ಆ್ಯಪ್ನಗರ

ಕಾರ್ಪೋರೇಟರ್‌ ತಂದೆ-ತಾಯಿ ಹೆಸರು ರಸ್ತೆಗೆ ನಾಮಕರಣ: ಸಾರ್ವಜನಿಕರ ಆಕ್ಷೇಪ

ಬಿಬಿಎಂಪಿಯ ಬಾಪೂಜಿನಗರ ವಾರ್ಡ್‌ನಲ್ಲಿನ ಕೆಲವೊಂದು ರಸ್ತೆಗಳಿಗೆ ಸ್ಥಳೀಯ ಕಾರ್ಪೋರೇಟರ್‌ ಅಜ್ಮಲ್‌ ಬೇಗ್‌ ಅವರ ತಂದೆ-ತಾಯಿ ಹೆಸರನ್ನೇ ನಾಮಕರಣ ಮಾಡಲು ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಸ್ಥಳೀಯರು ಕಾರ್ಪೋರೇಟರ್‌ ನಿಲುವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Vijaya Karnataka 4 Nov 2018, 5:00 am
ಬೆಂಗಳೂರು: ಬಿಬಿಎಂಪಿಯ ಬಾಪೂಜಿನಗರ ವಾರ್ಡ್‌ನಲ್ಲಿನ ಕೆಲವೊಂದು ರಸ್ತೆಗಳಿಗೆ ಸ್ಥಳೀಯ ಕಾರ್ಪೋರೇಟರ್‌ ಅಜ್ಮಲ್‌ ಬೇಗ್‌ ಅವರ ತಂದೆ-ತಾಯಿ ಹೆಸರನ್ನೇ ನಾಮಕರಣ ಮಾಡಲು ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಸ್ಥಳೀಯರು ಕಾರ್ಪೋರೇಟರ್‌ ನಿಲುವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Vijaya Karnataka Web corporaters fathers name to road objection
ಕಾರ್ಪೋರೇಟರ್‌ ತಂದೆ-ತಾಯಿ ಹೆಸರು ರಸ್ತೆಗೆ ನಾಮಕರಣ: ಸಾರ್ವಜನಿಕರ ಆಕ್ಷೇಪ


ಬಾಪೂಜಿನಗರದ ಶಾಮಣ್ಣ ಗಾರ್ಡನ್‌ನ ಅಂಡರ್‌ಪಾಸ್‌ ರಸ್ತೆಗೆ 'ಗಫೂರ್‌ ರಸ್ತೆ' ಮತ್ತು ಪೈಪ್‌ಲೈನ್‌ ರೈಲ್ವೆ ಗೇಟ್‌ ಅಂಡರ್‌ಪಾಸ್‌ನಿಂದ ರಾಜಕಾಲುವೆಗೆ ಸಂಪರ್ಕ ಕಲ್ಪಿಸುವ ರಾಗಿ ಮಿಷಿನ್‌ ಎಚ್‌ ಸ್ಟ್ರೀಟ್‌ವರೆಗೆ ಹಾಗೂ 6ನೇ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರದೇಶಕ್ಕೆ 'ಫಾತಿಮಾ ಬೀ ಬಡಾವಣೆ' ಎಂದು ಹೆಸರಿಡಲು ಬಿಬಿಎಂಪಿ ಕೌನ್ಸಿಲ್‌ ಸಭೆ ಅನುಮೋದನೆ ನೀಡಿದೆ. ಗಫೂರ್‌ ಮತ್ತು ಫಾತಿಮಾ ಬೀ ಅವರು ಕಾರ್ಪೋರೇಟರ್‌ ಅಜ್ಮಲ್‌ ಬೇಗ್‌ ಅವರ ತಂದೆ-ತಾಯಿಯಾಗಿದ್ದಾರೆ.

ಗಫೂರ್‌ ಅವರು ಜೀವಂತವಾಗಿರುವಾಗಲೇ ಹೆಸರಿಡಲು ನಿರ್ಧರಿಸಲಾಗಿದೆ. ಅಲ್ಲದೇ ಸುನ್ನಿ ಚೌಕದಿಂದ ಮೈಸೂರು ರಸ್ತೆವರೆಗಿನ ಪೈಪ್‌ಲೈನ್‌ ರಸ್ತೆಗೆ 'ಸುಬಾನಿಯಾ ಮಸೀದಿ ರಸ್ತೆ', ಜಲಮಂಡಳಿ ರಸ್ತೆಯ ಸಂತೋಷ್‌ ಟೆಂಟ್‌ನಿಂದ ಶೋಭ ಟೆಂಟ್‌ವರೆಗಿನ ರಸ್ತೆಗೆ 'ಜಾಮಿಯಾ ಮಸೀದಿ ರಸ್ತೆ', ಶಾಮಣ್ಣ ಗಾರ್ಡನ್‌ನ 6ನೇ ಕ್ರಾಸ್‌ಗೆ 'ಖದಾದಾತ್‌ ಮಸೀದಿ ರಸ್ತೆ' ಮತ್ತು ಬಾಪೂಜಿನಗರ 1ನೇ ಮುಖ್ಯರಸ್ತೆಗೆ 'ಹೀರಾ ಮಸೀದಿ ರಸ್ತೆ' ಹಾಗೂ ನೆಹರು ರಸ್ತೆಯ ರಾಜಕಾಲುವೆ ರಸ್ತೆಗೆ ಸಂಪರ್ಕ ಕಲ್ಪಿಸುವ ವೆಂಕಟೇಶ್ವರ ಶಾಲೆಯಿಂದ ಎಚ್‌ ಸ್ಟ್ರೀಟ್‌ನ ರಾಗಿ ಮೆಷಿನ್‌ ಕಾಲುವೆವರೆಗಿನ ಪ್ರದೇಶಕ್ಕೆ 'ಅಮಿರ್‌ಕಲಿಮಿ ನಗರ' ಎಂದು ನಾಮಕರಣಕ್ಕೆ ನಿರ್ಧರಿಸಲಾಗಿದೆ.

ಬಿಬಿಎಂಪಿ ಮಾಜಿ ಸದಸ್ಯ ವಿ.ಕೃಷ್ಣ ಮತ್ತು ಕೆಲ ಸಾರ್ವಜನಿಕರು ಬಾಪೂಜಿನಗರ ವಾರ್ಡ್‌ನ ನಾನಾ ರಸ್ತೆಗಳಿಗೆ ಬೇರೆ ಬೇರೆ ಹೆಸರುಗಳನ್ನು ಇಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಅವರಿಗೆ ಮನವಿ ಸಲ್ಲಿಸಿದ್ದಾರೆ.

''ಬಿಬಿಎಂಪಿ ಸಭೆಯಲ್ಲಿ ಚರ್ಚೆ ನಡೆಸದೆಯೇ ಬಾಪೂಜಿನಗರ ವಾರ್ಡ್‌ ವ್ಯಾಪ್ತಿಯ ನಾನಾ ರಸ್ತೆಗಳಿಗೆ ಸ್ಥಳೀಯ ಕಾರ್ಪೋರೇಟರ್‌ ತಂದೆ-ತಾಯಿಯ ಹೆಸರನ್ನು ಇಡಲು ನಿರ್ಧರಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿ, ನಾಮಕರಣ ಮಾಡಲು ಒಪ್ಪಿಗೆ ನೀಡಲಾಗಿದೆ. ಆದ ಕಾರಣ, ಕೆಎಂಸಿ ಕಾಯಿದೆಯ ನಿಯಮ 51ರ ಪ್ರಕಾರ ಸಭೆಯಲ್ಲಿ ಮರು ಮಂಡಿಸಿ ಚರ್ಚೆಗೆ ಅವಕಾಶ ನೀಡಿದ ನಂತರವೇ ನಿರ್ಣಯ ಕೈಗೊಳ್ಳಬೇಕೆಂದು ಮೇಯರ್‌ಗೆ ಪತ್ರ ಬರೆಯಲಾಗಿದೆ,'' ಎಂದು ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ