ಆ್ಯಪ್ನಗರ

ಬೆಂಗಳೂರು: ಜನರಲ್‌ ವಾರ್ಡ್‌ನಲ್ಲೇ ಅರ್ಧ ದಿನ ಉಳಿದ ಶವ!

ಒಂದು ವೇಳೆ ಆ ಶವಾಗಾರದಲ್ಲಿ ಕೋವಿಡ್‌ ಇಲ್ಲದ ವ್ಯಕ್ತಿಯ ಶವ ಇಟ್ಟರೆ ಪೊಲೀಸರು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲು ಸಮಸ್ಯೆಯಾಗುತ್ತದೆ. ಅಲ್ಲದೆ, ಮರಣೋತ್ತರ ಪರೀಕ್ಷೆಯನ್ನು ಬೇರೆ ಆಸ್ಪತ್ರೆಯಲ್ಲಿ ಮಾಡಬೇಕಿರುವ ಕಾರಣ ಅಲ್ಲಿಯೂ ಸಮಸ್ಯೆಯಾಗುತ್ತದೆಂಬ ಕಾರಣಕ್ಕೆ ಅನಿವಾರ್ಯವಾಗಿ ಶವವನ್ನು ವಾರ್ಡ್‌ನಲ್ಲೇ ಬಿಡಲಾಗಿತ್ತು.

Vijaya Karnataka Web 3 Aug 2020, 10:58 pm
ಬೆಂಗಳೂರು: ಕೆ.ಸಿ ಜನರಲ್‌ ಆಸ್ಪತ್ರೆಯು ಮತ್ತೊಮ್ಮೆ ಅಹಿತಕರ ಘಟನೆಯಿಂದ ಸುದ್ದಿಯಾಗಿದೆ. ಸಾಮಾನ್ಯ ರೋಗಿಗಳ ವಾರ್ಡ್‌ನಲ್ಲಿ ಕೊಲೆಯಾದ ವ್ಯಕ್ತಿಯ ಶವವನ್ನು ಸುಮಾರು 12 ತಾಸಿಗೂ ಹೆಚ್ಚು ಕಾಲ ಇರಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Vijaya Karnataka Web ಶವ
ಶವ


ಹೆಬ್ಬಾಳ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿಚಾಕು ಇರಿತಕ್ಕೊಳಗಾಗಿದ್ದ ಈಶಾನ್ಯ ಭಾರತ ಮೂಲದ ವ್ಯಕ್ತಿಯನ್ನು ಡಾ. ಅಂಬೇಡ್ಕರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹೆಚ್ಚಿನ ಚಿಕಿತ್ಸೆಗೆಂದು ಭಾನುವಾರ ಮಧ್ಯಾಹ್ನ ಕೆ.ಸಿ. ಜನರಲ್‌ ಆಸ್ಪತ್ರೆಗೆ ಕರೆತರಲಾಗಿತ್ತು.

ಸೋಂಕಿಲ್ಲದ ಕಾರಣ ಸಾಮಾನ್ಯ ವಾರ್ಡ್‌ನಲ್ಲಿತುರ್ತು ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಿಸದೆ ವ್ಯಕ್ತಿ ಮೃತಪಟ್ಟಿದ್ದಾನೆ. ಮೃತನ ಶವವನ್ನು ಶವಾಗಾರಕ್ಕೆ ಸಾಗಿಸುವ ಬದಲು ವಾರ್ಡ್‌ನ ಬೆಡ್‌ ಮೇಲೆ ಬೆಡ್‌ಶೀಟ್‌ ಹೊದಿಸಿ ಇರಿಸಲಾಗಿತ್ತು. ಆ ವಾರ್ಡ್‌ನಲ್ಲಿಇನ್ನೂ ಐದಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಆದರೂ, ಶವವನ್ನು ಕೂಡಲೇ ಶವಾಗಾರಕ್ಕೆ ಸಾಗಿಸಿಲ್ಲ. ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಲು ಬಂದ ವ್ಯಕ್ತಿಯೊಬ್ಬರು ಈ ಬಗ್ಗೆ ವಿಡಿಯೊ ಮಾಡಿಕೊಂಡಿದ್ದು, ಆಸ್ಪತ್ರೆ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರ ವಿಳಂಬ

''ಶವವನ್ನು ತೆಗೆದುಕೊಂಡು ಹೋಗಲು ಪೊಲೀಸರು ಬರಲು ವಿಳಂಬವಾಗಿತ್ತು. ಶವಾಗಾರದಲ್ಲಿ ನಾಲ್ಕು ಶವಗಳಿಗೆ ಮಾತ್ರ ಜಾಗವಿದ್ದು, ಇತ್ತೀಚೆಗೆ ಕೋವಿಡ್‌ನಿಂದ ಮೃತಪಟ್ಟವರ ಶವಗಳನ್ನು ಮಾತ್ರ ಅಲ್ಲಿ ಇರಿಸಲಾಗುತ್ತದೆ. ಕೋವಿಡ್‌ ಮತ್ತು ಕೋವಿಡ್‌ಯೇತರ ಎಂದು ಪ್ರತ್ಯೇತ ಶವಾಗಾರ ಇಲ್ಲ. ಒಂದು ವೇಳೆ ಆ ಶವಾಗಾರದಲ್ಲಿ ಕೋವಿಡ್‌ ಇಲ್ಲದ ವ್ಯಕ್ತಿಯ ಶವ ಇಟ್ಟರೆ ಪೊಲೀಸರು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲು ಸಮಸ್ಯೆಯಾಗುತ್ತದೆ. ಅಲ್ಲದೆ, ಮರಣೋತ್ತರ ಪರೀಕ್ಷೆಯನ್ನು ಬೇರೆ ಆಸ್ಪತ್ರೆಯಲ್ಲಿ ಮಾಡಬೇಕಿರುವ ಕಾರಣ ಅಲ್ಲಿಯೂ ಸಮಸ್ಯೆಯಾಗುತ್ತದೆಂಬ ಕಾರಣಕ್ಕೆ ಅನಿವಾರ್ಯವಾಗಿ ಶವವನ್ನು ವಾರ್ಡ್‌ನಲ್ಲೇ ಬಿಡಲಾಗಿತ್ತು. ಸೋಮವಾರ ಮಧ್ಯಾಹ್ನ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋದರು' ಎಂದು ಕೆ.ಸಿ ಜನರಲ್‌ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ವೆಂಕಟೇಶಯ್ಯ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ