ಆ್ಯಪ್ನಗರ

ಬೆಂಗಳೂರು: 7 ದಿನದ ಲಾಕ್‌ಡೌನ್‌ ಶುರು.. ಶುರು..; ರಾಜಧಾನಿಯ ರಸ್ತೆಗಳೆಲ್ಲಾ ಬಂದ್.. ಬಂದ್‌..

ಕೊರೊನಾ ನಿಯಂತ್ರಣಕ್ಕಾಗಿ ರಾಜಧಾನಿಯಲ್ಲಿ ಘೋಷಿಸಲಾಗಿರುವ ಲಾಕ್‌ಡೌನ್‌ ಜಾರಿಯಾಗಿದೆ. ಲಾಕ್‌ಡೌನ್‌ ಹಿನ್ನೆಲೆ ಮಂಗಳವಾರ ರಾತ್ರಿ 8 ಗಂಟೆಯಿಂದಲೇ ರಸ್ತೆಗಳನ್ನು ಪೊಲೀಸರು ಬಂದ್‌ ಮಾಡಿದ್ದಾರೆ. ಈ ಕಾರಣದಿಂದ ಅನೇಕ ಕಡೆ ಟ್ರಾಫಿಕ್‌ ಜಾಮ್‌ ಕೂಡ ಉಂಟಾಗಿದ್ದು, ಕಂಡುಬಂತು.

Vijaya Karnataka Web 14 Jul 2020, 11:06 pm
ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ರಾಜಧಾನಿಯಲ್ಲಿ ಘೋಷಿಸಲಾಗಿರುವ ಒಂದು ವಾರದ ಲಾಕ್‌ಡೌನ್ ಮಂಗಳವಾರ ರಾತ್ರಿ 8 ಗಂಟೆಯಿಂದ ಜಾರಿಯಾಗಿದೆ. ಸರಿಯಾಗಿ ರಾತ್ರಿ 8 ಗಂಟೆಯಾಗುತ್ತಿದ್ದಂತೆ ಬೆಂಗಳೂರು ನಗರ ಪೊಲೀಸರು ನಗರದ ಮೇಲ್ಸೇತುವೆಗಳು ಸೇರಿ ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್‌ ಮೂಲಕ ಬಂದ್‌ ಮಾಡಲಾಗಿದೆ.
Vijaya Karnataka Web coronavirus outbreak 7 days lockdown started in bengaluru from today all roads shutdown
ಬೆಂಗಳೂರು: 7 ದಿನದ ಲಾಕ್‌ಡೌನ್‌ ಶುರು.. ಶುರು..; ರಾಜಧಾನಿಯ ರಸ್ತೆಗಳೆಲ್ಲಾ ಬಂದ್.. ಬಂದ್‌..


ನಗರವನ್ನು ಪ್ರವೇಶಿಸುವ ನಾಲ್ಕು ಕಡೆ ಚೆಕ್‌ಪೋಸ್ಟ್ ಗಳನ್ನು ನಿರ್ಮಿಸಲಾಗಿದ್ದು, ಯಾವುದೇ ಕಾರಣಕ್ಕೂ ಹೊರಗಿನ ಪ್ರಯಾಣಿಕರ ವಾಹನಗಳು ನಗರ ಪ್ರವೇಶಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಕೊರೊನಾ ವೈರಸ್‌ ಕಾರಣದಿಂದ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದರೂ ಲಾಕ್‌ಡೌನ್‌ ಜಾರಿಗೆ ಬೇಕಾಗುವ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್‌ ನೇತೃತ್ವದಲ್ಲಿ ಪೊಲೀಸರು ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಬ್ಯಾರಿಕೇಡ್‌ ಬಂದ್ ಮಾಡಲಾಗಿದೆ. ವಯಸ್ಸಾದ ಸಿಬ್ಬಂದಿಯನ್ನು ಮನೆಯ ಮೂಲಕವೇ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಲಾಕ್‌ಡೌನ್ ಹಿನ್ನೆಲೆ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮುಖ್ಯ ರಸ್ತೆಯ ಪ್ಲೈ ಓವರ್ ಹೊರತು ಪಡಿಸಿದರೆ ಬಹುತೇಕ ರಸ್ತೆಗಳ ಮೇಲ್ಸೇತುವೆಗಳನ್ನು ಬ್ಯಾರಿಕೇಡ್ ಮೂಲಕ ಬಂದ್‌ ಮಾಡಲಾಗಿದೆ.

ಬೆಂಗಳೂರು ಲಾಕ್‌ಡೌನ್: ಅನಗತ್ಯವಾಗಿ ರಸ್ತೆಗಿಳಿದರೆ ಬೀಳುತ್ತೆ ಲಾಠಿ ಏಟು!

ದ್ವಿಪಥಗಳ ರಸ್ತೆಗಳಲ್ಲಿ ಒಂದು ಬದಿ ಮಾತ್ರ ಸಾರಿಗೆಗೆ ಅವಕಾಶ ಕಲ್ಪಿಸಲಾಗಿದ್ದು, ಸರಕು ಸೇವಾ ವಾಹನಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಉಳಿದಂತೆ ಅಗತ್ಯ ತುರ್ತು ಸೇವಾ ಸಿಬ್ಬಂದಿಗಾಗಿ ಕೆಲ ಬಿಎಂಟಿಸಿ ತುರ್ತು ವಾಹನಗಳು ಸಂಚರಿಸಲಿವೆ. ಇನ್ನು, ಅಗತ್ಯ ಸೇವಾ ಸಿಬ್ಬಂದಿ ತಮ್ಮ ಸಂಸ್ಥೆಯ ಐಡಿ ಕಾರ್ಡ್ ತೋರಿಸಿ ಸಂಚರಿಸಬಹುದಾಗಿದೆ.

ಲಾಕ್‌ಡೌನ್ ಅವಧಿಯಲ್ಲಿ ಬಿಎಂಟಿಸಿ ಸಂಚಾರ, ಯಾರಿಗಿದೆ ಪ್ರಯಾಣಕ್ಕೆ ಅವಕಾಶ

ರಾಜ್ಯದ ಬೇರೆ ಭಾಗದಿಂದ ಬರುವವರು ಸೇವಾ ಸಿಂಧು ಪೋರ್ಟಾಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿದೆ. ಲಾಕ್‌ಡೌನ್‌ ನಿಯಮಗಳ ಪ್ರಕಾರ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ದಿನಸಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಮೆಡಿಕಲ್‌ ಸ್ಟೋರ್‌ಗಳು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು ಮಧ್ಯಾಹ್ನದ ನಂತರ ಲಾಕ್‌ ಆಗಲಿವೆ. ಒಟ್ಟಿನಲ್ಲಿ ಮುಂದಿನ 7 ದಿನಗಳ ಕಾಲ ರಾಜಧಾನಿ ಸಂಪೂರ್ಣವಾಗಿ ಸ್ತಬ್ಧಗೊಳ್ಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ