ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲೇ ಕೈ ಕೈ ಮಿಲಾಯಿಸಿಕೊಂಡ ಕಾಂಗ್ರೆಸ್ ನಾಯಕರು!
ನಾರಾಯಣ ಸ್ವಾಮಿ, ಮನೋಹರ್ ಕಡೆಯವರು ಬಿದರಹಳ್ಳಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅದರಲ್ಲಿ ಅಧ್ಯಕ್ಷ , ಉಪಾಧ್ಯಕ್ಷ ವಿಚಾರದಲ್ಲಿ ಏರು ಧ್ವನಿಯಲ್ಲಿ ಮಾತಾಡಿರಬಹುದು. ಮಹಾದೇವಪುರ ಕ್ಷೇತ್ರದ ಚುನಾವಣೆ ವಿಚಾರ ಇದು. ಯಾವುದೇ ಹಲ್ಲೆಯಾಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸ್ಪಷ್ಟಪಡಿಸಿದ್ದಾರೆ.
Vijaya Karnataka Web 23 Jan 2021, 7:45 am
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ಇಬ್ಬರು ನಾಯಕರು ಕೈಕೈ ಮಿಲಾಯಿಸಿದ ಘಟನೆ ಶುಕ್ರವಾರ ನಡೆದಿದೆ. ಆದರೆ ಅಂತಹ ಘಟನೆ ನಡೆದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆ ಬಗ್ಗೆ ಚರ್ಚೆಯಾಗುತ್ತಿತ್ತು.
ಆಪರೇಷನ್ ಕಮಲದ ವಿಚಾರದ ಬಗ್ಗೆಯೂ ಚರ್ಚೆ ನಡೆಯುತ್ತಿದ್ದಾಗ ಕ್ಷುಲ್ಲಕ ವಿಷಯದಲ್ಲಿ ಎಂಎಲ್ಸಿ ನಾರಾಯಣ ಸ್ವಾಮಿ ಹಾಗೂ ಕಾಂಗ್ರೆಸ್ನ ರಾಜಾಜಿನಗರ ಮುಖಂಡ ಮನೋಹರ್ ಏರುಧ್ವನಿಯಲ್ಲಿ ಮಾತನಾಡುತ್ತ ಕೈಕೈ ಮಿಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.
''ನಾರಾಯಣ ಸ್ವಾಮಿ, ಮನೋಹರ್ ಕಡೆಯವರು ಬಿದರಹಳ್ಳಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅದರಲ್ಲಿ ಅಧ್ಯಕ್ಷ , ಉಪಾಧ್ಯಕ್ಷ ವಿಚಾರದಲ್ಲಿ ಏರು ಧ್ವನಿಯಲ್ಲಿ ಮಾತಾಡಿರಬಹುದು. ಮಹಾದೇವಪುರ ಕ್ಷೇತ್ರದ ಚುನಾವಣೆ ವಿಚಾರ ಇದು. ಯಾವುದೇ ಹಲ್ಲೆಯಾಗಿಲ್ಲ,'' ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸ್ಪಷ್ಟಪಡಿಸಿದ್ದಾರೆ.
₹50 ಸಾವಿರ ದಂಡ ಕಟ್ಟಲು ವಿಫಲ; ವಾಟಾಳ್ ನಾಗರಾಜ್ ವಿರುದ್ಧ ಎಫ್ಐಆರ್..!
ನಾರಾಯಣ ಸ್ವಾಮಿ ಮೇಲೆ ಹಲ್ಲೆ ಮಾಡಲು ನನಗೂ ಅವರಿಗೂ ಏನು ಸಂಬಂಧ. ನಾವು ಕಾರ್ಯಾಧ್ಯಕ್ಷರು ಬರ್ತಾರೆ ಅಂತಾ ಜನ ಸೇರಿಸಿದ್ವಿ. ಬೇರೆ ಕಾರ್ಯಕ್ರಮಕ್ಕೆ ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಸನ್ಮಾನಕ್ಕೆ ಜನ ಬಂದಿದ್ದರು. ಆಗ ಸ್ವಲ್ಪ ಗೊಂದಲ ಏರ್ಪಟ್ಟಿತ್ತು,'' ಎಂದು ಮನೋಹರ್ ಹೇಳಿದ್ದಾರೆ.
ಆಪರೇಷನ್ ಕಮಲದ ವಿಚಾರದ ಬಗ್ಗೆಯೂ ಚರ್ಚೆ ನಡೆಯುತ್ತಿದ್ದಾಗ ಕ್ಷುಲ್ಲಕ ವಿಷಯದಲ್ಲಿ ಎಂಎಲ್ಸಿ ನಾರಾಯಣ ಸ್ವಾಮಿ ಹಾಗೂ ಕಾಂಗ್ರೆಸ್ನ ರಾಜಾಜಿನಗರ ಮುಖಂಡ ಮನೋಹರ್ ಏರುಧ್ವನಿಯಲ್ಲಿ ಮಾತನಾಡುತ್ತ ಕೈಕೈ ಮಿಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.
''ನಾರಾಯಣ ಸ್ವಾಮಿ, ಮನೋಹರ್ ಕಡೆಯವರು ಬಿದರಹಳ್ಳಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅದರಲ್ಲಿ ಅಧ್ಯಕ್ಷ , ಉಪಾಧ್ಯಕ್ಷ ವಿಚಾರದಲ್ಲಿ ಏರು ಧ್ವನಿಯಲ್ಲಿ ಮಾತಾಡಿರಬಹುದು. ಮಹಾದೇವಪುರ ಕ್ಷೇತ್ರದ ಚುನಾವಣೆ ವಿಚಾರ ಇದು. ಯಾವುದೇ ಹಲ್ಲೆಯಾಗಿಲ್ಲ,'' ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸ್ಪಷ್ಟಪಡಿಸಿದ್ದಾರೆ.
₹50 ಸಾವಿರ ದಂಡ ಕಟ್ಟಲು ವಿಫಲ; ವಾಟಾಳ್ ನಾಗರಾಜ್ ವಿರುದ್ಧ ಎಫ್ಐಆರ್..!
ನಾರಾಯಣ ಸ್ವಾಮಿ ಮೇಲೆ ಹಲ್ಲೆ ಮಾಡಲು ನನಗೂ ಅವರಿಗೂ ಏನು ಸಂಬಂಧ. ನಾವು ಕಾರ್ಯಾಧ್ಯಕ್ಷರು ಬರ್ತಾರೆ ಅಂತಾ ಜನ ಸೇರಿಸಿದ್ವಿ. ಬೇರೆ ಕಾರ್ಯಕ್ರಮಕ್ಕೆ ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಸನ್ಮಾನಕ್ಕೆ ಜನ ಬಂದಿದ್ದರು. ಆಗ ಸ್ವಲ್ಪ ಗೊಂದಲ ಏರ್ಪಟ್ಟಿತ್ತು,'' ಎಂದು ಮನೋಹರ್ ಹೇಳಿದ್ದಾರೆ.