ಆ್ಯಪ್ನಗರ

ಶಿಥಿಲಾವಸ್ಥೆಯಲ್ಲಿ ಕುಡಿಯುವ ನೀರಿನ ಟ್ಯಾಂಕ್‌

ವಿಜಿನಾಪುರ ವಾರ್ಡ್‌ನ ರೈಲ್ವೆ ನಿಲ್ದಾಣದ ಬಳಿಯ ಟ್ಯಾಂಕ್‌, ಸಮಸ್ಯೆಯಿಂದ ನುಣುಚಿಕೊಳ್ಳುತ್ತಿರುವ ಅಧಿಕಾರಿಗಳು, ಅಪಾಯಕ್ಕೆ ಮೊದಲು ತೆರವು ಮಾಡುವುದು ಉತ್ತಮ-

Vijaya Karnataka 27 Dec 2017, 5:04 am

ಕೃಷ್ಣರಾಜಪುರ: ಕೆಆರ್‌ಪುರ ರೈಲ್ವೆ ನಿಲ್ದಾಣದ ಸಮೀಪವಿರುವ ಕುಡಿಯುವ ನೀರಿನ ಟ್ಯಾಂಕ್‌ ಶಿಥಿಲಾವಸ್ಥೆ ತಲುಪಿದ್ದು, ಭಾರೀ ಅಪಾಯ ಸೃಷ್ಟಿಸುವ ಸಾಧ್ಯತೆ ಇದೆ.

ಟ್ಯಾಂಕ್‌ ದುರಸ್ತಿ ಹೊಣೆ ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಜಲಮಂಡಳಿ ಹಾಗೂ ಬಿಬಿಎಂಪಿ ಆಧಿಕಾರಿಗಳು ಪರಸ್ಪರ ದೂರುತ್ತಿರುವ ಕಾರಣ ಕುಸಿಯುತ್ತಿರುವ ಟ್ಯಾಂಕ್‌ ಅನ್ನು ಉಳಿಸುವವರಿಲ್ಲದಾಗಿದೆ. ಇದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಈ ಓವರ್‌ಹೆಡ್‌ ಟ್ಯಾಂಕ್‌ ಅನ್ನು 1993ರಲ್ಲಿ ನಿರ್ಮಿಸಲಾಗಿತ್ತು. ಇದು 50,000 ಸಾವಿರ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯ‌ ಹೊಂದಿದೆ. ವಿಜಿನಾಪುರ ವಾರ್ಡ್‌ನ ಹಲವು ಬಡಾವಣೆಗಳಿಗೆ ಇದರ ಮೂಲಕ ಕುಡಿಯುವ ನೀರು ಸರಬರಾಜು ಆಗುತ್ತಿದೆ.

ಬೀಳುವ ಆತಂಕ: 24 ವರ್ಷಗಳ ಹಳೆಯ ಟ್ಯಾಂಕ್‌ನ ಸಿಮೆಂಟ್‌ ಉದುರಿ ಬೀಳುತ್ತಿದೆ. ಅದೇ ರೀತಿ ಟ್ಯಾಂಕ್‌ ಬಿರುಕು ಬಿಟ್ಟಿದ್ದು, ಕಂಬಿಗಳು ತುಕ್ಕು ಹಿಡಿದು ಹಾಳಾಗಿವೆ. ಆರು ಕಂಬಗಳು ಟ್ಯಾಂಕ್‌ಗೆ ಆಧಾರವಾಗಿದ್ದು, ಅವೂ ಶಿಥಿಲಗೊಂಡಿವೆ. ಇನ್ನೊಂದಿಷ್ಟು ಸಮಯ ಸಾಗಿದರೆ ಟ್ಯಾಂಕ್‌ ಸಂಪೂರ್ಣ ಕುಸಿದು ಬೀಳುವ ಎಲ್ಲ ಸಾಧ್ಯತೆಗಳುಇವೆ.

ಅಧಿಕಾರಿಗಳು ಮೌನ: ಬೆಂಗಳೂರು ಜಲಮಂಡಳಿ ಕೆಲ ವರ್ಷಗಳಿಂದ ಈ ಟ್ಯಾಂಕ್‌ಗೆ ನೀರು ಸರಬರಾಜನ್ನು ನಿಲ್ಲಿಸಿದೆ. ಈ ಹಿಂದೆ ನಗರಸಭಾ ವ್ಯಾಪ್ತಿಯಲ್ಲಿದ್ದ ಟ್ಯಾಂಕ್‌ ಪ್ರಸ್ತುತ ಬಿಬಿಎಂಪಿ ಆಡಳಿತ ವ್ಯಾಪ್ತಿಯಲ್ಲಿದೆ. ಹೀಗಾಗಿ ದುರಸ್ತಿ ಅಥವಾ ತೆರವು ಮಾಡಲು ಬಿಬಿಎಂಪಿ ಅಧಿಕಾರಿಗಳೂ ಮುಂದಾಗುತ್ತಿಲ್ಲ. ರಸ್ತೆ ಬದಿಯಲ್ಲೇ ಟ್ಯಾಂಕ್‌ ಇರುವುದರಿಂದ ಇದು ಮುಖಂಡರಿಗೆ ಪ್ರಶಂಸೆ ಸಲ್ಲಿಸಿ ಬ್ಯಾನರ್‌ ಅಳವಡಿಸುವ ಜಾಗವಾಗಿ ಮಾರ್ಪಟ್ಟಿದೆ. ಟ್ಯಾಂಕ್‌ ಪಕ್ಕದಲ್ಲಿ ಮಳಿಗೆಗಳು ಇರುವುದರಿಂದ ಮಳಿಗೆಯ ವ್ಯಾಪಾರಸ್ಥರು ಸಾಮಗ್ರಿಗಳನ್ನು ಇಡಲು ಬಳಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ