ಆ್ಯಪ್ನಗರ

"ರಾಮನ ಕೈನಲ್ಲಿ ಬಿಲ್ಲು-ಬಾಣ ಬೇಡ": ಕಾಂಗ್ರೆಸ್‌ ಹಿರಿಯ ಮುಖಂಡ ವೀರಪ್ಪ ಮೊಯ್ಲಿ

ಬಿಲ್ಲು-ಬಾಣ ಹಿಡಿದ ರಾಮನ ಫೋಟೊ ಬದಲು ಪಟ್ಟಾಭಿಷಿಕ್ತ ರಾಮನ ಫೋಟೊ ಬಳಸುವುದು ಸೂಕ್ತ. ಸೀತೆ, ಲಕ್ಷ್ಮಣ, ಹನುಮಂತನಿರುವ ಪಟ್ಟಾಭಿಷೇಕದ ಚಿತ್ರ ಏಕತೆಯ ಪ್ರತೀಕವಾಗಿದೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿಆಗ್ರಹಿಸಿದ್ದಾರೆ.

TIMESOFINDIA.COM 31 Jul 2020, 8:11 am
ಬೆಂಗಳೂರು: ಶ್ರೀರಾಮನ ಕೈಗಳಲ್ಲಿ ಆಯುಧಗಳಾದ ಬಿಲ್ಲು ಮತ್ತು ಬಾಣ ಇರುವ ಫೋಟೊಗಳನ್ನು ಮಂದಿರ ನಿರ್ಮಾಣದ ವೇಳೆ ಪ್ರಚಾರಕ್ಕಾಗಿ ಹಲವೆಡೆ ಬಳಸಲಾಗುತ್ತಿದೆ. ಆದರೆ ಇದು ರಾಮ ಆಕ್ರಮಣಶೀಲ ಮನೋಭಾವ ಹೊಂದಿದ್ದ ಎನ್ನುವವಂತಿದೆ. ಆದರೆ ಆತ ಹಾಗಿರಲಿಲ್ಲ ಎಂದು ಮಾಜಿ ಕಾನೂನು ಸಚಿವ ವೀರಪ್ಪ ಮೊಯ್ಲಿ ಹೇಳಿದ್ದಾರೆ.
Vijaya Karnataka Web aiyar-sibal-cost-us-gujarat-veerappa-moily


ಬಿಲ್ಲು-ಬಾಣ ಹಿಡಿದ ರಾಮನ ಫೋಟೊ ಬದಲು ಪಟ್ಟಾಭಿಷಿಕ್ತ ರಾಮನ ಫೋಟೊ ಬಳಸುವುದು ಸೂಕ್ತ. ಸೀತೆ, ಲಕ್ಷ್ಮಣ, ಹನುಮಂತನಿರುವ ಪಟ್ಟಾಭಿಷೇಕದ ಚಿತ್ರ ಏಕತೆಯ ಪ್ರತೀಕವಾಗಿದೆ ಎಂದು ಮೊಯ್ಲಿಆಗ್ರಹಿಸಿದ್ದಾರೆ. ಅಲ್ಲದೇ ರಾಮ ಸೇತುವೆಗಳ ನಿರ್ಮಾಣದ ಮೂಲಕ ಸಮಾಜಕ್ಕೆ ಹಾಗೂ ಎಲ್ಲಾ ಸಮುದಾಯಕ್ಕೆ ಬೇಕಾಗಿರುವ ದೇವರಾಗಿದ್ದರು ಅವರು ಆಕ್ರಮಣಶೀಲ ಮನೋಭಾವ ಹೊಂದಿರಲಿಲ್ಲ ಎಂದಿದ್ದಾರೆ.

ಅಲ್ಲದೇ ಪ್ರಧಾನಿ ಮೋದಿ ಭೂಮಿ ಪೂಜೆಯನ್ನ ಎಲ್ಲಾ ಸಮುದಾಯಕ್ಕೆ ಒಗ್ಗಟ್ಟಾಗಿಸುವಂತೆ ಮಾಡಬೇಕು. ಯಾಕೆಂದರೆ ರಾಮ ಎಲ್ಲಾ ಸಮುದಾಯಕ್ಕೆ ಸೇರಿದವನು ಎಂದು ಕೂಡ ಕಾಂಗ್ರೆಸ್‌ನ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಹೇಳಿದ್ದಾರೆ. ರಾಮ ಎಲ್ಲಾ ಸಮುದಾಯಗಳಿರುವ ಸುಂದರ ಸಮಾಜದ ಕನಸು ಕಂಡವರು. ಕಾಂಗ್ರೆಸ್‌ ಕೂಡ ಯಾವತ್ತು ರಾಮ ಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿಲ್ಲ ಎಂದು ತಿಳಿಸಿದ್ದಾರೆ.

ಮಂದಿರ ನಿರ್ಮಾಣಕ್ಕೆ ಬರುತ್ತಿದೆ ಚಿನ್ನ, ಬೆಳ್ಳಿಯ ಗಟ್ಟಿ! ಟ್ರಸ್ಟ್‌ಗೆ ಈಗ ಸಂರಕ್ಷಣೆಯೇ ತಲೆ ನೋವು?

ಆಗಸ್ಟ್‌ 5.ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಶ್ರೀ ರಾಮ ದೇವರ ಭವ್ಯ ಮಂದಿರಕ್ಕೆ ಭೂಮಿ ಪೂಜೆ ನಡೆಯಲಿದೆ. ಕೊರೊನಾ ಕರಿ‍ಛಾಯೆ ಮಧ್ಯೆಯೂ ಭರಪೂರ ತಯಾರಿಗಳು ನಡೆಯುತ್ತಿದೆ. ಭಕ್ತರು ಹಣ, ಚಿನ್ನ, ಬೆಳ್ಳಿಗಳನ್ನ ದೇಣಿಗೆ ನೀಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ