ಆ್ಯಪ್ನಗರ

ಕಲ್ಯಾಣ ಮಂಟಪದ ಮಾಲೀಕರಿಗೆ 1.5 ಲಕ್ಷ ರೂ. ಮರುಪಾವತಿಸುವಂತೆ ಗ್ರಾಹಕ ನ್ಯಾಯಾಲಯ ಆದೇಶ

ವಧುವಿನ ಅಜ್ಜಿ ಮೃತಪಟ್ಟರು ಎಂಬ ಕಾರಣಕ್ಕೆ ಮದುವೆ ರದ್ದಾಗಿದ್ದರೂ ಮುಂಗಡವಾಗಿ ಪಾವತಿಸಿದ್ದ ಹಣ ವಾಪಸ್‌ ನೀಡಲು ನಿರಾಕರಿಸಿದ್ದ ಕಲ್ಯಾಣ ಮಂಟಪದ ಮಾಲೀಕರಿಗೆ 1.5 ಲಕ್ಷ ರೂ. ಮರುಪಾವತಿ ಮಾಡಲು ಗ್ರಾಹಕ ನ್ಯಾಯಾಲಯ ಆದೇಶಿಸಿದೆ.

Vijaya Karnataka Web 29 Sep 2020, 10:28 pm
ಬೆಂಗಳೂರು: ವಧುವಿನ ಅಜ್ಜಿ ಮೃತಪಟ್ಟರು ಎಂಬ ಕಾರಣಕ್ಕೆ ಮದುವೆ ರದ್ದಾಗಿದ್ದರೂ ಮುಂಗಡವಾಗಿ ಪಾವತಿಸಿದ್ದ ಹಣ ವಾಪಸ್‌ ನೀಡಲು ನಿರಾಕರಿಸಿದ್ದ ಕಲ್ಯಾಣ ಮಂಟಪದ ಮಾಲೀಕರಿಗೆ 1.5 ಲಕ್ಷ ರೂ. ಮರುಪಾವತಿ ಮಾಡಲು ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
Vijaya Karnataka Web marriage


ಮೂರನೇ ಹೆಚ್ಚುವರಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ನ್ಯಾಯಾಲಯ, ಹಣ ಮರುಪಾವತಿ ಜತೆಗೆ 30 ಸಾವಿರ ರೂ. ಪರಿಹಾರ ನೀಡುವಂತೆಯೂ ಆದೇಶಿಸಿದೆ. ಮಗಳ ಮದುವೆಗೆ ತಂದೆ ಎದುರಿಸುತ್ತಿದ್ದ ಆರ್ಥಿಕ ಸಂಕಷ್ಟವನ್ನು ಮನಗಂಡು ಗ್ರಾಹಕ ನ್ಯಾಯಾಲಯ ಈ ಆದೇಶ ನೀಡಿದೆ.

ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಕಲ್ಯಾಣ ಮಂಟಪದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿತು. ಅಕಾಲಿಕ ಮರಣದ ಕಾರಣ ಪುತ್ರಿಯ ವಿವಾಹ ಸ್ಥಗಿತಗೊಂಡಿದೆ. ಆದರೆ, ಹಣವನ್ನು ಮರುಪಾವತಿಸದೇ ಇರುವುದು ಸರಿಯಲ್ಲ. ಮಾನವೀಯತೆಯ ದೃಷ್ಟಿಯಿಂದ ಹಣ ವಾಪಸ್‌ ನೀಡಬೇಕೆಂದು ಆದೇಶಿಸಿದೆ.

ಬಾಣಲೆಯಿಂದ ಬೆಂಕಿಗೆ ಬಿದ್ದನೇ ರೈತ? ಕೃಷಿ ಮಸೂದೆಗಳು ರೈತರ ಮರಣ ಶಾಸನವೇ?

ಸೆಪ್ಟೆಂಬರ್‌ 3 ರಂದು ನೀಡಿರುವ ಆದೇಶದಲ್ಲಿ ಕೋರ್ಟ್‌, ನಾಗದೇವಕಿ ಪ್ಯಾಲೇಸ್‌ನ ಪ್ರೊಪ್ರೈಟರ್‌ಗೆ ಶೇ.10ರಷ್ಟು ಬಡ್ಡಿಯೊಂದಿಗೆ ದೂರುದಾರರಿಗೆ 1.5 ಲಕ್ಷ ರೂ. ಮರುಪಾವತಿ ಮಾಡಬೇಕು ಹಾಗೂ 25 ಸಾವಿರ ರೂ. ಪರಿಹಾರ ಮತ್ತು 5 ಸಾವಿರ ರೂ. ಕೋರ್ಟ್‌ ವೆಚ್ಚವನ್ನು 45 ದಿನಗಳಲ್ಲಿ ಪಾವತಿಸಬೇಕು ಎಂದು ಆದೇಶಿಸಿದೆ.

ಚಿಕ್ಕಪೇಟೆಯ ಎನ್‌. ಚಂದ್ರರಾವ್‌ 2017ರ ಆಗಸ್ಟ್‌ನಲ್ಲಿ ತಮ್ಮ ಮಗಳು ನಿಖಿತಾಳ ಮದುವೆ ನಿಶ್ಚಯಿಸಿದ್ದರು. ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿರುವ ನಾಗದೇವಕಿ ಪ್ಯಾಲೇಸ್‌ನಲ್ಲಿ ಆಗಸ್ಟ್‌ 1 ಮತ್ತು 2ರಂದು ಮದುವೆ ನಡೆಸಲು 2017ರ ಮಾರ್ಚ್ 14ರಂದು 1.5 ಲಕ್ಷ ರೂ. ಪಾವತಿಸಿದ್ದರು. ಅದಾದ ಒಂದು ತಿಂಗಳೊಳಗೆ ವಧುವಿನ ಅಜ್ಜಿ ಮೃತಪಟ್ಟರು. ಹಾಗಾಗಿ ಮದುವೆ ಒಂದು ವರ್ಷ ಮುಂದೂಡಲ್ಪಟ್ಟಿತು.

ಉದ್ಯಾನಕ್ಕೆ ಬಂದವರನ್ನು ಅಶ್ಲೀಲ ಮಾತುಗಳಿಂದ ನಿಂದಿಸುವ ಗಿಳಿಗಳು!

ರಾವ್‌ ತಾವು ಪಾವತಿಸಿದ್ದ ಹಣ ಮರುಪಾವತಿಸುವಂತೆ ಕಲ್ಯಾಣ ಮಂಟಪದ ಮಾಲೀಕರನ್ನು ಕೋರಿದ್ದರು, ಆದರೆ ಅವರು ಒಂದು ಪೈಸೆಯನ್ನೂ ನೀಡುವುದಿಲ್ಲಎಂದು ನಿರಾಕರಿಸಿದ್ದರು. ರಾವ್‌ ತಮ್ಮ ಕಷ್ಟವನ್ನು ಹೇಳಿಕೊಂಡರೂ ಕಲ್ಯಾಣ ಮಂಟಪದ ಸಿಬ್ಬಂದಿ ಸ್ಪಂದಿಸಲಿಲ್ಲ. ಹಾಗಾಗಿ, 2017ರ ಜುಲೈ 6 ರಂದು ಚಂದ್ರರಾವ್‌ ನಾಗದೇವಕಿ ಪ್ಯಾಲೇಸ್‌ನ ಪ್ರೊಪ್ರೈಟರ್‌ ನಾಗರಾಜ್‌ ಮತ್ತು ಮ್ಯಾನೇಜರ್‌ ಚಂದ್ರಶೇಖರ್‌ ವಿರುದ್ಧ ದೂರು ದಾಖಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ