ಆ್ಯಪ್ನಗರ

ರೆಸ್ಟೋರೆಂಟ್‌ನಲ್ಲಿ ಕಟ್ಟಿ ಹಾಕಿದ್ದ ನಾಯಿ ನಾಪತ್ತೆ : ಠಾಣೆಗೆ ದೂರು

ಕುಟುಂಬ ಸಮೇತ ಊಟಕ್ಕೆಂದು ರೆಸ್ಟೋರೆಂಟ್‌ಗೆ ಹೋಗಿದ್ದಾಗ ಅಲ್ಲಿನ ಕಾವಲು ಸಿಬ್ಬಂದಿ ಕೊಠಡಿಯಲ್ಲಿ ಕಟ್ಟಿ ಹಾಕಿದ್ದ ತಮ್ಮ ಮುದ್ದಿನ ನಾಯಿ ಕಳ್ಳತನ ಆಗಿದೆ ಎಂದು ಬಸವನಗುಡಿ ನಿವಾಸಿ ವಾಸುದೇವ್‌ ಎನ್ನುವವರು ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ.

Vijaya Karnataka 24 Oct 2018, 7:53 am
ಬೆಂಗಳೂರು: ಕುಟುಂಬ ಸಮೇತ ಊಟಕ್ಕೆಂದು ರೆಸ್ಟೋರೆಂಟ್‌ಗೆ ಹೋಗಿದ್ದಾಗ ಅಲ್ಲಿನ ಕಾವಲು ಸಿಬ್ಬಂದಿ ಕೊಠಡಿಯಲ್ಲಿ ಕಟ್ಟಿ ಹಾಕಿದ್ದ ತಮ್ಮ ಮುದ್ದಿನ ನಾಯಿ ಕಳ್ಳತನ ಆಗಿದೆ ಎಂದು ಬಸವನಗುಡಿ ನಿವಾಸಿ ವಾಸುದೇವ್‌ ಎನ್ನುವವರು ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ.
Vijaya Karnataka Web Dog


ವಾಸುದೇವ್‌ ಅವರು ಕುಟುಂಬ ಸಮೇತ ಇಂಡಿಯನ್‌ ಎಕ್ಸ್‌ಪ್ರೆಸ್‌ ಕಟ್ಟಡದಲ್ಲಿರುವ ಒನ್‌ ಕ್ಯೂ ಒನ್‌ ರೆಸ್ಟೋರೆಂಟ್‌ಗೆ ಅ.20 ರಂದು ರಾತ್ರಿ ಊಟಕ್ಕೆಂದು ತೆರಳಿದ್ದರು. ಈ ವೇಳೆ ಸಾಕು ನಾಯಿ 'ಕೂಪರ್‌' ಕೂಡ ಜತೆಗಿತ್ತು. ಆದರೆ ರೆಸ್ಟೋರೆಂಟ್‌ ನಿಯಮದಂತೆ ಅದನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ ಎಂದು ಹೇಳಿದ ಕಾವಲು ಸಿಬ್ಬಂದಿ ಊಟ ಮುಗಿಸಿ ಬರುವವರೆಗೂ ಅದನ್ನು ತಮ್ಮ ಬಳಿಯೇ ಸುರಕ್ಷಿತವಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಅದರಂತೆ, ವಾಸುದೇವ್‌ ನಾಯಿಯನ್ನು ಕಾವಲು ಸಿಬ್ಬಂದಿಯ ಕೊಠಡಿಯ ಒಳಗೇ ಕಟ್ಟಿಹಾಕಿ ಊಟಕ್ಕೆ ಹೋಗಿದ್ದರು. ಊಟ ಮುಗಿಸಿ ಬರುವುದರೊಳಗೆ ನಾಯಿ ಕಾಣೆ ಆಗಿತ್ತು ಎಂದು ದೂರಿನಲ್ಲಿ ವಿವರಿಸಿದ್ದಾರೆ.

ನಾಯಿ ತಪ್ಪಿಸಿಕೊಂಡಿದೆ ಎಂದು ಕಾವಲು ಸಿಬ್ಬಂದಿ ಉತ್ತರ ಕೊಡುತ್ತಿದ್ದಾರೆ. ನಾಯಿ ತಪ್ಪಿಸಿಕೊಳ್ಳುವುದಿದ್ದರೆ, ಚೈನ್‌ ಸಮೇತ ತಪ್ಪಿಸಿಕೊಳ್ಳಬೇಕಿತ್ತು. ಚೈನ್‌ನಿಂದ ನಾಯಿ ಹೊರಗೆ ಬಂದಿದ್ದಾದರೂ ಹೇಗೆ ? ಎಂದು ಕಾವಲು ಸಿಬ್ಬಂದಿಯನ್ನು ವಾಸುದೇವ್‌ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಸಿಬ್ಬಂದಿಯಿಂದ ಸಮರ್ಪಕ ಉತ್ತರ ಬಂದಿಲ್ಲ. ಸುತ್ತಮುತ್ತ ಸಾಕಷ್ಟು ಹುಡುಕಾಡಿದ ಬಳಿಕ ವಿಧಾನಸೌಧ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

20 ಸಾವಿರ ಬಹುಮಾನ: ಪ್ರೀತಿ ಪಾತ್ರವಾದ ಕೂಪರ್‌ ಹುಡುಕಿಕೊಟ್ಟವರಿಗೆ 20 ಸಾವಿರ ರೂ ಬಹುಮಾನವನ್ನೂ ನೀಡುವುದಾಗಿ ವಾಸುದೇವ್‌ ಅವರು ಘೋಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ