ರವಿಕುಮಾರ ಬೆಟ್ಟದಪುರ
ಬೆಂಗಳೂರು: ಲಾಕ್ಡೌನ್ನಿಂದಾಗಿ ರಾಜಧಾನಿ ತೊರೆದು ತವರಿನತ್ತ ದೌಡಾಯಿಸಿದ ಯುವಕರು, ಕಾರ್ಮಿಕರಲ್ಲಿ ಹೆಚ್ಚಿನವರು ತಮ್ಮೂರಿನಲ್ಲೇ ಬೇರೆ ಉದ್ಯೋಗ ಹುಡುಕಿಕೊಳ್ಳುವ ಸಾಧ್ಯತೆಗಳಿವೆ. ಹಳ್ಳಿ ತೊರೆದು ನಗರಕ್ಕೆ ಬಂದವರಲ್ಲಿ ಕೃಷಿ ಕುಟುಂಬ, ಕೃಷಿ ಕೆಲಸದ ಹಿನ್ನೆಲೆ ಇರುವವರ ಸಂಖ್ಯೆಯೂ ದೊಡ್ಡದಿದೆ. ಇವರಲ್ಲಿ ದೊಡ್ಡ ಸಂಖ್ಯೆಯ ಜನರು ಮುಂಗಾರಿನಿಂದಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಉತ್ಸುಕತೆ ತೋರಿದ್ದಾರೆ.
ರಾಜ್ಯದ ನಾನಾ ಕಡೆಯಿಂದ ಲಕ್ಷಾಂತರ ಮಂದಿ ಬೆಂಗಳೂರಿನ ನಾನಾ ವಲಯಗಳಲ್ಲಿ ಉದ್ಯೋಗ ಕಂಡುಕೊಂಡಿದ್ದರು. ಬೇಕರಿ, ಹೋಟೆಲ್, ಫ್ಯಾಕ್ಟರಿಗಳು ಹಾಗೂ ಕಟ್ಟಡ ಕಾರ್ಮಿಕರಾಗಿ ಜೀವನ ನಡೆಸುತ್ತಿದ್ದರು. ಆದರೆ, ಲಾಕ್ಡೌನ್ ಹೊಡೆತದಿಂದ ಸಣ್ಣಪುಟ್ಟ ಉದ್ಯಮಗಳು ಸಂಪೂರ್ಣವಾಗಿ ನೆಲೆ ಕಚ್ಚಿವೆ. ಹಲವರು ಉದ್ಯೋಗ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಒಂದು ವೇಳೆ ಲಾಕ್ಡೌನ್ ತೆರವುಗೊಳಿಸಿದರೂ ಮೊದಲಿನಂತೆ ಉದ್ಯೋಗ, ಸಂಬಳ ನಿರೀಕ್ಷಿಸುವಂತಿಲ್ಲ. ಬೆಂಗಳೂರಿನ ಬದುಕು ದುಬಾರಿಯಾಗುವ ಆತಂಕವೂ ಇದೆ ಎಂಬುದು ಬೆಂಗಳೂರು ಬಿಟ್ಟ ಯುವಕರ ಮಾತಾಗಿದೆ.
ಬೆಂಗಳೂರು ಲಾಕ್ಡೌನ್ Live: ಹೋಟೆಲ್ ಕ್ವಾರಂಟೈನ್ ಒಪ್ಪದವರಿಗೆ ರಾಜ್ಯಕ್ಕೆ ಎಂಟ್ರಿ ಇಲ್ಲ!
‘‘ಪ್ರಸ್ತುತ ಪರಿಸ್ಥಿತಿಯಿಂದ ಬೆಂಗಳೂರು ಚೇತರಿಸಿಕೊಳ್ಳಲು ಕನಿಷ್ಟ ಒಂದು ವರ್ಷವಾದರೂ ಬೇಕು. ಹಾಗಾಗಿ ನಮ್ಮ ಊರುಗಳಲ್ಲೇ ಬದುಕಿನ ದಾರಿ ಹುಡುಕಿಕೊಳ್ಳಲು ನಿರ್ಧರಿಸಿದ್ದೇನೆ,’’ ಎನ್ನುತ್ತಾರೆ ಯಾದಗಿರಿಯ ಮಾಲಿಂಗ.
ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್, ಡೀಸೆಲ್ ದರ: ಇಂದಿನ ಬೆಲೆ ವಿವರ ಇಲ್ಲಿದೆ..
‘‘ವೈಜ್ಞಾನಿಕ ಕೃಷಿ ಉದ್ಯಮದಲ್ಲಿ ಲಾಭವಿದೆ. ಕೃಷಿ ಇಲಾಖೆಯಿಂದ ಮತ್ತಷ್ಟು ಮಾಹಿತಿ ಪಡೆದು ವ್ಯವಸಾಯದಲ್ಲಿ ತೊಡಗಿಸಿಕೊಳ್ಳಲು ಉದ್ದೇಶಿಸಿದ್ದೇನೆ,’’ ಎಂದು ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಸಿದ್ದೇಶ್ ಹೇಳಿದರು.
ಬೆಂಗಳೂರು: ಲಾಕ್ಡೌನ್ನಿಂದಾಗಿ ರಾಜಧಾನಿ ತೊರೆದು ತವರಿನತ್ತ ದೌಡಾಯಿಸಿದ ಯುವಕರು, ಕಾರ್ಮಿಕರಲ್ಲಿ ಹೆಚ್ಚಿನವರು ತಮ್ಮೂರಿನಲ್ಲೇ ಬೇರೆ ಉದ್ಯೋಗ ಹುಡುಕಿಕೊಳ್ಳುವ ಸಾಧ್ಯತೆಗಳಿವೆ. ಹಳ್ಳಿ ತೊರೆದು ನಗರಕ್ಕೆ ಬಂದವರಲ್ಲಿ ಕೃಷಿ ಕುಟುಂಬ, ಕೃಷಿ ಕೆಲಸದ ಹಿನ್ನೆಲೆ ಇರುವವರ ಸಂಖ್ಯೆಯೂ ದೊಡ್ಡದಿದೆ. ಇವರಲ್ಲಿ ದೊಡ್ಡ ಸಂಖ್ಯೆಯ ಜನರು ಮುಂಗಾರಿನಿಂದಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಉತ್ಸುಕತೆ ತೋರಿದ್ದಾರೆ.
ರಾಜ್ಯದ ನಾನಾ ಕಡೆಯಿಂದ ಲಕ್ಷಾಂತರ ಮಂದಿ ಬೆಂಗಳೂರಿನ ನಾನಾ ವಲಯಗಳಲ್ಲಿ ಉದ್ಯೋಗ ಕಂಡುಕೊಂಡಿದ್ದರು. ಬೇಕರಿ, ಹೋಟೆಲ್, ಫ್ಯಾಕ್ಟರಿಗಳು ಹಾಗೂ ಕಟ್ಟಡ ಕಾರ್ಮಿಕರಾಗಿ ಜೀವನ ನಡೆಸುತ್ತಿದ್ದರು. ಆದರೆ, ಲಾಕ್ಡೌನ್ ಹೊಡೆತದಿಂದ ಸಣ್ಣಪುಟ್ಟ ಉದ್ಯಮಗಳು ಸಂಪೂರ್ಣವಾಗಿ ನೆಲೆ ಕಚ್ಚಿವೆ. ಹಲವರು ಉದ್ಯೋಗ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಒಂದು ವೇಳೆ ಲಾಕ್ಡೌನ್ ತೆರವುಗೊಳಿಸಿದರೂ ಮೊದಲಿನಂತೆ ಉದ್ಯೋಗ, ಸಂಬಳ ನಿರೀಕ್ಷಿಸುವಂತಿಲ್ಲ. ಬೆಂಗಳೂರಿನ ಬದುಕು ದುಬಾರಿಯಾಗುವ ಆತಂಕವೂ ಇದೆ ಎಂಬುದು ಬೆಂಗಳೂರು ಬಿಟ್ಟ ಯುವಕರ ಮಾತಾಗಿದೆ.
ಬೆಂಗಳೂರು ಲಾಕ್ಡೌನ್ Live: ಹೋಟೆಲ್ ಕ್ವಾರಂಟೈನ್ ಒಪ್ಪದವರಿಗೆ ರಾಜ್ಯಕ್ಕೆ ಎಂಟ್ರಿ ಇಲ್ಲ!
‘‘ಪ್ರಸ್ತುತ ಪರಿಸ್ಥಿತಿಯಿಂದ ಬೆಂಗಳೂರು ಚೇತರಿಸಿಕೊಳ್ಳಲು ಕನಿಷ್ಟ ಒಂದು ವರ್ಷವಾದರೂ ಬೇಕು. ಹಾಗಾಗಿ ನಮ್ಮ ಊರುಗಳಲ್ಲೇ ಬದುಕಿನ ದಾರಿ ಹುಡುಕಿಕೊಳ್ಳಲು ನಿರ್ಧರಿಸಿದ್ದೇನೆ,’’ ಎನ್ನುತ್ತಾರೆ ಯಾದಗಿರಿಯ ಮಾಲಿಂಗ.
ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್, ಡೀಸೆಲ್ ದರ: ಇಂದಿನ ಬೆಲೆ ವಿವರ ಇಲ್ಲಿದೆ..
‘‘ವೈಜ್ಞಾನಿಕ ಕೃಷಿ ಉದ್ಯಮದಲ್ಲಿ ಲಾಭವಿದೆ. ಕೃಷಿ ಇಲಾಖೆಯಿಂದ ಮತ್ತಷ್ಟು ಮಾಹಿತಿ ಪಡೆದು ವ್ಯವಸಾಯದಲ್ಲಿ ತೊಡಗಿಸಿಕೊಳ್ಳಲು ಉದ್ದೇಶಿಸಿದ್ದೇನೆ,’’ ಎಂದು ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಸಿದ್ದೇಶ್ ಹೇಳಿದರು.
ಕೃಷಿ ಚಟುವಟಿಕೆ ತೊಡಗಿಸಿಕೊಳ್ಳುವವರಿಗೆ ಅಗತ್ಯ ನೆರವು ಹಾಗೂ ಬೆಳೆಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡಲಾಗುವುದು.
ಹೈನುಗಾರಿಕೆ ಲಾಭದಾಯಕ ಉದ್ಯಮವಾಗಿದೆ. ಉದ್ಯಮವಾಗಿ ಕೈಗೊಂಡರೆ ಹಲವರಿಗೆ ಉದ್ಯೋಗವನ್ನು ನೀಡಬಹುದು.
40 ದಿನಗಳಿಂದಲೂ ಊರಿನಲ್ಲೇ ಇದ್ದು ಕೃಷಿ ಭೂಮಿ ಹದಗೊಳಿಸಿದ್ದೇನೆ.