ಆ್ಯಪ್ನಗರ

​‘ಕನ್ನಡ ಮಾತನಾಡಿದರೆ ದಂಡ’ ಪ್ರಕರಣ : ಎಸ್‌ಎಲ್‌ಎಸ್‌ ಶಾಲೆ ವಿರುದ್ಧ ತನಿಖೆಗೆ ಆದೇಶ

ಶಾಲಾ ಆವರಣದಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡಿದರೆ ದಂಡ ವಿಧಿಸುವುದಾಗಿ ಮಕ್ಕಳ ಪೋಷಕರಿಗೆ ಎಚ್ಚರಿಕೆ ನೀಡಿ ಸೂಚನಾ ಪತ್ರವನ್ನು ನೀಡಿದ ಬೆಂಗಳೂರಿನ ಎಸ್‌ಎಲ್ಎಸ್‌ ವಿದ್ಯಾಸಂಸ್ಥೆಗೆ ವರದಿ ನೀಡಿವಂತೆ ಸೂಚಿಸಿ ಶಿಕ್ಷಣ ಸಚಿವರು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

Vijaya Karnataka Web 16 Feb 2020, 10:32 am
ಬೆಂಗಳೂರು: ಶಾಲಾ ಆವರಣದಲ್ಲಿಕನ್ನಡ ಮಾತನಾಡಿದರೆ ದಂಡ ವಿಧಿಸುವುದಾಗಿ ಮಕ್ಕಳ ಪೋಷಕರಿಗೆ ಸೂಚನಾ ಪತ್ರ ಕಳುಹಿಸಿದ್ದ ನಗರದ ಚನ್ನಸಂದ್ರದ ಎಸ್‌ಎಲ್‌ಎಸ್‌ ಅಂತಾರಾಷ್ಟ್ರೀಯ ಗುರುಕುಲ ಶಾಲೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ವರದಿ ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
Vijaya Karnataka Web education minister suresh kumar order for inquiry kannada restriction at school
​‘ಕನ್ನಡ ಮಾತನಾಡಿದರೆ ದಂಡ’ ಪ್ರಕರಣ : ಎಸ್‌ಎಲ್‌ಎಸ್‌ ಶಾಲೆ ವಿರುದ್ಧ ತನಿಖೆಗೆ ಆದೇಶ


ಎಸ್‌ಎಲ್‌ಎಸ್‌ ಅಂತಾರಾಷ್ಟ್ರೀಯ ಗುರುಕುಲ ಶಾಲೆಯ ಮಾನ್ಯತೆಯನ್ನು ರದ್ದುಪಡಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಅವರು ಸಚಿವರಿಗೆ ಬರೆದಿದ್ದ ಪತ್ರದ ಹಿನ್ನೆಲೆಯಲ್ಲಿಈ ಕ್ರಮ ಕೈಗೊಳ್ಳಲಾಗಿದೆ.

ಏನಿದು ಪ್ರಕರಣ?

ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿಕನ್ನಡದಲ್ಲಿಮಾತನಾಡಿದರೆ ಅದನ್ನು ಅಪರಾಧವೆಂದು ಪರಿಗಣಿಸಿ, ಮೊದಲ ಬಾರಿಗೆ ಸಿಕಿಬಿದ್ದವರಿಗೆ 50 ರೂ., ದಂಡ ಹಾಗೂ 2ನೇ ಬಾರಿಗೆ ಸಿಕ್ಕಿಬಿದ್ದರೆ 100 ರೂ. ದಂಡ ವಿಧಿಸುವುದಾಗಿ ಎಸ್‌ಎಲ್‌ಎಸ್‌ ಅಂತಾರಾಷ್ಟ್ರೀಯ ಗುರುಕುಲ ಶಾಲೆಯು 2020ರ ಜ.29ರಂದು ಮಕ್ಕಳ ಪೋಷಕರಿಗೆ ಲಿಖಿತ ಸೂಚನೆ ರವಾನಿಸಿತ್ತು.

ಎಸ್ಸೆಸ್ಸೆಲ್ಸಿ, ಪಿಯು ಪ್ರಶ್ನೆಪತ್ರಿಕೆ ಆನ್‌ಲೈನ್‌ನಲ್ಲಿ ಹಾಕಿ ಗೊಂದಲ ಸೃಷ್ಟಿಸಿದರೆ ಹುಷಾರ್‌: ಸುರೇಶ್‌ ಕುಮಾರ್ ಎಚ್ಚರಿಕೆ

ಈ ಬಗ್ಗೆ ಪೋಷಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿಶಾಲೆಗೆ ಭೇಟಿ ನೀಡಿದ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ, ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತ್ತು. ಈ ವೇಳೆ ಶಾಲೆಯ ಪ್ರಾಂಶುಪಾಲರು ತಮ್ಮ ಕಡೆಯಿಂದ ತಪ್ಪಾಗಿರುವುದನ್ನು ಒಪ್ಪಿಕೊಂಡು ಮೌಖಿಕವಾಗಿ ಕ್ಷಮೆ ಯಾಚಿಸಿದ್ದರು.

ಕನ್ನಡ ಕಲಿಕಾ ಅಧಿನಿಯಮ-2015 ಮತ್ತು ಕನ್ನಡ ಕಲಿಕಾ ನಿಯಮ-2017ರ ಅನ್ವಯ ಈ ಶಾಲೆಯಲ್ಲಿಕನ್ನಡವನ್ನು 2ನೇ ಭಾಷೆಯಾಗಿ ಕಲಿಸುತ್ತಿದ್ದರೂ ಶಾಲಾ ಆವರಣದಲ್ಲಿಕನ್ನಡ ಮಾತನಾಡದಂತೆ ಸೂಚಿದ್ದನ್ನು ಅಪರಾಧವೆಂದು ಪ್ರಾಧಿಕಾರ ಪರಿಗಣಿಸಿದೆ. ಇದು ರಾಜ್ಯ ಸರಕಾರದಿಂದ ಅನುಮತಿ ಪಡೆದು ರಾಜ್ಯ ಭಾಷೆಗೆ ಎಸಗಿರುವ ಅಕ್ಷಮ್ಯ ದ್ರೋಹ ಎಂದು ಪ್ರಾಧಿಕಾರ ನಿರ್ಧರಿಸಿತ್ತು.

ಹಿಂದಿ ಪ್ರಿಯ ಕ್ರಿಕೆಟ್‌ ಕಾಮೆಂಟೇಟರ್‌ಗೆ ನಾಗಾಭರಣ ಕ್ಲಾಸ್‌, ಸಂಭಾವನೆ ತಡೆಹಿಡಿಯಲು ಒತ್ತಾಯಿಸಿ ಪತ್ರ

ಜತೆಗೆ, ಕನ್ನಡ ಕಲಿಕಾ ಅಧಿನಿಯಮ ಜಾರಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದಾಗ, ಶಾಲಾ ವೇಳಾ ಪಟ್ಟಿಯಲ್ಲಿಅಗತ್ಯ ಸಂಖ್ಯೆಯ ತರಗತಿಗಳನ್ನು ನೀಡದೇ ಇರುವುದು ಮತ್ತು ಕನ್ನಡ ಭಾಷೆಯನ್ನು ಬೋಧಿಸಲು ಅಗತ್ಯ ಶಿಕ್ಷಕರನ್ನು ನೇಮಕ ಮಾಡಿಕೊಳ್ಳದೇ ಇರುವುದು ಬೆಳಕಿಗೆ ಬಂದಿತ್ತು. ಶಾಲೆಯಲ್ಲಿನೇಮಕಾತಿಗೊಂಡಿರುವ ಬಹುತೇಕ ಶಿಕ್ಷಕರು ಅನ್ಯರಾಜ್ಯದವರಾಗಿದ್ದು, ಕನ್ನಡಿಗರಿಗೆ ಸಿಗಬಹುದಾಗಿದ್ದ ಉದ್ಯೋಗಗಳನ್ನು ವಂಚಿಸಿರುವುದು ಸಹ ತಿಳಿದುಬಂದಿತ್ತು.

ಶಾಲೆಯ ಮುಂಭಾಗದಲ್ಲಿಶಾಲೆಯ ವಿವರ, ಶುಲ್ಕ, ಪ್ರವೇಶ ವಿಧಾನ ಇತ್ಯಾದಿಗಳನ್ನು ನಮೂದಿಸದೇ ಇರುವುದು, ಅನಗತ್ಯ ಕಾರಣಗಳಿಗೆ ಮಕ್ಕಳನ್ನು ಶಾಲೆಯಿಂದ ಹೊರಗೆ ಹಾಕುವುದು, ಮಕ್ಕಳಿಗೆ ಶಿಸ್ತಿನ ಹೆಸರಿನಲ್ಲಿಮಾನಸಿಕ ಹಿಂಸೆ ಮತ್ತು ಕಿರುಕುಳ, ಸೂಕ್ತ ತರಬೇತಿ ಹೊಂದಿಲ್ಲದ ಶಿಕ್ಷಕರ ನೇಮಕಾತಿ ಮತ್ತು ಮಕ್ಕಳಲ್ಲಿಭಯ ಮತ್ತು ಆತಂಕ ಮೂಡಿಸುವ ರೀತಿಯಲ್ಲಿವಿದ್ಯಾಭ್ಯಾಸ ಕ್ರಮವನ್ನು ಜಾರಿಗೆ ತರುವ ಮೂಲಕ ಶಿಕ್ಷಣ ಹಕ್ಕು ಕಾಯ್ದೆ ಪ್ರಕರಣ 2'ಬಿ', 13, 16, 17, 23 ಮತ್ತು 29 ಅನ್ನು ಸ್ಪಷ್ಟವಾಗಿ ಉಲ್ಲಂಘಿಘಿಸಿದೆ. ಆದ್ದರಿಂದ ಈ ಶಾಲೆಯ ಮಾನ್ಯತೆಯನ್ನು ರದ್ದುಪಡಿಸುವಂತೆ ಪ್ರಾಧಿಕಾರದ ಅಧ್ಯಕ್ಷರು ಶಿಕ್ಷಣ ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ