ಆ್ಯಪ್ನಗರ

ಹಸಿರು ಮಡಿಲು ಯೋಜನೆಗೆ ಚಾಲನೆ

ವಿಶ್ವ ಪರಿಸರ ದಿನದ ಅಂಗವಾಗಿ ಬಾಂಧವ ತಂಡದ 5ನೇ ವರ್ಷದ ಹಸಿರು ಮಡಿಲು ಯೋಜನೆಗೆ ಪಾಲಿಕೆ ಸದಸ್ಯ ನಾಗರಾಜು ಮಂಗಳವಾರ ಚಾಲನೆ ನೀಡಿದರು.

Vijaya Karnataka 6 Jun 2018, 5:00 am
ಬೆಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ಬಾಂಧವ ತಂಡದ 5ನೇ ವರ್ಷದ ಹಸಿರು ಮಡಿಲು ಯೋಜನೆಗೆ ಪಾಲಿಕೆ ಸದಸ್ಯ ನಾಗರಾಜು ಮಂಗಳವಾರ ಚಾಲನೆ ನೀಡಿದರು.
Vijaya Karnataka Web drive to green folding scheme
ಹಸಿರು ಮಡಿಲು ಯೋಜನೆಗೆ ಚಾಲನೆ


ಈ ವೇಳೆ ಬಾಂಧವ ತಂಡದ ಪರಿಸರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮಡಿಲು ಯೋಜನೆಯಡಿ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿದರು. ಈ ವೇಳೆ ಸುಮಾರು 2 ಸಾವಿರ ಸಸಿಗಳನ್ನು ವಿತರಿಸಲಾಯಿತು. ಇದೇ ವೇಳೆ ಜಯನಗರದ ಬೈರಸಂದ್ರ ವಾರ್ಡ್‌ನಾದ್ಯಂತ ಸುಮಾರು 180 ಸಸಿಗಳನ್ನು ನೆಡಲಾಯಿತು.

ತಂಡವು ಯೋಜನೆಯಡಿ ಜೂನ್‌ ತಿಂಗಳು ಪೂರ್ತಿ ಉಚಿತ ಸಸಿಗಳನ್ನು ವಿತರಿಸಲಿದೆ. ಸಾರ್ವಜನಿಕರ ಕೋರಿಗೆ ಮೇರೆಗೆ ಅವರ ಮನೆಗಳಿಗೆ ತೆರಳು ಸಸಿಗಳನ್ನು ನೆಟ್ಟು ಸಂಸ್ಥೆ ವತಿಯಿಂದಲೇ ಪೋಷಿಸಿ ಸಂರಕ್ಷಿಸಲಾಗುವುದು ಎಂದು ತಂಡದ ಸದಸ್ಯರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ