ಆ್ಯಪ್ನಗರ

ಕೊಡಗಿಗೆ ರಾಮಚಂದ್ರಾಪುರ ಮಠದಿಂದ ಪರಿಹಾರ ಸಾಮಗ್ರಿ ರವಾನೆ

ನಾಡಿನ ಜನ - ಜಾನುವಾರುಗಳಿಗೆ ತೊಂದರೆಯಾದಾಗ ಅದಕ್ಕೆ ಸ್ಪಂದಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.

Vijaya Karnataka Web 23 Aug 2018, 7:53 pm
ಬೆಂಗಳೂರು: ನಾಡಿನ ಜನ - ಜಾನುವಾರುಗಳಿಗೆ ತೊಂದರೆಯಾದಾಗ ಅದಕ್ಕೆ ಸ್ಪಂದಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
Vijaya Karnataka Web DSC04366


ಗಿರಿನಗರದಲ್ಲಿರುವ ಶ್ರೀರಾಮಾಶ್ರಮದಲ್ಲಿ ಕೊಡಗು ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ದಿನೋಪಯೋಗಿ ವಸ್ತುಗಳ ವಿತರಣೆಯ ಸಹಾಯ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಸಂಘ - ಸಂಸ್ಥೆಗಳು, ಮಠ - ಮಾನ್ಯಗಳು ಇದನ್ನು ತಮ್ಮ ಜವಾಬ್ದಾರಿಯಾಗಿ ಪರಿಗಣಿಸಿ ಸಹಾಯ ಹಸ್ತ ನೀಡಬೇಕು. ಪ್ರಕೃತಿ ವಿಕೋಪದಿಂದಾಗಿ ಆಸ್ತಿ ಪಾಸ್ತಿಗಳಿಗೆ ಹಾನಿಯಾಗಿದ್ದು, ಜನ ಜೀವನ ವ್ಯಸ್ತವಾಗಿದೆ. ಶ್ರೀಮಠದಿಂದ ಅಕ್ಕಿ - ಬೆಳೆಗಳನ್ನು ಐದು ಕೆಜಿಯ ಪೊಟ್ಟಣ ಮಾಡಲಾಗಿದ್ದು, ಜತೆಗೆ ಇತರ ನಿತ್ಯೋಪಯೋಗಿ ವಸ್ತುಗಳನ್ನು ಜನರ ಮನೆಗಳಿಗೆ ವಿತರಿಸಲಾಗುವುದು ಎಂದರು.


ಮೊದಲ ಹಂತದಲ್ಲಿ ನಿತ್ಯೋಪಯೋಗಿ ವಸ್ತುಗಳನ್ನು ಕಳಿಸಿಕೊಡುತ್ತಿದ್ದು, ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಒದಗಿಸಲು ಚಿಂತಿಸಲಾಗುವುದು. ದಕ್ಷಿಣ ಕನ್ನಡ - ಕೊಡಗು - ಕಾಸರಗೋಡು ಭಾಗದ ಮಠದ ಕಾರ್ಯಕರ್ತರು, ಶಿಷ್ಯ ಪರಿವಾರ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವುದಾಗಿ ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ