ಆರ್.ವಿ.ರಸ್ತೆ ಮೆಟ್ರೊ ನಿಲ್ದಾಣದ ಒಂದು ದ್ವಾರದಲ್ಲಿ ಪ್ರವೇಶ ನಿರ್ಬಂಧ
ನಿಲ್ದಾಣವನ್ನೇ ವಿಸ್ತರಿಸುವ ಕಾರ್ಯ ಇದಾಗಿದೆ. ಇದಕ್ಕಾಗಿ 'ಸಿ' ದ್ವಾರ ಒಡೆದು ಹಾಕಿ ಕಂಬ ಅಳವಡಿಸಿ ನಿಲ್ದಾಣ ಮರು ನಿರ್ಮಾಣ ಮಾಡಬೇಕಾಗುತ್ತದೆ. 'ಸಿ' ದ್ವಾರದಲ್ಲಿ ಪ್ರಯಾಣಿಕರು ನಿರ್ಗಮನವಾಗಬಹುದು. ಆಗಮನ ಇಲ್ಲದಿರುವುದರಿಂದ ಅಲ್ಲಿನ ಲೋಹ ಶೋಧಕ ಯಂತ್ರಗಳನ್ನು ತೆಗೆದುಹಾಕಲಾಗಿದೆ. ಪ್ರಯಾಣಿಕರು ಉಳಿದ ದ್ವಾರಗಳಲ್ಲಿ ಪ್ರವೇಶಿಸುತ್ತಿದ್ದಾರೆ.
Vijaya Karnataka 7 Jul 2019, 11:38 am
ಹೈಲೈಟ್ಸ್:
* ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದ ಕಾಮಗಾರಿ
* 'ಸಿ'ದ್ವಾರದಲ್ಲಿ ನಿರ್ಗಮನಕ್ಕಿಲ್ಲ ತೊಂದರೆ
* ನಿಲ್ದಾಣ ವಿಸ್ತರಿಸುವ ಕಾರ್ಯ ಪ್ರಗತಿಯಲ್ಲಿ
ಹೈಲೈಟ್ಸ್ ಮಾತ್ರವೇ ಓದಲು ಆ್ಯಪ್ ಡೌನ್ಲೋಡ್ ಮಾಡಿ* 'ಸಿ'ದ್ವಾರದಲ್ಲಿ ನಿರ್ಗಮನಕ್ಕಿಲ್ಲ ತೊಂದರೆ
* ನಿಲ್ದಾಣ ವಿಸ್ತರಿಸುವ ಕಾರ್ಯ ಪ್ರಗತಿಯಲ್ಲಿ
ಬೆಂಗಳೂರು: 'ನಮ್ಮ ಮೆಟ್ರೊ' 2 ನೇ ಹಂತದ ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದ ಕಾಮಗಾರಿಗಾಗಿ ಹಸಿರು ಮಾರ್ಗದ ಆರ್.ವಿ.ರಸ್ತೆ ನಿಲ್ದಾಣದ 'ಸಿ' ದ್ವಾರದಲ್ಲಿ ಆಗಮನ ನಿರ್ಬಂಧಿಸಲಾಗಿದೆ. 2 ನೇ ಹಂತದ ಯೋಜನೆಯಲ್ಲಿ ಆರ್.ವಿ.ರಸ್ತೆಯಿಂದ ರಾಗಿಗುಡ್ಡ ದೇವಸ್ಥಾನ, ಜಯದೇವ, ಬಿಟಿಎಂ ಲೇಔಟ್ ಹಾದಿಯಾಗಿ ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿವರೆಗೆ ಮಾರ್ಗ ನಿರ್ಮಾಣವಾಗಲಿದೆ. ಹಸಿರು ಮಾರ್ಗದ ಆರ್.ವಿ.ರಸ್ತೆ ನಿಲ್ದಾಣ ಪಕ್ಕದ ಲಕ್ಷ್ಮಣರಾವ್ ಉದ್ಯಾನದಿಂದ ಮಾರ್ಗ ಶುರುವಾಗಲಿದೆ. ಉದ್ಯಾನದ ಜಾಗದಲ್ಲಿ ಈಗಾಗಲೇ ಹಲವು ಕಂಬಗಳನ್ನು ನಿರ್ಮಿಸಲಾಗಿದೆ. ಈ ಕಂಬಗಳ ಹಾದಿ 'ಸಿ' ದ್ವಾರವಿರುವ ಜಾಗದ ನಡುವೆಯೇ ಹೋಗಲಿದೆ. ದ್ವಾರದ ಮುಂದೆ ಹಾಗೂ ಹಿಂದೆ ಕಂಬಗಳನ್ನು ನಿರ್ಮಿಸಲಾಗುತ್ತಿದೆ. ಆದ್ದರಿಂದ ದ್ವಾರದಲ್ಲಿ ಮರದ ಹಲಗೆಗಳನ್ನು ಹಾಕಿ ಆಗಮನ ನಿರ್ಬಂಧಿಸಲಾಗಿದೆ.
ಮೊದಲು ಲಕ್ಷ್ಮಣರಾವ್ ಉದ್ಯಾನದಲ್ಲಿ ಪ್ರತ್ಯೇಕ ನಿಲ್ದಾಣ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಉದ್ಯಾನದ ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರ ಪ್ರತ್ಯೇಕ ನಿಲ್ದಾಣದ ಬದಲು ಉದ್ಯಾನದ ಸ್ವಲ್ಪ ಜಾಗ ಪಡೆದು ಒಂದಕ್ಕೊಂದು ಅಂಟಿಕೊಂಡಂತೆ ಇಂಟರ್ಚೇಂಜ್ ನಿಲ್ದಾಣ ನಿರ್ಮಿಸಲು ತೀರ್ಮಾನಿಸಲಾಯಿತು. ಈಗ ಇರುವ ನಿಲ್ದಾಣವನ್ನೇ ವಿಸ್ತರಿಸುವ ಕಾರ್ಯ ಇದಾಗಿದೆ. ಇದಕ್ಕಾಗಿ 'ಸಿ' ದ್ವಾರ ಒಡೆದು ಹಾಕಿ ಕಂಬ ಅಳವಡಿಸಿ ನಿಲ್ದಾಣ ಮರು ನಿರ್ಮಾಣ ಮಾಡಬೇಕಾಗುತ್ತದೆ. 'ಸಿ' ದ್ವಾರದಲ್ಲಿ ಪ್ರಯಾಣಿಕರು ನಿರ್ಗಮನವಾಗಬಹುದು. ಆಗಮನ ಇಲ್ಲದಿರುವುದರಿಂದ ಅಲ್ಲಿನ ಲೋಹ ಶೋಧಕ ಯಂತ್ರಗಳನ್ನು ತೆಗೆದುಹಾಕಲಾಗಿದೆ. ಪ್ರಯಾಣಿಕರು ಉಳಿದ ದ್ವಾರಗಳಲ್ಲಿ ಪ್ರವೇಶಿಸುತ್ತಿದ್ದಾರೆ.
3 ಪ್ಯಾಕೇಜ್ನಡಿ ಕಾಮಗಾರಿ:
18.82 ಕಿ.ಮೀ. ಉದ್ದದ, 16 ನಿಲ್ದಾಣಗಳನ್ನೊಳಗೊಂಡ ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದ ಕಾಮಗಾರಿ 3 ಪ್ಯಾಕೇಜ್ಗಳಡಿ ನಡೆಯುತ್ತಿದೆ. ಬೊಮ್ಮಸಂದ್ರ-ಹೊಸ ರಸ್ತೆ (6.41 ಕಿ.ಮೀ.) ಮಾರ್ಗದ ಕಾಮಗಾರಿ ಶೇ.31, ಹೊಸರಸ್ತೆ-ಎಚ್ಎಸ್ಆರ್ ಲೇಔಟ್ (6.4 ಕಿ.ಮೀ.) ಕಾಮಗಾರಿ ಶೇ.31 ಹಾಗೂ ಎಚ್ಎಸ್ಆರ್ ಲೇಔಟ್-ಆರ್.ವಿ.ರಸ್ತೆ (6.34 ಕಿ.ಮೀ.) ಕಾಮಗಾರಿ ಶೇ.11 ರಷ್ಟು ಮುಗಿದಿದೆ. 2021 ಕ್ಕೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
'ನಿಲ್ದಾಣ ಮುಚ್ಚುವ ತೀರ್ಮಾನ ಆಗಿಲ್ಲ'
ಆರ್.ವಿ.ರಸ್ತೆ ನಿಲ್ದಾಣದ ದ್ವಾರದ ಮುಂಭಾಗದಲ್ಲೇ ಕಂಬ ನಿರ್ಮಾಣವಾಗುತ್ತಿದೆ. ಕಾಮಗಾರಿ ಮುಂದುವರಿಸಲು ನಿಲ್ದಾಣ ಮುಚ್ಚುವ ಬಗ್ಗೆ ಚರ್ಚೆಯಾಗುತ್ತಿದೆ. ಒಂದು ವರ್ಷದವರೆಗೂ ಮುಚ್ಚುವ ಸಾಧ್ಯತೆ ಇದೆ. ನಿಲ್ದಾಣ ಮುಚ್ಚಿದರೆ ನಾಗಸಂದ್ರ ಅಥವಾ ಮೆಜೆಸ್ಟಿಕ್ ಕಡೆಯಿಂದ ಜಯನಗರವರೆಗೆ ಮಾತ್ರ ಪ್ರಯಾಣ ಮಾಡಬಹುದು. ಯಲಚೇನಹಳ್ಳಿ ನಿಲ್ದಾಣದಿಂದ ಬನಶಂಕರಿ ನಿಲ್ದಾಣವರೆಗೆ ಪ್ರಯಾಣಿಸಬಹುದು. ''2 ನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ನಿಲ್ದಾಣ ಮುಚ್ಚುವ ಕುರಿತು ಇನ್ನೂ ನಿರ್ಧಾರ ಮಾಡಿಲ್ಲ,'' ಎಂದು ಬಿಎಂಆರ್ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚವ್ಹಾಣ್ ತಿಳಿಸಿದ್ದಾರೆ.
ಮೊದಲು ಲಕ್ಷ್ಮಣರಾವ್ ಉದ್ಯಾನದಲ್ಲಿ ಪ್ರತ್ಯೇಕ ನಿಲ್ದಾಣ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಉದ್ಯಾನದ ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರ ಪ್ರತ್ಯೇಕ ನಿಲ್ದಾಣದ ಬದಲು ಉದ್ಯಾನದ ಸ್ವಲ್ಪ ಜಾಗ ಪಡೆದು ಒಂದಕ್ಕೊಂದು ಅಂಟಿಕೊಂಡಂತೆ ಇಂಟರ್ಚೇಂಜ್ ನಿಲ್ದಾಣ ನಿರ್ಮಿಸಲು ತೀರ್ಮಾನಿಸಲಾಯಿತು. ಈಗ ಇರುವ ನಿಲ್ದಾಣವನ್ನೇ ವಿಸ್ತರಿಸುವ ಕಾರ್ಯ ಇದಾಗಿದೆ. ಇದಕ್ಕಾಗಿ 'ಸಿ' ದ್ವಾರ ಒಡೆದು ಹಾಕಿ ಕಂಬ ಅಳವಡಿಸಿ ನಿಲ್ದಾಣ ಮರು ನಿರ್ಮಾಣ ಮಾಡಬೇಕಾಗುತ್ತದೆ. 'ಸಿ' ದ್ವಾರದಲ್ಲಿ ಪ್ರಯಾಣಿಕರು ನಿರ್ಗಮನವಾಗಬಹುದು. ಆಗಮನ ಇಲ್ಲದಿರುವುದರಿಂದ ಅಲ್ಲಿನ ಲೋಹ ಶೋಧಕ ಯಂತ್ರಗಳನ್ನು ತೆಗೆದುಹಾಕಲಾಗಿದೆ. ಪ್ರಯಾಣಿಕರು ಉಳಿದ ದ್ವಾರಗಳಲ್ಲಿ ಪ್ರವೇಶಿಸುತ್ತಿದ್ದಾರೆ.
3 ಪ್ಯಾಕೇಜ್ನಡಿ ಕಾಮಗಾರಿ:
18.82 ಕಿ.ಮೀ. ಉದ್ದದ, 16 ನಿಲ್ದಾಣಗಳನ್ನೊಳಗೊಂಡ ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದ ಕಾಮಗಾರಿ 3 ಪ್ಯಾಕೇಜ್ಗಳಡಿ ನಡೆಯುತ್ತಿದೆ. ಬೊಮ್ಮಸಂದ್ರ-ಹೊಸ ರಸ್ತೆ (6.41 ಕಿ.ಮೀ.) ಮಾರ್ಗದ ಕಾಮಗಾರಿ ಶೇ.31, ಹೊಸರಸ್ತೆ-ಎಚ್ಎಸ್ಆರ್ ಲೇಔಟ್ (6.4 ಕಿ.ಮೀ.) ಕಾಮಗಾರಿ ಶೇ.31 ಹಾಗೂ ಎಚ್ಎಸ್ಆರ್ ಲೇಔಟ್-ಆರ್.ವಿ.ರಸ್ತೆ (6.34 ಕಿ.ಮೀ.) ಕಾಮಗಾರಿ ಶೇ.11 ರಷ್ಟು ಮುಗಿದಿದೆ. 2021 ಕ್ಕೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
'ನಿಲ್ದಾಣ ಮುಚ್ಚುವ ತೀರ್ಮಾನ ಆಗಿಲ್ಲ'
ಆರ್.ವಿ.ರಸ್ತೆ ನಿಲ್ದಾಣದ ದ್ವಾರದ ಮುಂಭಾಗದಲ್ಲೇ ಕಂಬ ನಿರ್ಮಾಣವಾಗುತ್ತಿದೆ. ಕಾಮಗಾರಿ ಮುಂದುವರಿಸಲು ನಿಲ್ದಾಣ ಮುಚ್ಚುವ ಬಗ್ಗೆ ಚರ್ಚೆಯಾಗುತ್ತಿದೆ. ಒಂದು ವರ್ಷದವರೆಗೂ ಮುಚ್ಚುವ ಸಾಧ್ಯತೆ ಇದೆ. ನಿಲ್ದಾಣ ಮುಚ್ಚಿದರೆ ನಾಗಸಂದ್ರ ಅಥವಾ ಮೆಜೆಸ್ಟಿಕ್ ಕಡೆಯಿಂದ ಜಯನಗರವರೆಗೆ ಮಾತ್ರ ಪ್ರಯಾಣ ಮಾಡಬಹುದು. ಯಲಚೇನಹಳ್ಳಿ ನಿಲ್ದಾಣದಿಂದ ಬನಶಂಕರಿ ನಿಲ್ದಾಣವರೆಗೆ ಪ್ರಯಾಣಿಸಬಹುದು. ''2 ನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ನಿಲ್ದಾಣ ಮುಚ್ಚುವ ಕುರಿತು ಇನ್ನೂ ನಿರ್ಧಾರ ಮಾಡಿಲ್ಲ,'' ಎಂದು ಬಿಎಂಆರ್ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚವ್ಹಾಣ್ ತಿಳಿಸಿದ್ದಾರೆ.