ಆ್ಯಪ್ನಗರ

ಕೊರೊನಾ ವೈರಸ್ ಲಾಕ್‌ ಡೌನ್: ಇಂದಿರಾ ಕ್ಯಾಂಟೀನ್ ನಲ್ಲಿ‌ ಊಟಕ್ಕೆ ಡಿಮ್ಯಾಂಡ್‌

ಲಾಕ್‌ಡೌನ್‌ ಘೋಷಣೆ ಮಾಡಿದ ಬಳಿಕ ಆಹಾರಕ್ಕಾಗಿ ಜನ ಇಂದಿರಾ ಕ್ಯಾಂಟೀನ್‌ನತ್ತ ಮುಖ ಮಾಡಿದ್ದಾರೆ. ಇಲ್ಲಿ ಊಟ, ತಿಂಡಿಯ ದರ ಸಾಮಾನ್ಯರ ಕೈಗೆಟುಕುವಂತಿದೆ. ಬೆಳಗಿನ ತಿಂಡಿಗೆ 5 ರೂ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 10 ರೂ.ಗೆ ನಿಗದಿ ಮಾಡಲಾಗಿದೆ.

Vijaya Karnataka Web 19 Jul 2020, 8:13 am
ರವಿಕುಮಾರ ಬೆಟ್ಟದಪುರ ಬೆಂಗಳೂರು
Vijaya Karnataka Web ಸಾಂದರ್ಭಿಕ ಚಿತ್ರ

ಬೆಂಗಳೂರು: ಸರಕಾರ ಲಾಕ್‌ಡೌನ್‌ ಘೋಷಣೆ ಮಾಡಿದ ಬಳಿಕ ನಗರದ ಹೋಟೆಲ್‌ಗಳು, ರಸ್ತೆ ಬದಿಯ ಕ್ಯಾಂಟೀನ್‌ಗಳು ಮುಚ್ಚಿರುವುದರಿಂದ ಬಡವರು ಆಹಾರಕ್ಕಾಗಿ ಇಂದಿರಾ ಕ್ಯಾಂಟೀನ್‌ನತ್ತ ಮುಖ ಮಾಡಿದ್ದಾರೆ.

ಬಡವರ ಹಸಿವು ನೀಗಿಸಲೆಂದೇ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ, ತಿಂಡಿಯ ದರ ಸಾಮಾನ್ಯರ ಕೈಗೆಟಕುವಂತಿದೆ. ಬೆಳಗಿನ ತಿಂಡಿಗೆ 5 ರೂ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 10 ರೂ.ಗೆ ನಿಗದಿ ಮಾಡಲಾಗಿದೆ.

ಕೆ.ಆರ್‌. ಮಾರುಕಟ್ಟೆ, ಮೆಜೆಸ್ಟಿಕ್‌, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಮಂತ್ರಿ ಸ್ಕ್ವೇರ್‌ ಬಳಿಯಿರುವ ಇಂದಿರಾ ಕ್ಯಾಂಟೀನ್‌ ಹಾಗೂ ಬನಶಂಕರಿ ಸೇರಿದಂತೆ ನಗರದ ಇನ್ನಿತರ ಜನದಟ್ಟಣೆ ಇರುವ ಪ್ರದೇಶದ ಇಂದಿರಾ ಕ್ಯಾಂಟೀನ್‌ಗಳಿಗೆ ನೂರಾರು ಜನರು ಬರುತ್ತಿದ್ದಾರೆ.

ಸಿದ್ದರಾಮಯ್ಯಗೆ ಕ್ಲೀನ್‌ ಚಿಟ್ ನೀಡಿದ ಲೋಕಾಯುಕ್ತ; ಇಂದಿರಾ ಕ್ಯಾಂಟೀನ್‌ ಅವ್ಯವಹಾರ ದೂರು ವಜಾ

ಸಂಘ ಸಂಸ್ಥೆಗಳಿಂದ ದೊರಕದ ಆಹಾರ
ಕೇಂದ್ರ ಸರಕಾರ ಹೇರಿದ್ದ ಲಾಕ್‌ಡೌನ್‌ ಸಂದರ್ಭದಲ್ಲಿ ನಗರದ ನಾನಾ ಸಂಘ ಸಂಸ್ಥೆಗಳು, ದಾನಿಗಳು ಹಾಗೂ ಎನ್‌ಜಿಒಗಳು ಉಚಿತವಾಗಿ ಆಹಾರ ವಿತರಿಸುತ್ತಿದ್ದವು. ಹೀಗಾಗಿ ಹೆಚ್ಚಿನ ಜನರು ಹೋಟೆಲ್‌, ಇಂದಿರಾ ಕ್ಯಾಂಟೀನ್‌ಗಳತ್ತ ಮುಖ ಮಾಡಿರಲಿಲ್ಲ. ಈಗ ಯಾರೂ ಉಚಿತವಾಗಿ ಆಹಾರ ನೀಡುತ್ತಿಲ್ಲ. ದೇವಾಲಯ, ಆಶ್ರಮದಲ್ಲೂ ಊಟ ದೊರೆಯುತ್ತಿಲ್ಲ. ಹೀಗಾಗಿ ಇಂದಿರಾ ಕ್ಯಾಂಟೀನ್‌ನತ್ತ ಹೆಚ್ಚು ಜನರು ಮುಖ ಮಾಡುತ್ತಿದ್ದಾರೆ.

ಈ ಬಾರಿ ಲಾಕ್‌ಡೌನ್‌ ಮಾಡಿರುವ ದಿನದಿಂದಲೂ ಕ್ಯಾಂಟೀನ್‌ಗೆ ಬರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಅವಿವಾಹಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾರ್ಸೆಲ್‌ ತೆಗೆದುಕೊಂಡು ಹೋಗುತ್ತಾರೆ.
ಕಮಲಮ್ಮ, ಇಂದಿರಾ ಕ್ಯಾಂಟೀನ್‌ ಸಿಬ್ಬಂದಿ, ರಾಜಾಜಿನಗರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ