ಕೊಲೆ ಕೇಸ್ಗೆ ಕಳ್ಳತನದ ಬಣ್ಣ..! ಅತ್ತೆಯ ಹತ್ಯೆಗೆ ಕುಮ್ಮಕ್ಕು ನೀಡಿದ್ದಳಾ ಸೊಸೆ..?
ಸೌಂದರ್ಯ ಪೊಲೀಸ್ ವಶದಲ್ಲಿರುವ ಸೊಸೆ. ಫೆಬ್ರವರಿ 18 ರಂದು ಅತ್ತೆ ರಾಜಮ್ಮ ಅವರನ್ನು ಕೊಲೆ ಮಾಡಿಸಿದ ಆರೋಪದ ಮೇಲೆ ವಶಕ್ಕೆ ಪಡೆದಿರುವ ಪೊಲೀಸರು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
Vijaya Karnataka 24 Feb 2020, 10:50 pm
ಹೈಲೈಟ್ಸ್:
* ಅತ್ತೆಯ ಕೊಲೆಗೆ ಗೆಳೆಯನ ಜೊತೆ ಸಂಚು
* ಕೊಲೆ ಕೇಸ್ಗೆ ಕಳ್ಳತನದ ನೆಪ ಹೇಳಿದ್ದ ಸೊಸೆ
* ತನಿಖೆ ವೇಳೆ ಕಳ್ಳತನ ಯತ್ನ ನಡೆದಿಲ್ಲ ಅನ್ನೋದು ಸಾಬೀತು
ಬೆಂಗಳೂರು: ಅತ್ತೆಯ ಕೊಲೆಗೆ ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ಬ್ಯಾಟರಾಯನಪುರ ಠಾಣೆ ಪೊಲೀಸರು ಸೊಸೆಯನ್ನು ವಶಕ್ಕೆ ಪಡೆದಿದ್ದಾರೆ. ಸೌಂದರ್ಯ ಪೊಲೀಸ್ ವಶದಲ್ಲಿರುವ ಸೊಸೆ. ಫೆಬ್ರವರಿ 18 ರಂದು ಅತ್ತೆ ರಾಜಮ್ಮ ಅವರನ್ನು ಕೊಲೆ ಮಾಡಿಸಿದ ಆರೋಪದ ಮೇಲೆ ವಶಕ್ಕೆ ಪಡೆದಿರುವ ಪೊಲೀಸರು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈಕೆಗೆ ಸಹಕರಿಸಿ ಕೊಲೆ ಮಾಡಿದ ಸ್ನೇಹಿತನ ಹುಡುಕಾಟ ನಡೆಸುತ್ತಿದ್ದು, ಸದ್ಯದಲ್ಲೇ ಆತನನ್ನೂ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನಡೆದದ್ದೇನು?: ಫೆಬ್ರವರಿ 18ರ ರಾತ್ರಿ ರಾಜಮ್ಮ ಒಬ್ಬರೇ ಮನೆಯಲ್ಲಿದ್ದಾಗ ನುಗ್ಗಿದ ಆಗಂತುಕನೊಬ್ಬ ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ. ಈ ವೇಳೆ ರಾಜಮ್ಮರ ಮಗ ಕ್ಲಿನಿಕ್ಗೆಂದು ಹೊರಗೆ ಹೋಗಿದ್ದರು. ಸೊಸೆ ಅಂಗಡಿಗೆ ಹೋಗಿದ್ದರು. ಹೊರಗೆ ಹೋಗಿದ್ದ ಸೊಸೆ ಮನೆಗೆ ಬಂದಾಗ ಕೊಲೆ ನಡೆದಿರುವುದು ಗೊತ್ತಾಗಿತ್ತು. ಕಳ್ಳತನಕ್ಕೆ ಬಂದವರು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರಿಗೆ ಸೌಂದರ್ಯ ಮಾಹಿತಿ ನೀಡಿದ್ದರು.
ಬೆಂಗಳೂರಿನ ಕುಖ್ಯಾತ ರೌಡಿ ಯುಪಿಯಲ್ಲಿ ಅರೆಸ್ಟ್: ಸ್ಲಂ ಭರತನಿಗೆ ಮಾಹಿತಿ ಕೊಡ್ತಿದ್ರಾ ಪತ್ರಕರ್ತರು..?
ಬಳಿಕ ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಕಳ್ಳತನಕ್ಕೆ ಬಂದವರು ಕೊಲೆ ಮಾಡಿಲ್ಲ ಎನ್ನುವುದು ಖಚಿತವಾಗಿತ್ತು. ಜತೆಗೆ ಕಳ್ಳತನ ಪ್ರಯತ್ನವೇ ನಡೆದಿಲ್ಲ ಎನ್ನುವುದೂ ತಿಳಿದು ಬಂದಿತ್ತು. ಹೀಗಾಗಿ, ಸೌಂದರ್ಯ ಮೇಲೇ ಅನುಮಾನ ಹೆಚ್ಚಾಗಿ ಈಕೆಯ ಸುತ್ತ ತನಿಖೆ ನಡೆಸಿದಾಗ ಸಿಕ್ಕ ಸುಳಿವು ಆಧರಿಸಿ ವಶಕ್ಕೆ ಪಡೆದಿದ್ದಾರೆ.
ಈಕೆಯ ಕುಮ್ಮಕ್ಕಿನಿಂದಲೇ ಹೊರಗಿನವರು ಯಾರೋ ಕೊಲೆ ಮಾಡಿರಬಹುದು ಎನ್ನುವ ಸುಳಿವು ಸಿಕ್ಕಿದ್ದು, ಆರೋಪಿ ಬಂಧನಕ್ಕೆ ಪ್ರಯತ್ನ ಮುಂದುವರಿದಿದೆ ಎಂದು ತಿಳಿದು ಬಂದಿದೆ. ಮಂಗಳವಾರದೊಳಗೆ ಕೊಲೆ ಆರೋಪಿಯನ್ನೂ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಫಿಟ್ನೆಸ್ ಪರೀಕ್ಷೆ ನೆಪದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಅಸಭ್ಯ ಪ್ರಶ್ನಾವಳಿ..!
ನಡೆದದ್ದೇನು?: ಫೆಬ್ರವರಿ 18ರ ರಾತ್ರಿ ರಾಜಮ್ಮ ಒಬ್ಬರೇ ಮನೆಯಲ್ಲಿದ್ದಾಗ ನುಗ್ಗಿದ ಆಗಂತುಕನೊಬ್ಬ ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ. ಈ ವೇಳೆ ರಾಜಮ್ಮರ ಮಗ ಕ್ಲಿನಿಕ್ಗೆಂದು ಹೊರಗೆ ಹೋಗಿದ್ದರು. ಸೊಸೆ ಅಂಗಡಿಗೆ ಹೋಗಿದ್ದರು. ಹೊರಗೆ ಹೋಗಿದ್ದ ಸೊಸೆ ಮನೆಗೆ ಬಂದಾಗ ಕೊಲೆ ನಡೆದಿರುವುದು ಗೊತ್ತಾಗಿತ್ತು. ಕಳ್ಳತನಕ್ಕೆ ಬಂದವರು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರಿಗೆ ಸೌಂದರ್ಯ ಮಾಹಿತಿ ನೀಡಿದ್ದರು.
ಬೆಂಗಳೂರಿನ ಕುಖ್ಯಾತ ರೌಡಿ ಯುಪಿಯಲ್ಲಿ ಅರೆಸ್ಟ್: ಸ್ಲಂ ಭರತನಿಗೆ ಮಾಹಿತಿ ಕೊಡ್ತಿದ್ರಾ ಪತ್ರಕರ್ತರು..?
ಬಳಿಕ ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಕಳ್ಳತನಕ್ಕೆ ಬಂದವರು ಕೊಲೆ ಮಾಡಿಲ್ಲ ಎನ್ನುವುದು ಖಚಿತವಾಗಿತ್ತು. ಜತೆಗೆ ಕಳ್ಳತನ ಪ್ರಯತ್ನವೇ ನಡೆದಿಲ್ಲ ಎನ್ನುವುದೂ ತಿಳಿದು ಬಂದಿತ್ತು. ಹೀಗಾಗಿ, ಸೌಂದರ್ಯ ಮೇಲೇ ಅನುಮಾನ ಹೆಚ್ಚಾಗಿ ಈಕೆಯ ಸುತ್ತ ತನಿಖೆ ನಡೆಸಿದಾಗ ಸಿಕ್ಕ ಸುಳಿವು ಆಧರಿಸಿ ವಶಕ್ಕೆ ಪಡೆದಿದ್ದಾರೆ.
ಈಕೆಯ ಕುಮ್ಮಕ್ಕಿನಿಂದಲೇ ಹೊರಗಿನವರು ಯಾರೋ ಕೊಲೆ ಮಾಡಿರಬಹುದು ಎನ್ನುವ ಸುಳಿವು ಸಿಕ್ಕಿದ್ದು, ಆರೋಪಿ ಬಂಧನಕ್ಕೆ ಪ್ರಯತ್ನ ಮುಂದುವರಿದಿದೆ ಎಂದು ತಿಳಿದು ಬಂದಿದೆ. ಮಂಗಳವಾರದೊಳಗೆ ಕೊಲೆ ಆರೋಪಿಯನ್ನೂ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಫಿಟ್ನೆಸ್ ಪರೀಕ್ಷೆ ನೆಪದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಅಸಭ್ಯ ಪ್ರಶ್ನಾವಳಿ..!