ಬೆಂಗಳೂರು: ಸಿಲಿಕಾನ್ ಸಿಟಿ ಯುವಕನ ಸೇವೆಗೆ ವಿಶ್ವದ ದೊಡ್ಡಣ್ಣ ಅಮೆರಿಕ ಸಲಾಂ ಹೇಳಿದ್ದು, ಅಮೆರಿಕದ ಸಚಿವರೊಬ್ಬರು ಯುವಕನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹೌದು, ಬೆಂಗಳೂರು ಮೂಲದ ಅರುಣ್ ಶಿವಗಣೇಶ ಎಂಬುವವರಿಗೆ ಅಮೆರಿಕದ ಸಚಿವ ಮೈಕ್ ಪೊಂಪಿಯೋ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಅಗತ್ಯವಿರುವವರಿಗೆ ಅವಶ್ಯ ವಸ್ತುಗಳಾದ ಆಹಾರ, ವೈದ್ಯಕೀಯ ಮತ್ತಿತರ ಉತ್ಪನ್ನಗಳನ್ನು ವಿತರಣೆ ಮಾಡುವ ಕಾರ್ಯವನ್ನು ಅರುಣ್ ಶಿವಗಣೇಸ್ ಬೆಂಗಳೂರಿನಲ್ಲಿ ಮಾಡುತ್ತಿದ್ದಾರೆ. ಇದನ್ನು ಯುಎಸ್ ರಾಜ್ಯ ಸಚಿವರಾದ ಮೈಕ್ ಪೊಂಪಿಯೋ ಅಭಿನಂದಿಸಿ ಟ್ವೀಟ್ ಮಾಡಿದ್ದು, ನಿಮ್ಮ ಮಾನವೀಯತೆ ಹಾಗೂ ಸೇವೆ ನಮಗೆಲ್ಲಾ ಸ್ಫೂರ್ತಿಯಾಗಿದೆ ಎಂದು ಅವರು ಹೇಳಿದ್ದಾರೆ.
ಮೈಕ್ ಪೊಂಪಿಯೋ, ಚೆನ್ನೈನ ಯುಎಸ್ ಕನ್ಸುಲೇಟ್ ಟ್ವೀಟ್ನ್ನು ರಿಟ್ವೀಟ್ ಮಾಡಿ ಅರುಣ್ ಅವರಿಗೆ ಅಭಿನಂದಿಸಿದ್ದಾರೆ. ಗ್ಲೋಬಲ್ಕಲ್ಚರ್ ಸಂಸ್ಥೆಯ ಸ್ಥಾಪಕರಾದ ಅರುಣ್ ಶಿವಗಣೇಶ್, ಸ್ಕೇಡ್ ಫೌಂಡೇಶನ್ ಹಾಗೂ ರಾಗರಶ್ಮಿ ಫೌಂಡೇಶನ್ ಜೊತೆಗೂಡಿ ಬೆಂಗಳೂರಿನಲ್ಲಿ 12 ಸಾವಿರ ಕೆಜಿ ಆಹಾರ, ಅಗತ್ಯ ವಸ್ತುಗಳು, ಔಷಧಿಗಳನ್ನು ಜನರಿಗೆ ವಿತರಿಸಿದ್ದಾರೆ.
ಭಾರತದಲ್ಲಿ ಮೇನಿಂದ ಕೊರೊನಾ ಲಸಿಕೆ ಉತ್ಪನ್ನ ಆರಂಭ..! 1,000 ರೂ.ಗೆ ಸಿಗಲಿದೆ ಔಷಧಿ
ಅರುಣ್ ಶಿವಗಣೇಶ್ ಅಮೆರಿಕ ಸರಕಾರದ ಪ್ರಾಯೋಜಕತ್ವದಲ್ಲಿನ ಎಕ್ಸ್ಚೆಂಜ್ ಪ್ರೋಗ್ರಾಂನಲ್ಲಿ ಭಾಗವಹಿಸಿದ್ದರು. 2015ರಲ್ಲಿ ಸಂಗೀತಗಾರರಿಗಾಗಿ ಮೀಸಲಾಗಿದ್ದ ಒನ್ಬೀಟ್ ಎಕ್ಸ್ಚೆಂಜ್ ಕಾರ್ಯಕ್ರಮದಲ್ಲಿ ಅರುಣ್ ಶಿವಗಣೇಶ್ ಇದ್ದರು ಎಂದು ಚೆನ್ನೈನ ಯುಎಸ್ ರಾಯಭಾರ ಕಚೇರಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದೆ.
ವೇತನ ಕಡಿತ, ಉದ್ಯೋಗ ನಷ್ಟದ ಚಿಂತೆಯೇ..? ಜೀವನ ನಿರ್ವಹಣೆಗೆ ಅಷ್ಟ ಸೂತ್ರ
ಮೈಕ್ ಪೊಂಪಿಯೋ, ಚೆನ್ನೈನ ಯುಎಸ್ ಕನ್ಸುಲೇಟ್ ಟ್ವೀಟ್ನ್ನು ರಿಟ್ವೀಟ್ ಮಾಡಿ ಅರುಣ್ ಅವರಿಗೆ ಅಭಿನಂದಿಸಿದ್ದಾರೆ. ಗ್ಲೋಬಲ್ಕಲ್ಚರ್ ಸಂಸ್ಥೆಯ ಸ್ಥಾಪಕರಾದ ಅರುಣ್ ಶಿವಗಣೇಶ್, ಸ್ಕೇಡ್ ಫೌಂಡೇಶನ್ ಹಾಗೂ ರಾಗರಶ್ಮಿ ಫೌಂಡೇಶನ್ ಜೊತೆಗೂಡಿ ಬೆಂಗಳೂರಿನಲ್ಲಿ 12 ಸಾವಿರ ಕೆಜಿ ಆಹಾರ, ಅಗತ್ಯ ವಸ್ತುಗಳು, ಔಷಧಿಗಳನ್ನು ಜನರಿಗೆ ವಿತರಿಸಿದ್ದಾರೆ.
ಭಾರತದಲ್ಲಿ ಮೇನಿಂದ ಕೊರೊನಾ ಲಸಿಕೆ ಉತ್ಪನ್ನ ಆರಂಭ..! 1,000 ರೂ.ಗೆ ಸಿಗಲಿದೆ ಔಷಧಿ
ಅರುಣ್ ಶಿವಗಣೇಶ್ ಅಮೆರಿಕ ಸರಕಾರದ ಪ್ರಾಯೋಜಕತ್ವದಲ್ಲಿನ ಎಕ್ಸ್ಚೆಂಜ್ ಪ್ರೋಗ್ರಾಂನಲ್ಲಿ ಭಾಗವಹಿಸಿದ್ದರು. 2015ರಲ್ಲಿ ಸಂಗೀತಗಾರರಿಗಾಗಿ ಮೀಸಲಾಗಿದ್ದ ಒನ್ಬೀಟ್ ಎಕ್ಸ್ಚೆಂಜ್ ಕಾರ್ಯಕ್ರಮದಲ್ಲಿ ಅರುಣ್ ಶಿವಗಣೇಶ್ ಇದ್ದರು ಎಂದು ಚೆನ್ನೈನ ಯುಎಸ್ ರಾಯಭಾರ ಕಚೇರಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದೆ.
ವೇತನ ಕಡಿತ, ಉದ್ಯೋಗ ನಷ್ಟದ ಚಿಂತೆಯೇ..? ಜೀವನ ನಿರ್ವಹಣೆಗೆ ಅಷ್ಟ ಸೂತ್ರ