ಆ್ಯಪ್ನಗರ

ಬೆಂಗಳೂರು ಲಾಕ್‌ಡೌನ್‌ Live: ನಗರದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳು 72; 84 ಮಂದಿ ಗುಣಮುಖ

ರಾಜ್ಯದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿತರನ್ನೊಳಗೊಂಡ ಬೆಂಗಳೂರಿನಲ್ಲಿ 150ಕ್ಕೂ ಅಧಿಕ ಸೋಂಕಿತರಿದ್ದಾರೆ. ಆದರೆ ಲಾಕ್‌ಡೌನ್‌ ಸಡಿಲಗೊಂಡಿರುವುದರಿಂದ ಕಂಟೈನ್‌ಮೆಂಟ್‌ ಝೋನ್‌ಗಳನ್ನು ಹೊರತುಪಡಿಸಿ ಉಳಿದೆಡೆ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಈ ಬಗ್ಗೆ ವರದಿ ನೀಡಲಾಗಿದೆ.

Vijaya Karnataka Web 8 May 2020, 5:55 pm
ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಭಾರತ ಸೇರಿ ವಿಶ್ವದೆಲ್ಲೆಡೆ ಹೆಚ್ಚುತ್ತಲೇ ಇದೆ. ರಾಜ್ಯ ರಾಜಧಾನಿಯಲ್ಲಿ ಈವರೆಗೆ 163 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಬೆಂಗಳೂರು ನಗರ ಜಿಲ್ಲೆ ರೆಡ್‌ ಝೋನ್‌ ವ್ಯಾಪ್ತಿಯಲ್ಲಿ ಇದೆ.
Vijaya Karnataka Web seal down bengaluru toi


- ಬೆಂಗಳೂರಲ್ಲಿ ಈವರೆಗೆ 163 ಕೊರೊನ ಸೋಂಕಿತರು ಪತ್ತೆಯಾಗಿದ್ದು, ಈ ಪೈಕಿ ಸಕ್ರಿಯ ಕೊರೊನಾ ಪ್ರಕರಣಗಳು 72, ಇನ್ನು 84 ಮಂದಿ ಗುಣಮುಖ ಆಗಿದ್ದಾರೆ ಎಂದು ಶುಕ್ರವಾರ ಸಂಜೆಯ ಹೆಲ್ತ್‌ ಬುಲೆಟಿನ್‌ನಲ್ಲಿ ರಾಜ್ಯ ಸರಕಾರ ತಿಳಿಸಿದೆ. ಇನ್ನು, 6 ಜನ ಮಹಾಮಾರಿ ಸೋಂಕಿಗೆ ಬಲಿಯಾಗಿದ್ದರೆ, ಇನ್ನೊಬ್ಬರು ಕೊರೊನಾ ಅಲ್ಲದ ಕಾರಣಗಳಿಗಾಗಿ ಸಾವಿಗೀಡಾಗಿದ್ದಾರೆ ಎಂದೂ ರಾಜ್ಯ ಸರಕಾರ ಮಾಹಿತಿ ನೀಡಿದೆ.

- ಚಿಕ್ಕ ಬಾಣಾವರ ರೈಲ್ವೆ ನಿಲ್ದಾಣದಿಂದ ಶ್ರಮಿಕ್‌ ವಿಶೇಷ ರೈಲು ಶುಕ್ರವಾರ ಸಂಜೆ ಹೊರಟಿದ್ದು, ಉತ್ತರ ಪ್ರದೇಶದ ಲಖನೌಗೆ ತಲುಪಲಿದೆ.

- ವಿಪಕ್ಷ ನಾಯಕರ ಜತೆ ಸಿಎಂ ಯಡಿಯೂರಪ್ಪ ಶುಕ್ರವಾರ ಸಭೆ ನಡೆಸಿದ್ದು, ರಾಜ್ಯದಲ್ಲಿ ಕೊರೊನಾ ವೈರಸ್‌ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದಾರೆ.

- ಶುಕ್ರವಾರ ಬೆಂಗಳೂರು ನಗರದಲ್ಲಿ 7 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಪ್ರಕರಣಗಳ ಸಂಖ್ಯೆ 163 ಕ್ಕೆ ಏರಿಕೆಯಾಗಿದೆ. 7 ಜನರ ಪೈಕಿ ಐವರು ಪುರುಷರು ಹಾಗೂ ಇಬ್ಬರು ಮಹಿಳೆಯರಿಗೆ ಸೋಂಕು ತಗುಲಿದೆ. ಈ ಪೈಕಿ ಮೂವರಿಗೆ ಕೊರೊನಾ ಸೋಂಕು ಹೇಗೆ ಬಂದಿದೆ ಎನ್ನುವುದನ್ನು ಇನ್ನೂ ಪತ್ತೆ ಹಚ್ಚಲಾಗುತ್ತಿದೆ.

- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬೆಂಗಳೂರಿನಿಂದ ರಾಜ್ಯದ ಇತರ ಭಾಗಗಳಿಗೆ ತೆರಳಬೇಕಿದ್ದ ಬಸ್ ಸೇವೆಗಳನ್ನು ಶುಕ್ರವಾರದಿಂದ ಸ್ಥಗಿತಗೊಳಿಸಿದೆ.

ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್‌, ಡೀಸೆಲ್‌ ದರ: ಶುಕ್ರವಾರದ ಬೆಲೆ ವಿವರ ಇಲ್ಲಿದೆ..

- ಬೆಂಗಳೂರಿನಿಂದ ತಮ್ಮ ತವರು ರಾಜ್ಯಗಳಿಗೆ ವಲಸೆ ಬರುವ ಕಾರ್ಮಿಕರಿಗಾಗಿ ಶ್ರಮಿಕ್ ವಿಶೇಷ ರೈಲುಗಳನ್ನು ರದ್ದುಗೊಳಿಸಿರುವ ಟೀಕೆಗೆ ಗುರಿಯಾದ ಕರ್ನಾಟಕ ಸರ್ಕಾರ ಶುಕ್ರವಾರದಿಂದ ಸೇವೆಗಳನ್ನು ಶುಕ್ರವಾರದಿಂದ ಪುನಾರಂಭಿಸಿದೆ.

ಕೊರೊನಾಘಾತದ ಚೇತರಿಕೆಗೆ ಬೃಹತ್‌ ಪರಿಹಾರ ಸೂತ್ರ ಅಗತ್ಯ: ಬೇಕಿದೆ ಕೇಂದ್ರದ ಬಿಗ್‌ ಪ್ಯಾಕೇಜ್‌

- ಬೆಂಗಳೂರಿನ 5-ಸ್ಟಾರ್, 3-ಸ್ಟಾರ್ ಮತ್ತು ಸಾಮಾನ್ಯ ದರ್ಜೆಯ 80 ಹೋಟೆಲ್‌ಗಳಲ್ಲಿ ಸುಮಾರು 7,000 ಕೊಠಡಿಗಳನ್ನು ವಿದೇಶದಿಂದ ಭಾರತಕ್ಕೆ ವಾಪಸ್‌ ಬರುತ್ತಿರುವ ಭಾರತೀಯರನ್ನು ಕ್ವಾರಂಟೈನ್‌ನಲ್ಲಿಡಲು ಗುರುತಿಸಲಾಗಿದೆ.

ಬಿಎಸ್‌ವೈ ಸರಕಾರದಿಂದ ಅಲೆಮಾರಿಗಳ ನಿರ್ಲಕ್ಷ್ಯ! ವಿಶೇಷ ಪ್ಯಾಕೇಜ್‌ ಘೋಷಣೆಗೆ ಒತ್ತಾಯ

- ಕರ್ನಾಟಕ ಸರ್ಕಾರ ಗುರುವಾರ ಒಂಬತ್ತು ರಾಜ್ಯಗಳಿಗೆ ಪತ್ರಗಳನ್ನು ಕಳುಹಿಸಿದ್ದು, ಇಂದಿನಿಂದ ಮೇ 15 ರವರೆಗೆ ಶ್ರಮಿಕ್‌ ವಿಶೇಷ ರೈಲು ಸೇವೆ ಪುನಾರಂಭಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ