ಆ್ಯಪ್ನಗರ

ರಕ್ತದಾನದಿಂದ ಕಿದ್ವಾಯಿ ಆಸ್ಪತ್ರೆಯ ರೋಗಿಗಳಿಗೆ ನೆರವಾದ ಭಾರತೀಯ ಯೋಧರು

ಕೊರೊನಾ ಸೋಂಕು ವ್ಯಾಪಿಸಿರುವ ಹಿನ್ನೆಲೆ ಮತ್ತು ಲಾಕ್‌ಡೌನ್‌ ಜಾರಿಯಲ್ಲಿರುವುದರ ಪರಿಣಾಮ ದಾನಿಗಳು ರಕ್ತ ನೀಡಲು ಮುಂದೆ ಬರುತ್ತಿಲ್ಲ. ಈ ಹಿನ್ನೆಲೆ ರೋಗಿಗಳಿಗೆ ರಕ್ತದ ಕೊರತೆಯುಂಟಾದ ಕಾರಣ ಕಿದ್ವಾಯಿ ಆಸ್ಪತ್ರೆ ರಕ್ತದಾನಕ್ಕೆ ವಿನಂತಿಸಿಕೊಂಡಿತ್ತು.

Vijaya Karnataka Web 4 Apr 2020, 10:11 am
ಬೆಂಗಳೂರು: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆ ರಕ್ತದಾನಿಗಳ ಕೊರತೆಯಿಂದ ಅಗತ್ಯ ಪ್ರಮಾಣದ ರಕ್ತ ಸಿಗುತ್ತಿಲ್ಲ. ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಮನವಿಯ ಮೇರೆಗೆ ಸೇನೆಯ ಎಂಇಜಿ ಸೆಂಟರ್‌ನಲ್ಲಿ ರಕ್ತದಾನ ಕ್ಯಾಂಪ್ ಆಯೋಜಿಸಲಾಗಿತ್ತು. ನೂರಕ್ಕೂ ಹೆಚ್ಚು ಯೋಧರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
Vijaya Karnataka Web Indian Army Blood Donate


ಬೆಂಗಳೂರಿನ ವೈದ್ಯಕೀಯ ಅಧಿಕಾರಿಗಳ ವಿನಂತಿ ಮೇರೆಗೆ ಭಾರತೀಯ ಯೋಧರು 'ರಕ್ತದಾನ ಶಿಬಿರ' ಹಮ್ಮಿಕೊಂಡಿದ್ದರು. ಏಪ್ರಿಲ್‌ 3, ಶುಕ್ರವಾರ ಬೆಂಗಳೂರು ನಗರದ ಹಲಸೂರಿನಲ್ಲಿರುವ ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌(ಎಂಇಜಿ) ಮತ್ತು ಕೇಂದ್ರಗಳಲ್ಲಿ ರಕ್ತದಾನ ಶಿಬಿರಿ ಏರ್ಪಡಿಸಲಾಗಿತ್ತು.
ರೋಗಿಗಳಿಗೆ ಅಗತ್ಯ ರಕ್ತ ಸಿಗದಿರುವ ಹಿನ್ನೆಲೆ ಕ್ವಿದ್ವಾಯಿ ಕ್ಯಾನ್ಸರ್‌ ರೋಗಿಗಳ ಆಸ್ಪತ್ರೆಗೆ ಯೋಧರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಎಂತಹ ಸಂದರ್ಭದಲ್ಲೂ ಸದಾ ಸೇವೆಗೆ ಸಿದ್ಧರಾಗಿರುವ ಯೋಧರು ಅತ್ಯಂತ ಸಂತೋಷದಿಂದಲೇ ರಕ್ತದಾನಕ್ಕೆ ಮುಂದೆ ಬಂದರು. ಭಾರತೀಯ ಸೇನೆಯ ಸಮವಸ್ತ್ರದಲ್ಲೇ ಆಗಮಿಸಿದ ನೂರಕ್ಕೂ ಹೆಚ್ಚು ಯೋಧರು ರಕ್ತದಾನ ಮಾಡಿದರು.

ಕೊರೊನಾ ಸೋಂಕಿನ ಕಾರಣ ದಾನಿಗಳು ರಕ್ತ ನೀಡಲು ಹಿಂದೇಟು ಹಾಕುತ್ತಿರುವ ಪ್ರಕರಣಗಳು ರಾಜ್ಯಾದ್ಯಂತ ಕಂಡು ಬರುತ್ತಿದ್ದು, ಈಗಾಗಲೇ ಹಲವು ಆಸ್ಪತ್ರೆಗಳು ರಕ್ತದ ಕೊರತೆಯುಂಟಾಗಿರುವ ಬಗ್ಗೆ ವರದಿ ಮಾಡಿದ್ದಾರೆ. ಭಾರತೀಯ ಯೋಧರ ರಕ್ತದಾನ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ಕೊರೊನಾ ವಿಜಯಿಗಳ ಅನುಭವ ಕಥನ: ಸಾಮಾನ್ಯ ಚಿಕಿತ್ಸೆಯಿಂದಲೇ ಪಾರಾಗಿ ಬಂದೆವು...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ