ಆ್ಯಪ್ನಗರ

ಮಳೆಯ ಅಬ್ಬರಕ್ಕೆ ಕಲ್ಯಾಣ ಮಂಟಪದಲ್ಲೆಲ್ಲಾ ನೀರು..! ನಿಂತೇ ಹೋಯ್ತು ರಿಸೆಪ್ಷನ್‌..!

ನಿರಂತರವಾಗಿ ಸುರಿದ ಭಾರೀ ಮಳೆ ಈ ರಿಸೆಪ್ಷನ್‌ಗೂ ಕಾಡಿದ್ದು, ಮಳೆಯ ನೀರೆಲ್ಲಾ ಕಲ್ಯಾಣಮಂಟಪದೊಳಗೆ ಬಂದಿದೆ. ಕಲ್ಯಾಣ ಮಂಟಪವನ್ನು ಮಧುವಣಗಿತ್ತಿಯಂತೆ ಸಿಂಗಾರ ಮಾಡಲಾಗಿತ್ತು. ಆದರೆ ಮಳೆಯ ನೀರೆಲ್ಲಾ ಕಲ್ಯಾಣ ಮಂಟಪದ ಒಳಗೆ ಹರಿದು ಬಂದ ಪರಿಣಾಮ ಮೊಣಕಾಲಿನೆತ್ತರಕ್ಕೆ ನೀರು ತುಂಬಿದೆ. ಈ ಮಧ್ಯೆ ಮಳೆಯೂ ನಿಲ್ಲದ ಕಾರಣ ನಿರಾಸೆಯಿಂದಲೇ ರಿಸೆಪ್ಷನ್‌ನ್ನು ಕ್ಯಾನ್ಸಲ್‌ ಮಾಡಲಾಗಿದೆ.

Vijaya Karnataka Web 21 Oct 2020, 7:24 am
ಬೆಂಗಳೂರು: ರಾಜ್ಯ ರಾಜ್ಯಧಾನಿಯಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ನಿರಂತರ ಸುರಿದ ಭಾರೀ ಮಳೆಗೆ ಹಲವೆಡೆ ಜನಜೀವನ ಅಸ್ತವ್ಯಸ್ತವಾದರೆ, ಭೂಮಿಯೂ ತಣ್ಣಗಾಗಿದೆ.
Vijaya Karnataka Web rain in bangalore


ಈ ಮಧ್ಯೆ ನಿನ್ನೆ ಸುರಿದ ಭಾರೀ ಮಳೆ ನವ ವಿವಾಹಿತ ಜೋಡಿಗೆ ನಿರಾಸೆಯನ್ನುಂಟು ಮಾಡಿದೆ. ವಿವಾಹಿತ ನವಜೋಡಿ ತಮ್ಮ ಕುಟುಂಬಿಕರಿಗೆ ಮತ್ತು ಸ್ನೇಹಿತರಿಗೆ ಔತಣಕೂಟವನ್ನು ಹಮ್ಮಿಕೊಂಡಿತ್ತು. ನಗರದ ಮೀನಾಕ್ಷಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ರಿಸೆಪ್ಷನ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡ್ತಿರೋ ನವ ಜೋಡಿಗೆ ಹಾರೈಸಲು ಸಂಬಂಧಿಕರು, ಸ್ನೇಹಿತರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ: ರಾಜ್ಯದ ಇತರೆಡೆಯೂ ಮುಂದುವರೆದ

ಆದರೆ ದಿಢೀರನೇ ನಿರಂತರವಾಗಿ ಸುರಿದ ಭಾರೀ ಮಳೆ ಈ ರಿಸೆಪ್ಷನ್‌ಗೂ ಕಾಡಿದ್ದು, ಮಳೆಯ ನೀರೆಲ್ಲಾ ಕಲ್ಯಾಣಮಂಟಪದೊಳಗೆ ಬಂದಿದೆ. ಕಲ್ಯಾಣ ಮಂಟಪವನ್ನು ಮಧುವಣಗಿತ್ತಿಯಂತೆ ಸಿಂಗಾರ ಮಾಡಲಾಗಿತ್ತು. ಆದರೆ ಮಳೆಯ ನೀರೆಲ್ಲಾ ಕಲ್ಯಾಣ ಮಂಟಪದ ಒಳಗೆ ಹರಿದು ಬಂದ ಪರಿಣಾಮ ಮೊಣಕಾಲಿನೆತ್ತರಕ್ಕೆ ನೀರು ತುಂಬಿದೆ.

ಹೈದರಾಬಾದ್ ನೆನಪಿಸಿದ ಬೆಂಗಳೂರು ಮಳೆ: ಸತತ ಮೂರು ಗಂಟೆಯಿಂದ ಭೋರ್ಗರೆಯು

ಹಾಲ್‌ನ ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸಲಾಗಿದ್ದ ಕಾರು, ಬೈಕ್‌ಗಳೆಲ್ಲ ಅರ್ಧಕ್ಕರ್ಧ ನೀರಿನಲ್ಲಿ ಮುಳುಗಿದ್ದು ವಾಹನ ಮಾಲೀಕರು ಚಿಂತೆಗೀಡಾಗಿದ್ದಾರೆ. ಈ ಮಧ್ಯೆ ಮಳೆಯೂ ನಿಲ್ಲದ ಕಾರಣ ನಿರಾಸೆಯಿಂದಲೇ ರಿಸೆಪ್ಷನ್‌ನ್ನು ಕ್ಯಾನ್ಸಲ್‌ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ