ಬೆಂಗಳೂರು: ಸ್ನೇಹಿತರ ಮದುವೆ ಎಂದರೆ ಯಾರಿಗೆ ಖುಷಿಯಾಗಲ್ಲ ಹೇಳಿ. ತರಲೆ, ತುಂಟಾಟ, ಮಜಾನೇ ಅಲ್ಲೆಲ್ಲ. ಅದನ್ನು ಮಿಸ್ ಮಾಡಿಕೊಳ್ಳೋಕೆ ಯಾರೂ ತಯಾರಿರಲ್ಲ. ಅಂತದ್ದೇ ಸ್ನೇಹಿತರ ಗುಂಪಿದು. ಇವರೆಲ್ಲ ಗೋ ಗ್ರೀನ್ ಸೈಕ್ಲಿಂಗ್ ತಂಡದ ಸದಸ್ಯರು. ತಮ್ಮ ಸ್ನೇಹಿತನ ಮದುವೆಗೆ ಸೈಕ್ಲಿಂಗ್ ಮಾಡಿಕೊಂಡೇ ಹೋಗುವ ವಿನೂತನ ಪ್ಲ್ಯಾನ್ ಇವರದು. ಅದು ಕೂಡ 400 ಕಿ.ಮೀ ದೂರ.
ಹೌದು ,ಬೆಂಗಳೂರಿನಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿರುವ ಶಿವ ರೆಡ್ಡಿ ಆಂಧ್ರ ಪ್ರದೇಶದ ಅದಾನಿಯಲ್ಲಿ ಮದುವೆಯಾಗುತ್ತಿದ್ದಾರೆ. ಗೆಳೆಯ ಮದುವೆಗೆ ಆಮಂತ್ರಿಸುತ್ತಿದ್ದಂತೆ ಪ್ರಯಾಣಕ್ಕೆ ಬಸ್ ಸೂಕ್ತವೋ, ರೈಲೋ ಎಂಬ ಚರ್ಚೆಗಿಳಿದ ಅವರ ಸೈಕ್ಲಿಂಗ್ ಸ್ನೇಹಿತರು ಕೊನೆಗೆ ಆಯ್ದುಕೊಂಡಿದ್ದು ಸೈಕಲ್ನ್ನು. ಈ ನಿರ್ಧಾರವನ್ನು ಒಪ್ಪಿಕೊಂಡ ಗೋ ಗ್ರೀನ್ ಸೈಕ್ಲಿಂಗ್ ತಂಡದ 6 ಜನ ಸದಸ್ಯರಾದ ಸಿದ್ದಲಿಂಗ ಸ್ವಾಮಿ, ಪ್ರಸಾದ್ ಸದಾಶಿವ್, ಶಶಿಧರ್, ಸುನೀಲ್ ಕುಮಾರ್, ಅಮರ್ ಮತ್ತು ಶ್ರೀಧರ್ ಸೈಕಲ್ ಗಾಲಿಗಳ ಮೇಲೆ ಸ್ನೇಹಿತನ ಮದುವೆಗೆ ಶುಭಾಶಯ ಹೊತ್ತೊಯ್ಯಲಿದ್ದಾರೆ. ಜತೆಗೆ ಹಸಿರುಳಿಸಿ ಎಂಬ ಸಂದೇಶವನ್ನು ಹರಡಲಿದ್ದಾರೆ.
ಈ ಗುಂಪಿನಲ್ಲಿ 35 ರಿಂದ 45ರ ವಯಸ್ಸಿನವರಿದ್ದು, ಶುಕ್ರವಾರ( 29.3.18) ನಾಲ್ಕು ಗಂಟೆಗೆ ಪ್ರಯಾಣವನ್ನು ಆರಂಭಿಸಲಿದ್ದು. 400 ಕಿ.ಮೀ ದೂರವನ್ನು 24 ಗಂಟೆಗಳಲ್ಲಿ ಕ್ರಮಿಸಿ ಮದುವೆಯ ಮುನ್ನಾದಿನ ಸಂಜೆ ಅದಾನಿ ತಲುಪುವ ಗುರಿ ಹೊಂದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಗೋ ಗ್ರೀನ್ ಸೈಕ್ಲಿಂಗ್ ತಂಡದ ಭಾಗವಾಗಿರುವ ರೆಡ್ಡಿ ಭಾನುವಾರ (ಎಪ್ರಿಲ್ 1) ಮೇಘನಾ ಅವರನ್ನು ವರಿಸಲಿದ್ದಾರೆ. ಈ ಸ್ನೇಹಿತರ ಹಸಿರು ಪ್ರೇಮ ನಿಜಕ್ಕೂ ಅಭಿನಂದನಾರ್ಹವಲ್ಲವೇ?
ಹೌದು ,ಬೆಂಗಳೂರಿನಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿರುವ ಶಿವ ರೆಡ್ಡಿ ಆಂಧ್ರ ಪ್ರದೇಶದ ಅದಾನಿಯಲ್ಲಿ ಮದುವೆಯಾಗುತ್ತಿದ್ದಾರೆ. ಗೆಳೆಯ ಮದುವೆಗೆ ಆಮಂತ್ರಿಸುತ್ತಿದ್ದಂತೆ ಪ್ರಯಾಣಕ್ಕೆ ಬಸ್ ಸೂಕ್ತವೋ, ರೈಲೋ ಎಂಬ ಚರ್ಚೆಗಿಳಿದ ಅವರ ಸೈಕ್ಲಿಂಗ್ ಸ್ನೇಹಿತರು ಕೊನೆಗೆ ಆಯ್ದುಕೊಂಡಿದ್ದು ಸೈಕಲ್ನ್ನು. ಈ ನಿರ್ಧಾರವನ್ನು ಒಪ್ಪಿಕೊಂಡ ಗೋ ಗ್ರೀನ್ ಸೈಕ್ಲಿಂಗ್ ತಂಡದ 6 ಜನ ಸದಸ್ಯರಾದ ಸಿದ್ದಲಿಂಗ ಸ್ವಾಮಿ, ಪ್ರಸಾದ್ ಸದಾಶಿವ್, ಶಶಿಧರ್, ಸುನೀಲ್ ಕುಮಾರ್, ಅಮರ್ ಮತ್ತು ಶ್ರೀಧರ್ ಸೈಕಲ್ ಗಾಲಿಗಳ ಮೇಲೆ ಸ್ನೇಹಿತನ ಮದುವೆಗೆ ಶುಭಾಶಯ ಹೊತ್ತೊಯ್ಯಲಿದ್ದಾರೆ. ಜತೆಗೆ ಹಸಿರುಳಿಸಿ ಎಂಬ ಸಂದೇಶವನ್ನು ಹರಡಲಿದ್ದಾರೆ.
ಈ ಗುಂಪಿನಲ್ಲಿ 35 ರಿಂದ 45ರ ವಯಸ್ಸಿನವರಿದ್ದು, ಶುಕ್ರವಾರ( 29.3.18) ನಾಲ್ಕು ಗಂಟೆಗೆ ಪ್ರಯಾಣವನ್ನು ಆರಂಭಿಸಲಿದ್ದು. 400 ಕಿ.ಮೀ ದೂರವನ್ನು 24 ಗಂಟೆಗಳಲ್ಲಿ ಕ್ರಮಿಸಿ ಮದುವೆಯ ಮುನ್ನಾದಿನ ಸಂಜೆ ಅದಾನಿ ತಲುಪುವ ಗುರಿ ಹೊಂದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಗೋ ಗ್ರೀನ್ ಸೈಕ್ಲಿಂಗ್ ತಂಡದ ಭಾಗವಾಗಿರುವ ರೆಡ್ಡಿ ಭಾನುವಾರ (ಎಪ್ರಿಲ್ 1) ಮೇಘನಾ ಅವರನ್ನು ವರಿಸಲಿದ್ದಾರೆ. ಈ ಸ್ನೇಹಿತರ ಹಸಿರು ಪ್ರೇಮ ನಿಜಕ್ಕೂ ಅಭಿನಂದನಾರ್ಹವಲ್ಲವೇ?