದು, ಪರಿಣಾಮ ಮಳೆಗಾಲದಲ್ಲಿ ನೀರು ಸರಾಗವಾಗಿ ಸಾಗಲು ಜಾಗವಿಲ್ಲದಂತಾಗಿರುವುದು ಮಾತ್ರವಲ್ಲ, ನೀರು ಇಂಗಲು ಮಣ್ಣ ಭೂಮಿಯೇ ಇಲ್ಲದೆ ಅಂತರ್ಜಲ ಮಟ್ಟ ಕುಸಿದು ಹೋಗಿದೆ.
Vijaya Karnataka Web ಅಂತರ್ಜಲಕ್ಕೆ ಕಂಟಕವಾದ ನಗರದ ಕಾಂಕ್ರೀಟೀಕರಣ


ಮೇಲ್ಸೇತುವೆ, ಕೆಳ ಸೇತುವೆ, ಟೆಂಡರ್ ಶ್ಯೂರ್ ರಸ್ತೆ, ಸೇರಿದಂತೆ ಕಳೆದೆರಡು ವರ್ಷಗಳಲ್ಲಿ ನಗರದಲ್ಲಿ ಅತಿ ಹೆಚ್ಚು ಕಾಂಕ್ರೀಟ್ ಸಂಬಂಧಿ ಯೋಜನೆಗಳು ಕಾರ್ಯರೂಪಕ್ಕೆ ಬಂದಿವೆ. ಚರಂಡಿ, ರಾಜ ಕಾಲುವೆ ಸೇರಿದಂತೆ ಕಾಲುವೆಗಳನ್ನು ಸಹ ಕಾಂಕ್ರೀಟೀಕರಣ ಮಾಡಲಾಗುತ್ತಿದೆ. ರಸ್ತೆ ಗುಣಮಟ್ಟ ಉತ್ತಮ ಪಡಿಸುತ್ತೇವೆಂದು 29 ರಸ್ತೆಗಳನ್ನು (92.51 ಕಿ.ಮೀ) ಕಾಂಕ್ರೀಟ್ ರಸ್ತೆಗಳಾಗಿ ಪರಿವರ್ತನೆ ಮಾಡುವ ಕಾಮಗಾರಿ ನಡೆಯುತ್ತಿದೆ. ಈಗಾಗಲೇ 35 ಕಿಮೀ ಕಾಂಕ್ರೀಟೀಕರಣ ನಡೆಸಲಾಗಿದೆ. ಇದರಿಂದ ನೀರು ಇಂಗಲು ಜಾಗವಿಲ್ಲದಂತಾಗಿದೆ.

ಈಗಾಗಲೇ ನಗರದಲ್ಲಿರುವ ಕೊಳವೆ ಬಾವಿಗಳು ಇಂಗಿ ಹೋಗುತ್ತಿದ್ದು, ಇನ್ನು ಕೆಲವು ವರ್ಷಗಳಲ್ಲಿ ಕೊಳವೆ ಬಾವಿಗಳು ಸಂಪೂರ್ಣವಾಗಿ ಬರಿದಾಗುವುದರಲ್ಲಿ ಸಂದೇಹವಿಲ್ಲ.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಸರಾಸರಿ 9.16 ಅಡಿ ಕುಸಿದಿದೆ. ಸಿಲಿಕಾನ್ ಸಿಟಿಯ ಭೂಮಿಯ ಬಹುಭಾಗ ಕಾಂಕ್ರೀಟ್ನಿಂದ ಮುಚ್ಚಿ ಹೋಗಿರುವುದೇ ಇದಕ್ಕೆ ಕಾರಣ . ಅಭಿವೃದ್ಧಿ ಕಾಮಗಾರಿಗಳಿಂದಾಗಿ ನಗರದ ಶೇ.78 ಭೂಮಿಯ ಮೇಲ್ಪದರ ಕಾಂಕ್ರೀಟ್ನಿಂದ ಮುಚ್ಚಿರುವುದೇ ಅಂತರ್ಜಲ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ತಜ್ಞರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ