ಆ್ಯಪ್ನಗರ

ಬೋರ್‌ ಆಗುತ್ತಿದೆ ಕಥೆ ಹೇಳಿ ಪ್ಲೀಸ್‌... ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ಗೆ ಮಕ್ಕಳಿಂದ ಫೋನ್‌ ಕಾಲ್‌!

ಕೊರೊನಾ ವೈರಸ್‌ ಸೋಂಕು ನಿವಾರಿಸಲು ಲಾಕ್‌ಡೌನ್‌ ಆಗಿರುವುದರಿಂದ ಎಲ್ಲರೂ ಮನೆಯಲ್ಲೇ ಇರಬೇಕಾಧ ಪರಿಸ್ಥಿತಿ ಬಂದಿದೆ. ಈ ಹಿನ್ನೆಲೆ ಮನೆಯಲ್ಲೇ ಕುಳಿತು ಬೋರಾದ ಮಕ್ಕಳು ಚೈಲ್ಡ್‌ ರೈಟ್ಸ್‌ಗೆ ಕರೆ ಮಾಡಿ ನಾನಾ ರೀತಿಯ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾರೆ.

Vijaya Karnataka Web 26 Apr 2020, 1:23 pm
ಎಚ್‌.ಪಿ. ಪುಣ್ಯವತಿ
Vijaya Karnataka Web boy phone call vk

ಬೆಂಗಳೂರು: ನಮಗೆ ಮನೆಯಲ್ಲಿ ಕುಳಿತು ಬೋರ್‌ ಆಗಿದೆ. ಪ್ಲೀಸ್‌ ಕಥೆ ಹೇಳಿ, ಜೋಕ್ಸ್‌ ಹೇಳಿ ಅಥವಾ ಹೊಸ ಆಟಗಳನ್ನು ಕಲಿಸಿಕೊಡಿ. ಕೊರೊನಾ ಎಂದರೇನು, ಶಾಲೆಗಳು ಯಾವಾಗ ಆರಂಭವಾಗುತ್ತವೆ? ಪರೀಕ್ಷೆಗಳು ಯಾವಾಗ ನಡೆಯುತ್ತವೆ....

ಹೀಗೆ ಹತ್ತಾರು ಕರೆಗಳು ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ಗೆ ನಿತ್ಯ ಮಕ್ಕಳಿಂದ ದೊರಕುತ್ತಿವೆ. ಇದರೊಂದಿಗೆ ‘‘ನಾನು ಶಾಲೆಯಲ್ಲಿದ್ದಾಗ ಸಿಗರೇಟ್‌ ಸೇದುವುದನ್ನು ಕಲಿತಿದ್ದೇನೆ. ಇದೀಗ ಸಿಗರೇಟು ಸಿಗದೆ ಕಾಲುಗಳು ನಡುಗುತ್ತಿವೆ, ಏನು ಮಾಡುವುದು’’ ಎಂಬ ಆತಂಕಕಾರಿ ಪ್ರಶ್ನೆಗಳ ಕರೆಗಳೂ ಬರುತ್ತಿವೆ. ಮಕ್ಕಳ ಇಂತಹ ಹತ್ತಾರು ಪ್ರಶ್ನೆಗಳಿಗೆ ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ನ ನಿರ್ದೇಶಕ ನಾಗಸಿಂಹ ಜಿ. ರಾವ್‌ ಅತ್ಯಂತ ಸಮಾಧಾನದಿಂದ ಉತ್ತರಿಸುತ್ತಾರೆ.

‘‘ಆರ್‌ಟಿಇ, ಮಕ್ಕಳ ದುರುಪಯೋಗ, ಬಾಲಕಾರ್ಮಿಕ ಪದ್ಧತಿ ಮುಂತಾದ ಮಕ್ಕಳ ಸಮಸ್ಯೆಗಳಿಗೆ ನೂರಾರು ಪೋಷಕರು ನನ್ನ ಮೊಬೈಲ್‌ಗೆ ಮೊದಲಿನಿಂದಲೂ ಕರೆ ಮಾಡುತ್ತಿದ್ದರು. ಮಕ್ಕಳು ಕೂಡ ತಮ್ಮ ಪರೀಕ್ಷೆ, ಆತಂಕ, ಭಯ ಈ ವಿಚಾರವಾಗಿ ಕರೆ ಮಾಡುತ್ತಿದ್ದರು. ಕೊರೊನಾ ಲಾಕ್‌ಡೌನ್‌ ನಂತರ ಮೊದಲ ವಾರದಲ್ಲಿ ಸರಕಾರೇತರ ಶಾಲೆಗಳಲ್ಲಿ ಹೆಚ್ಚಿನ ಫೀ ಕೇಳುತ್ತಿರುವ ಕುರಿತು ಪೋಷಕರಿಂದ ದೂರಿನ ಕರೆಗಳು ಬರುತ್ತಿದ್ದವು. ನಂತರ ಕೊರೊನಾ ಅಂದರೇನು ? ಯಾಕೆ ಬರುತ್ತದೆ ಎಂಬ ವಿಚಾರದ ಬಗ್ಗೆ ಕೆಲವು ಮಕ್ಕಳು ಕರೆ ಮಾಡುತ್ತಿದ್ದರು. ಎರಡನೇ ವಾರದಲ್ಲಿ ಮಕ್ಕಳ ಕರೆಗಳು ಹೆಚ್ಚಿದ ಕಾರಣ ಸಮಯ ನಿಗದಿ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಹಾಗಾಗಿ ಮಧ್ಯಾಹ್ನ 2ರಿಂದ 5ರವರೆಗೆ ಮಕ್ಕಳಿಗೆ ಮಾಹಿತಿ, ಆಪ್ತ ಸಮಾಲೋಚನೆ, ಕಥೆ ಹೇಳುವ ಸಮಯ ಎಂದು ನಿಗದಿಪಡಿಸಿ ಕೆಲವು ಶಾಲೆಗಳ ಶಿಕ್ಷಕರಿಗೆ ಕಳಿಸಿದೆ,’’ ಎಂದು ನಾಗಸಿಂಹ ತಿಳಿಸಿದರು.

ಅಕ್ಷಯ ತೃತೀಯದಂದು ಬಂಗಾರ ಖರೀದಿ ಮಾಡ್ತಿದ್ದೀರಾ? ಚಿನ್ನ, ಬೆಳ್ಳಿ ದರ ಹೀಗಿದೆ ನೋಡಿ..

ಹೆಚ್ಚಿನ ಮಾಹಿತಿಗೆ: 9880477198

ಲಾಕ್‌ಡೌನ್‌ನ ಹೊಸ ಸಮಸ್ಯೆ ಸ್ಲೀಪಿಂಗ್‌ ಸಿಂಡ್ರೋಂ: ಕೆಲವರಿಗೆ ಕೈ ತುಂಬಾ ಕೆಲಸ, ಉಳಿದವರಿಗೆ ಬೋರು!

ಮಕ್ಕಳ ಹಕ್ಕುಗಳ ರಕ್ಷಿಸಿ
‘‘ವಿಶ್ವಸಂಸ್ಥೆಯ ಅಂಕಿ ಅಂಶಗಳ ಪ್ರಕಾರ, ಇಡೀ ಪ್ರಪಂಚದಲ್ಲಿ ಅಂದಾಜು 1.25 ಬಿಲಿಯನ್‌ ಮಕ್ಕಳು ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಇದ್ದಾರೆ. 124 ದೇಶಗಳು ಎಲ್ಲಾ ರೀತಿಯ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿವೆ. ಮಕ್ಕಳ ಕಲಿಕೆಗೆ ಇದು ಬಹು ದೊಡ್ಡ ಪರಿಣಾಮ ಬೀರಬಹುದು. ಹೀಗಾಗಿ, ಪೋಷಕರು ಮತ್ತು ಸರಕಾರಗಳು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದರ ಜತೆಗೆ ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕು,’’ ಎಂದು ನಾಗಸಿಂಹ ಜಿ. ರಾವ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ