ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುವ ಜತೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬರುವವರ ಸಂಖ್ಯೆ ಹೆಚ್ಚುತ್ತಿರುವುದು ಕೊಂಚ ಸಮಾಧಾನ ಮೂಡಿಸಿದೆ. ಮೇ 1ರಂದು 18,341 ಮಂದಿ ಆಸ್ಪತೆಯಿಂದ ಬಿಡುಗಡೆಯಾಗಿದ್ದರು. ಮೇ 2ರ ಬಳಿಕ ನಿತ್ಯವೂ 20,000 ಕ್ಕೂ ಹೆಚ್ಚು ರೋಗಿಗಳು ಬಿಡುಗಡೆಯಾಗಿದ್ದಾರೆ. ಮೇ 12ರಂದು 34,752 ಮಂದಿ ಬಿಡುಗಡೆಯಾಗಿದ್ದಾರೆ. ಮೇ 13ರಂದು 16,084 ಮಂದಿ ಚೇತರಿಸಿಕೊಂಡಿದ್ದಾರೆ.
ಭಯದಿಂದ ಆಸ್ಪತ್ರೆಯಲ್ಲೇ ವಾಸ್ತವ್ಯ: ಕಷ್ಟಪಟ್ಟು ಬೆಡ್ ಪಡೆದುಕೊಂಡ ಬಹಳಷ್ಟು ಸೋಂಕಿತರು, ಮನೆಗೆ ತೆರಳಿದ ನಂತರ ಮತ್ತೇನಾದರೂ ಸಮಸ್ಯೆ ಎದುರಾದರೆ ಮತ್ತೆ ಆಸ್ಪತ್ರೆಯಲ್ಲಿ ಬೆಡ್ ಸಿಗುವುದು ಕಷ್ಟ. ಎಷ್ಟು ಸಾಧ್ಯವೋ ಅಷ್ಟು ಗುಣಪಡಿಸಿಕೊಂಡು ಹೋಗುವುದೇ ಒಳಿತು ಎನ್ನುವ ನಿರ್ಧಾರದಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈದ್ಯರು ಡಿಸ್ಚಾರ್ಜ್ ಆಗುವಂತೆ ಸೂಚಿಸಿದ್ದರೂ ಗುಣಮುಖರಾದ ಕೆಲವರು 20-30 ದಿನಗಳಿಂದ ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಚಿಕಿತ್ಸೆಗೆ ತೊಂದರೆಯಾಗುತ್ತಿದೆ. ಇದನ್ನು ಗಮನಿಸಿ ಹಲವು ಆಸ್ಪತ್ರೆಗಳಲ್ಲಿ ಅನಾವಶ್ಯಕವಾಗಿ ಆಸ್ಪತ್ರೆಯಲ್ಲಿ ಇರುವ ರೋಗಿಗಳನ್ನು ಮನೆಗೆ ಕಳುಹಿಸಲಾಗುತ್ತಿದೆ.
ಮೂಲಗಳ ಪ್ರಕಾರ, 1ರಿಂದ 10 ದಿನ ಆಗಿರುವ 6,500, 11 ರಿಂದ 20 ದಿನ ಆಗಿರುವ 1,900, 20 ದಿನ ಮೀರಿದ 503, 30 ದಿನ ಮೀರಿದ 337 ರೋಗಿಗಳು ಸೇರಿದಂತೆ ಒಟ್ಟು 9,242 ಮಂದಿ ಆಸ್ಪತ್ರೆಗಳಲ್ಲಿಇದ್ದಾರೆ.
ರೋಗಿಗಳ ಬಿಡುಗಡೆಗೆ ಸಿಎಂ ಸೂಚನೆ: ಖುದ್ದು ಸಿಎಂ ಕೂಡ ಈ ಬೆಳವಣಿಗೆ ಗಮನಿಸಿ ಬೇಸರ ವ್ಯಕ್ತಪಡಿಸಿದ್ದರು. ಬಹಳ ದಿನದಿಂದ ಆಸ್ಪತ್ರೆಯಲ್ಲಿರುವವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದರು.
ಸಿಲಿಕಾನ್ ಸಿಟಿಯಲ್ಲಿ ಸೋಂಕು ಪತ್ತೆ ಪ್ರಮಾಣವು ಶೇ 38.57ಕ್ಕೆ ಏರಿಕೆಯಾಗಿದ್ದು, ಮರಣ ದರವು ಶೇ 1.08ರಷ್ಟಿದೆ. ಪಾಲಿಕೆಯ 133 ವಾರ್ಡ್ಗಳಲ್ಲಿ ತಲಾ 500ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿವೆ. ಹೊರವಲಯದ ಮಹದೇವಪುರದಲ್ಲಿ ಅತ್ಯಧಿಕ 31,436, ಬೊಮ್ಮನಹಳ್ಳಿ ವಲಯದಲ್ಲಿ 31,160 ಸೋಂಕಿತರು ಕಂಡುಬಂದಿದ್ದಾರೆ.
ಭಯದಿಂದ ಆಸ್ಪತ್ರೆಯಲ್ಲೇ ವಾಸ್ತವ್ಯ: ಕಷ್ಟಪಟ್ಟು ಬೆಡ್ ಪಡೆದುಕೊಂಡ ಬಹಳಷ್ಟು ಸೋಂಕಿತರು, ಮನೆಗೆ ತೆರಳಿದ ನಂತರ ಮತ್ತೇನಾದರೂ ಸಮಸ್ಯೆ ಎದುರಾದರೆ ಮತ್ತೆ ಆಸ್ಪತ್ರೆಯಲ್ಲಿ ಬೆಡ್ ಸಿಗುವುದು ಕಷ್ಟ. ಎಷ್ಟು ಸಾಧ್ಯವೋ ಅಷ್ಟು ಗುಣಪಡಿಸಿಕೊಂಡು ಹೋಗುವುದೇ ಒಳಿತು ಎನ್ನುವ ನಿರ್ಧಾರದಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈದ್ಯರು ಡಿಸ್ಚಾರ್ಜ್ ಆಗುವಂತೆ ಸೂಚಿಸಿದ್ದರೂ ಗುಣಮುಖರಾದ ಕೆಲವರು 20-30 ದಿನಗಳಿಂದ ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಚಿಕಿತ್ಸೆಗೆ ತೊಂದರೆಯಾಗುತ್ತಿದೆ. ಇದನ್ನು ಗಮನಿಸಿ ಹಲವು ಆಸ್ಪತ್ರೆಗಳಲ್ಲಿ ಅನಾವಶ್ಯಕವಾಗಿ ಆಸ್ಪತ್ರೆಯಲ್ಲಿ ಇರುವ ರೋಗಿಗಳನ್ನು ಮನೆಗೆ ಕಳುಹಿಸಲಾಗುತ್ತಿದೆ.
ಮೂಲಗಳ ಪ್ರಕಾರ, 1ರಿಂದ 10 ದಿನ ಆಗಿರುವ 6,500, 11 ರಿಂದ 20 ದಿನ ಆಗಿರುವ 1,900, 20 ದಿನ ಮೀರಿದ 503, 30 ದಿನ ಮೀರಿದ 337 ರೋಗಿಗಳು ಸೇರಿದಂತೆ ಒಟ್ಟು 9,242 ಮಂದಿ ಆಸ್ಪತ್ರೆಗಳಲ್ಲಿಇದ್ದಾರೆ.
ರೋಗಿಗಳ ಬಿಡುಗಡೆಗೆ ಸಿಎಂ ಸೂಚನೆ: ಖುದ್ದು ಸಿಎಂ ಕೂಡ ಈ ಬೆಳವಣಿಗೆ ಗಮನಿಸಿ ಬೇಸರ ವ್ಯಕ್ತಪಡಿಸಿದ್ದರು. ಬಹಳ ದಿನದಿಂದ ಆಸ್ಪತ್ರೆಯಲ್ಲಿರುವವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದರು.
ಸಿಲಿಕಾನ್ ಸಿಟಿಯಲ್ಲಿ ಸೋಂಕು ಪತ್ತೆ ಪ್ರಮಾಣವು ಶೇ 38.57ಕ್ಕೆ ಏರಿಕೆಯಾಗಿದ್ದು, ಮರಣ ದರವು ಶೇ 1.08ರಷ್ಟಿದೆ. ಪಾಲಿಕೆಯ 133 ವಾರ್ಡ್ಗಳಲ್ಲಿ ತಲಾ 500ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿವೆ. ಹೊರವಲಯದ ಮಹದೇವಪುರದಲ್ಲಿ ಅತ್ಯಧಿಕ 31,436, ಬೊಮ್ಮನಹಳ್ಳಿ ವಲಯದಲ್ಲಿ 31,160 ಸೋಂಕಿತರು ಕಂಡುಬಂದಿದ್ದಾರೆ.