ಆ್ಯಪ್ನಗರ

ಸೈಕ್ಲೋನ್‌ ಎಫೆಕ್ಟ್: ಬೆಂಗಳೂರಲ್ಲಿ ಬುಧವಾರದಿಂದ ಎರಡು ದಿನ ಮಳೆ

ನಗರದಲ್ಲಿ ಬುಧವಾರದಿಂದ ಎರಡು ದಿನ ಮಳೆಯಾಗಲಿದೆ. ನೆರೆಯ ತಮಿಳುನಾಡು ಕರಾವಳಿ ಬಳಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಲಿದೆ.

Vijaya Karnataka Web 24 Nov 2020, 11:42 pm
ಬೆಂಗಳೂರು: ನಗರದಲ್ಲಿ ಬುಧವಾರದಿಂದ ಎರಡು ದಿನ ಮಳೆಯಾಗಲಿದೆ. ನೆರೆಯ ತಮಿಳುನಾಡು ಕರಾವಳಿ ಬಳಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಲಿದೆ.
Vijaya Karnataka Web nivar


ಬುಧವಾರ ಮೋಡ ಮುಸುಕಿದ ವಾತಾವರಣ ಇರಲಿದ್ದು, ಸಂಜೆ ಬಳಿಕ ಮಳೆಯಾಗಲಿದೆ. ಗುರುವಾರ ಹೆಚ್ಚು ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದೊಂದು ವಾರದಿಂದ ನಗರದಲ್ಲಿ ಮಳೆಯಾಗಿಲ್ಲ. ಒಂದೆರಡು ದಿನ ಸೀಮಿತ ಭಾಗಗಳಲ್ಲಿ ತುಂತುರು ಮಳೆ ಮಾತ್ರ ಆಗಿದೆ. ಮಳೆಯಾಗದಿದ್ದರೂ, ಕನಿಷ್ಠ ಉಷ್ಣಾಂಶ 17-18 ಡಿಗ್ರಿ ಸೆ. ಆಸುಪಾಸಿನಲ್ಲಿದೆ. ಭಾರಿ ಮಳೆಯಾದಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.

ನಿವಾರ್‌ ಚಂಡಮಾರುತ: ದಕ್ಷಿಣ ಭಾರತದಲ್ಲಿ ಅಬ್ಬರ, ಹಲವೆಡೆ ಭಾರಿ ಮಳೆ, ರೈಲು ರದ್ದು, ನಿಷೇಧಾಜ್ಞೆ ಜಾರಿ

ಚಂಡಮಾರುತ ಗಂಟೆಗೆ 150 ಕಿಲೋ ಮೀಟರ್‌ ವೇಗದಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಚಿತ್ರದಲ್ಲಿ ಸಂಪೂರ್ಣ ದಕ್ಷಿಣ ಭಾರತದ ಮೇಲೆ ಚಂಡುಮಾರುತದ ಪ್ರಭಾವ ಇರುವುದು ಕಂಡುಬಂದಿದೆ.

ಕರಾವಳಿಯ ಸಮುದ್ರದಲ್ಲಿ‘ನೀಲಿ’ ಬಣ್ಣದಾಟ! ಬಣ್ಣದ ಅಲೆ ನೋಡಲು ಮುಗಿಬಿದ್ದ ಜನ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ