ಶೂಟೌಟ್ಗೂ ಬೆಚ್ಚದ ರೌಡಿಗಳು; ನಿಯಂತ್ರಣಕ್ಕೆ ಬಾರದ ಕ್ರೈಮ್
2018 ರಲ್ಲಿ 30 ಶೂಟೌಟ್ ಘಟನೆಗಳು ನಡೆದಿದ್ದವು. ಆದರೆ 2019 ರಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಾಗುವ ಲಕ್ಷಣಗಳು ಕಾಣಿಸುತ್ತಿವೆ. ಕಳೆದ ಆರು ತಿಂಗಳಿನಲ್ಲಿ 20 ಮಂದಿಯ ಕಾಲಿಗೆ ಗುಂಡು ಹೊಡೆದು ಅಪರಾಧ ಜಗತ್ತಿಗೆ ಕಟ್ಟೆಚ್ಚರಿಕೆ ನೀಡಲಾಗಿದೆ.
Vijaya Karnataka 13 Jul 2019, 5:00 am
ಗಿರೀಶ್ಕೋಟೆ ಬೆಂಗಳೂರು
ಬಾಲ ಬಿಚ್ಚುತ್ತಿರುವ ರೌಡಿಗಳು, ಸುಲಿಗೆಕೋರರು, ಸರಗಳ್ಳರ ಕಾಲಿಗೆ ನಗರದ ಪೊಲೀಸರು ಗುಂಡು ಹೊಡೆದು ಎಚ್ಚರಿಕೆಯ ಸಂದೇಶ ರವಾನಿಸುತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ಪೊಲೀಸರ ಸವೀರ್ಸ್ ರಿವಾಲ್ವರ್ಗಳಿಂದ ಗುಂಡು ಸಿಡಿದು 20 ಮಂದಿಯ ಕಾಲು ಸೀಳಿವೆ. ಆದರೂ ರೌಡಿಗಳು ಹಾಗೂ ಸುಲಿಗೆಕೋರರ ಸದ್ದಡಗಿಲ್ಲ. ಅಪರಾಧ ಪ್ರಕರಣಗಳು ನಿಯಂತ್ರಣಕ್ಕೆ ಬಂದಿಲ್ಲ. ದಿನೇ ದಿನೆ ದರೋಡೆ, ಸುಲಿಗೆ, ಸರಗಳವು ನಡೆಯುತ್ತಲೇ ಇರುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ.
2018 ರಲ್ಲಿ 30 ಶೂಟೌಟ್ ಘಟನೆಗಳು ನಡೆದಿದ್ದವು. ಆದರೆ 2019 ರಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಾಗುವ ಲಕ್ಷಣಗಳು ಕಾಣಿಸುತ್ತಿವೆ. ಕಳೆದ ಆರು ತಿಂಗಳಿನಲ್ಲಿ 20 ಮಂದಿಯ ಕಾಲಿಗೆ ಗುಂಡು ಹೊಡೆದು ಅಪರಾಧ ಜಗತ್ತಿಗೆ ಕಟ್ಟೆಚ್ಚರಿಕೆ ನೀಡಲಾಗಿದೆ.
ಮೊದಲೆಲ್ಲಾ ರೌಡಿ ಶೀಟರ್ಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದ ಸವೀರ್ಸ್ ರಿವಾಲ್ವರ್ಗಳು ಈಗ ತಮ್ಮ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿವೆ. 2019 ರಲ್ಲಿ ಹಿಂದೆಂದೂ ಇಲ್ಲದ ಪ್ರಮಾಣದಲ್ಲಿ ಚಾಳಿ ಬಿದ್ದ ಆರೋಪಿಗಳನ್ನೂ ಸವೀರ್ಸ್ ರಿವಾಲ್ವರ್ಗಳು ಹುಡುಕಿಕೊಂಡು ಹೊರಟಿವೆ. ಸದ್ಯಕ್ಕೆ ಬೆಂಗಳೂರನ್ನು ಹೈರಾಣ ಮಾಡುತ್ತಿರುವ ಅಪರಾಧಗಳಲ್ಲಿ ರಸ್ತೆ ದರೋಡೆ, ಸುಲಿಗೆ, ಮೊಬೈಲ್ ಕಳ್ಳತನ ಪ್ರಕರಣಗಳೇ ಆಗಿವೆ.
ಯಾಂತ್ರಿಕ ರೌಡಿ ಪರೇಡ್ಗಳು
ರೌಡಿ ಚಟುವಟಿಕೆಗಳ ನಿಯಂತ್ರಣಕ್ಕೆ ರೌಡಿ ಪರೇಡ್ಗಳು ಸರಣಿಯಂತೆ ನಡೆಯುತ್ತಿವೆ. ಹತ್ತು ಹನ್ನೆರಡು ವರ್ಷಗಳ ಹಿಂದಿನಿಂದ ಯಾರಾರಯರು ರೌಡಿ ಪರೇಡ್ಗೆ ಬರುತ್ತಿದ್ದರೋ ಈಗಲೂ ಹೆಚ್ಚಾಗಿ ಆ ಮುಖಗಳೇ ಕಾಣುತ್ತಿವೆ. ಆದರೆ ಎರಡು ಮತ್ತು ಮೂರನೇ ಹಂತದ ರೌಡಿಗಳ ಹಾವಳಿ ಹೆಚ್ಚುತ್ತಲೇ ಇದೆ. ಗಾಂಜಾದ ಅಮಲಿನಲ್ಲಿ ಕಾರಣವೇ ಇಲ್ಲದೆ ಮಚ್ಚು, ಲಾಂಗು ಬೀಸುವ ದುಷ್ಕರ್ಮಿಗಳು ಹೆಚ್ಚುತ್ತಿದ್ದಾರೆ. ಆದರೆ ಅಲೋಕ್ಕುಮಾರ್ ಅವರು ನೂತನ ಪೊಲೀಸ್ ಕಮಿಷನರ್ ಆದ ಬಳಿಕ ಚಾಳಿ ಬಿದ್ದ ಆರೋಪಿಗಳ ಪರೇಡ್ಗೆ ಹೆಚ್ಚಿನ ಮಹತ್ವ ನೀಡಿ ಎಲ್ಲಾ ಡಿಸಿಪಿ ವಿಭಾಗಗಳಲ್ಲೂ ನಡೆಸಲಾಗುತ್ತಿದೆ.
ಪ್ರಮುಖ ಶೂಟೌಟ್ಗಳು
* ಜ.7 ಕೆ.ಜಿ.ಹಳ್ಳಿ ಠಾಣೆ ಪೊಲೀಸರಿಂದ ತಬ್ರೇಜ್ ಖಾನ್ ಕಾಲಿಗೆ ಗುಂಡು-12 ಕ್ಕೂ ಹೆಚ್ಚು ಪ್ರಕರಣಗಳು ಈತನ ಮೇಲಿವೆ
* ಫೆ.5 ರಂದು ಸಿಸಿಬಿ ಪೊಲೀಸರು ರೌಡಿ ಶೀಟರ್ ಸ್ಲಂ ಭರತನ ಕಾಲಿಗೆ ಗುಂಡು ಹೊಡೆದು ಬಂಧಿಸಿದರು.
* ಮಾ.26 ಸೋಲದೇವನಹಳ್ಳಿ ಠಾಣೆ ಪೊಲೀಸರು ದೇವರಾಜು (25), ಚಂದ್ರಶೇಖರ್ (23) ಇಬ್ಬರ ಕಾಲಿಗೂ ಸವೀರ್ಸ್ ರಿವಾಲ್ವರ್ನ ರುಚಿ ತೋರಿಸಿದರು. ವಿದ್ಯಾರ್ಥಿಗಳ ಸುಲಿಗೆ ಮಾಡುವ ರುಚಿ ಹತ್ತಿಸಿಕೊಂಡಿದ್ದ ಆರೋಪಿಗಳು ಇವರು.
* ಮಾ.28 ರಂದು ನಂದಿನಿ ಲೇಔಟ್ ಠಾಣೆ ಪೊಲೀಸರು ಲಗ್ಗೆರೆ ಮುನಿರಾಜು ಕಾಲಿಗೆ ಗುಂಡು ಹೊಡೆದರು.
* ಮಾ.30 ರಂದು ಕುಮಾರಸ್ವಾಮಿಲೇಔಟ್ ಠಾಣೆ ಪೊಲೀಸರು ಚಾಳಿ ಬಿದ್ದ ಆರೋಪಿ ರಾಜೇಂದ್ರನ ಕಾಲಿಗೆ ಗುಂಡು ಹೊಡೆದರು. ಎಟಿಎಂ ಕಾವಲು ಸಿಬ್ಬಂದಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡುವುದು ಈತನ ಚಾಳಿ
* ಏ.28 ರಂದು ಕಾಟನ್ಪೇಟೆ ಪೊಲೀಸರು ದರೋಡೆಕೋರ ಒಡಿಶಾ ಮೂಲದ ಮನ್ಸೂರ್ಖಾನ್ ಕಾಲಿಗೆ ಗುಂಡು ಹೊಡೆದು ಬಂಧಿಸಿದರು
* ಜೂ.15 ಪೂರ್ವ ಡಿಸಿಪಿ ವಿಭಾಗದ ಅಧಿಕಾರಿಗಳಿಂದ ನಮ್ರಾಜ್ ಬಸಾಕತ್ ಕಾಲಿಗೆ ಗುಂಡು- ಈತ ದರೋಡೆ ಪ್ರಕರಣಗಳಲ್ಲಿ ಬೇಕಾಗಿದ್ದ.
* ಜೂ.23 ಬ್ಯಾಟರಾಯನಪುರ ಠಾಣೆ ಪೊಲೀಸರು ಸುಲಿಗೆಕೋರ ಗೋವಿಂದು ಅಲಿಯಾಸ್ ರಾಹುಲ್ (22) ಕಾಲಿಗೆ ಗುಂಡು ಹೊಡೆದು ಬಂಧಿಸಿದರು
* ಜೂ.24 ಬಾಣಸವಾಡಿ ಠಾಣೆ ಪೊಲೀಸರು ರೌಡಿ ಅಶೋಕ್ ಕಾಲಿಗೆ ಗುಂಡು ಹೊಡೆದರು. ಈತ ಹೊರ ರಾಜ್ಯದ ವಿದ್ಯಾರ್ಥಿಗಳ ರೂಮಿಗೆ ನುಗ್ಗಿ ದರೋಡೆ ನಡೆಸುತ್ತಿದ್ದ
ಲಕ್ಷ್ಮಣನ ಕೇಸಲ್ಲಿ ಹ್ಯಾಟ್ರಿಕ್
ಇಡೀ ಬೆಂಗಳೂರು ನಗರವನ್ನು ಬೆಚ್ಚಿ ಬೀಳಿಸುವಂತೆ ಕುಖ್ಯಾತ ರೌಡಿ ಲಕ್ಷ್ಮಣನನ್ನು ಹಾಡಹಗಲೇ ಕೊಲೆ ಮಾಡಲಾಗಿತ್ತು. ಒಟ್ಟು ಮೂರು ಸುಪಾರಿ ಗ್ಯಾಂಗ್ಗಳನ್ನು ಒಟ್ಟಾಗಿಸಿ ವ್ಯವಸ್ಥಿತವಾಗಿ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾರ್ಚ್ ತಿಂಗಳಿನಲ್ಲೇ ಆಕಾಶ್ ಅಲಿಯಾಸ್ ಮಲೇರಿಯಾ, ಕ್ಯಾಟ್ರಾಜಾ ಮತ್ತು ಹೇಮಂತ್ಕುಮಾರ್ ಕಾಲಿಗೆ ಗುಂಡು ಬಿದ್ದಿತ್ತು. ಒಂದೇ ಕೇಸಿನಲ್ಲಿ ಮೂವರು ಆರೋಪಿಗಳು ಕಾಲಿಗೆ ಗುಂಡು ತಿಂದಿದ್ದು ಕಳೆದ 10 ವರ್ಷಗಳಲ್ಲಿ ಇದೇ ಮೊದಲು. ಬಳಿಕ ಸಿಸಿಬಿ ಈ ಪ್ರಕರಣದ ಆರೋಪಿಗಳ ಮೇಲೆ ಕೋಕ ಜಾರಿ ಮಾಡಿತು.
ಕಾರಣವೇ ಇಲ್ಲದೆ ಕೊಲೆ ಮಾಡಿದ್ದ ಶೀನ
2019 ರಲ್ಲಿ ಕಾಲಿಗೆ ಗುಂಡೇಟು ತಿಂದ ಆರೋಪಿಗಳಲ್ಲಿ ಶೀನ ಅಲಿಯಾಸ್ ಶ್ರೀನಿವಾಸ್ನ ವಿಕೃತತನ ಪೊಲೀಸರನ್ನು ರೊಚ್ಚಿಗೆಬ್ಬಿಸಿತ್ತು. ಈತ ಕಾರಣವೇ ಇಲ್ಲದೆ ಗಣೇಶ್ ಎನ್ನುವ ಎಲೆಕ್ಟ್ರೀಷಿಯನ್ನನ್ನು ಜೂ.17 ರಂದು ವೈಯಾಲಿಕಾವಲ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಮಾಡಿದ್ದ.
ಕೋಳಿಫಯಾಜ್ ಪುತ್ರ ಪಪ್ಪು
ಜೂ.20 ರಂದು ಸಿಸಿಬಿ ಪೊಲೀಸರು ಶಿವಾಜಿನಗರದ ರೌಡಿ ಪಪ್ಪು ಕಾಲಿಗೆ ಗುಂಡು ಹೊಡೆದು ಬಂಧಿಸಿದರು. 80ರ ದಶಕದ ಬೆಂಗಳೂರು ಭೂಗತ ಜಗತ್ತಿನ ದೊಡ್ಡ ರೌಡಿ ಕೋಳಿಫಯಾಜ್ನ ಪುತ್ರ ಪಪ್ಪು ರೌಡಿ ಚಟುವಟಿಕೆಗಳಿಗಿಂತ ಸುಲಿಗೆ, ದರೋಡೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ.
ಬಾಲ ಬಿಚ್ಚುತ್ತಿರುವ ರೌಡಿಗಳು, ಸುಲಿಗೆಕೋರರು, ಸರಗಳ್ಳರ ಕಾಲಿಗೆ ನಗರದ ಪೊಲೀಸರು ಗುಂಡು ಹೊಡೆದು ಎಚ್ಚರಿಕೆಯ ಸಂದೇಶ ರವಾನಿಸುತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ಪೊಲೀಸರ ಸವೀರ್ಸ್ ರಿವಾಲ್ವರ್ಗಳಿಂದ ಗುಂಡು ಸಿಡಿದು 20 ಮಂದಿಯ ಕಾಲು ಸೀಳಿವೆ. ಆದರೂ ರೌಡಿಗಳು ಹಾಗೂ ಸುಲಿಗೆಕೋರರ ಸದ್ದಡಗಿಲ್ಲ. ಅಪರಾಧ ಪ್ರಕರಣಗಳು ನಿಯಂತ್ರಣಕ್ಕೆ ಬಂದಿಲ್ಲ. ದಿನೇ ದಿನೆ ದರೋಡೆ, ಸುಲಿಗೆ, ಸರಗಳವು ನಡೆಯುತ್ತಲೇ ಇರುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ.
2018 ರಲ್ಲಿ 30 ಶೂಟೌಟ್ ಘಟನೆಗಳು ನಡೆದಿದ್ದವು. ಆದರೆ 2019 ರಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಾಗುವ ಲಕ್ಷಣಗಳು ಕಾಣಿಸುತ್ತಿವೆ. ಕಳೆದ ಆರು ತಿಂಗಳಿನಲ್ಲಿ 20 ಮಂದಿಯ ಕಾಲಿಗೆ ಗುಂಡು ಹೊಡೆದು ಅಪರಾಧ ಜಗತ್ತಿಗೆ ಕಟ್ಟೆಚ್ಚರಿಕೆ ನೀಡಲಾಗಿದೆ.
ಮೊದಲೆಲ್ಲಾ ರೌಡಿ ಶೀಟರ್ಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದ ಸವೀರ್ಸ್ ರಿವಾಲ್ವರ್ಗಳು ಈಗ ತಮ್ಮ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿವೆ. 2019 ರಲ್ಲಿ ಹಿಂದೆಂದೂ ಇಲ್ಲದ ಪ್ರಮಾಣದಲ್ಲಿ ಚಾಳಿ ಬಿದ್ದ ಆರೋಪಿಗಳನ್ನೂ ಸವೀರ್ಸ್ ರಿವಾಲ್ವರ್ಗಳು ಹುಡುಕಿಕೊಂಡು ಹೊರಟಿವೆ. ಸದ್ಯಕ್ಕೆ ಬೆಂಗಳೂರನ್ನು ಹೈರಾಣ ಮಾಡುತ್ತಿರುವ ಅಪರಾಧಗಳಲ್ಲಿ ರಸ್ತೆ ದರೋಡೆ, ಸುಲಿಗೆ, ಮೊಬೈಲ್ ಕಳ್ಳತನ ಪ್ರಕರಣಗಳೇ ಆಗಿವೆ.
ಯಾಂತ್ರಿಕ ರೌಡಿ ಪರೇಡ್ಗಳು
ರೌಡಿ ಚಟುವಟಿಕೆಗಳ ನಿಯಂತ್ರಣಕ್ಕೆ ರೌಡಿ ಪರೇಡ್ಗಳು ಸರಣಿಯಂತೆ ನಡೆಯುತ್ತಿವೆ. ಹತ್ತು ಹನ್ನೆರಡು ವರ್ಷಗಳ ಹಿಂದಿನಿಂದ ಯಾರಾರಯರು ರೌಡಿ ಪರೇಡ್ಗೆ ಬರುತ್ತಿದ್ದರೋ ಈಗಲೂ ಹೆಚ್ಚಾಗಿ ಆ ಮುಖಗಳೇ ಕಾಣುತ್ತಿವೆ. ಆದರೆ ಎರಡು ಮತ್ತು ಮೂರನೇ ಹಂತದ ರೌಡಿಗಳ ಹಾವಳಿ ಹೆಚ್ಚುತ್ತಲೇ ಇದೆ. ಗಾಂಜಾದ ಅಮಲಿನಲ್ಲಿ ಕಾರಣವೇ ಇಲ್ಲದೆ ಮಚ್ಚು, ಲಾಂಗು ಬೀಸುವ ದುಷ್ಕರ್ಮಿಗಳು ಹೆಚ್ಚುತ್ತಿದ್ದಾರೆ. ಆದರೆ ಅಲೋಕ್ಕುಮಾರ್ ಅವರು ನೂತನ ಪೊಲೀಸ್ ಕಮಿಷನರ್ ಆದ ಬಳಿಕ ಚಾಳಿ ಬಿದ್ದ ಆರೋಪಿಗಳ ಪರೇಡ್ಗೆ ಹೆಚ್ಚಿನ ಮಹತ್ವ ನೀಡಿ ಎಲ್ಲಾ ಡಿಸಿಪಿ ವಿಭಾಗಗಳಲ್ಲೂ ನಡೆಸಲಾಗುತ್ತಿದೆ.
ಪ್ರಮುಖ ಶೂಟೌಟ್ಗಳು
* ಜ.7 ಕೆ.ಜಿ.ಹಳ್ಳಿ ಠಾಣೆ ಪೊಲೀಸರಿಂದ ತಬ್ರೇಜ್ ಖಾನ್ ಕಾಲಿಗೆ ಗುಂಡು-12 ಕ್ಕೂ ಹೆಚ್ಚು ಪ್ರಕರಣಗಳು ಈತನ ಮೇಲಿವೆ
* ಫೆ.5 ರಂದು ಸಿಸಿಬಿ ಪೊಲೀಸರು ರೌಡಿ ಶೀಟರ್ ಸ್ಲಂ ಭರತನ ಕಾಲಿಗೆ ಗುಂಡು ಹೊಡೆದು ಬಂಧಿಸಿದರು.
* ಮಾ.26 ಸೋಲದೇವನಹಳ್ಳಿ ಠಾಣೆ ಪೊಲೀಸರು ದೇವರಾಜು (25), ಚಂದ್ರಶೇಖರ್ (23) ಇಬ್ಬರ ಕಾಲಿಗೂ ಸವೀರ್ಸ್ ರಿವಾಲ್ವರ್ನ ರುಚಿ ತೋರಿಸಿದರು. ವಿದ್ಯಾರ್ಥಿಗಳ ಸುಲಿಗೆ ಮಾಡುವ ರುಚಿ ಹತ್ತಿಸಿಕೊಂಡಿದ್ದ ಆರೋಪಿಗಳು ಇವರು.
* ಮಾ.28 ರಂದು ನಂದಿನಿ ಲೇಔಟ್ ಠಾಣೆ ಪೊಲೀಸರು ಲಗ್ಗೆರೆ ಮುನಿರಾಜು ಕಾಲಿಗೆ ಗುಂಡು ಹೊಡೆದರು.
* ಮಾ.30 ರಂದು ಕುಮಾರಸ್ವಾಮಿಲೇಔಟ್ ಠಾಣೆ ಪೊಲೀಸರು ಚಾಳಿ ಬಿದ್ದ ಆರೋಪಿ ರಾಜೇಂದ್ರನ ಕಾಲಿಗೆ ಗುಂಡು ಹೊಡೆದರು. ಎಟಿಎಂ ಕಾವಲು ಸಿಬ್ಬಂದಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡುವುದು ಈತನ ಚಾಳಿ
* ಏ.28 ರಂದು ಕಾಟನ್ಪೇಟೆ ಪೊಲೀಸರು ದರೋಡೆಕೋರ ಒಡಿಶಾ ಮೂಲದ ಮನ್ಸೂರ್ಖಾನ್ ಕಾಲಿಗೆ ಗುಂಡು ಹೊಡೆದು ಬಂಧಿಸಿದರು
* ಜೂ.15 ಪೂರ್ವ ಡಿಸಿಪಿ ವಿಭಾಗದ ಅಧಿಕಾರಿಗಳಿಂದ ನಮ್ರಾಜ್ ಬಸಾಕತ್ ಕಾಲಿಗೆ ಗುಂಡು- ಈತ ದರೋಡೆ ಪ್ರಕರಣಗಳಲ್ಲಿ ಬೇಕಾಗಿದ್ದ.
* ಜೂ.23 ಬ್ಯಾಟರಾಯನಪುರ ಠಾಣೆ ಪೊಲೀಸರು ಸುಲಿಗೆಕೋರ ಗೋವಿಂದು ಅಲಿಯಾಸ್ ರಾಹುಲ್ (22) ಕಾಲಿಗೆ ಗುಂಡು ಹೊಡೆದು ಬಂಧಿಸಿದರು
* ಜೂ.24 ಬಾಣಸವಾಡಿ ಠಾಣೆ ಪೊಲೀಸರು ರೌಡಿ ಅಶೋಕ್ ಕಾಲಿಗೆ ಗುಂಡು ಹೊಡೆದರು. ಈತ ಹೊರ ರಾಜ್ಯದ ವಿದ್ಯಾರ್ಥಿಗಳ ರೂಮಿಗೆ ನುಗ್ಗಿ ದರೋಡೆ ನಡೆಸುತ್ತಿದ್ದ
ಲಕ್ಷ್ಮಣನ ಕೇಸಲ್ಲಿ ಹ್ಯಾಟ್ರಿಕ್
ಇಡೀ ಬೆಂಗಳೂರು ನಗರವನ್ನು ಬೆಚ್ಚಿ ಬೀಳಿಸುವಂತೆ ಕುಖ್ಯಾತ ರೌಡಿ ಲಕ್ಷ್ಮಣನನ್ನು ಹಾಡಹಗಲೇ ಕೊಲೆ ಮಾಡಲಾಗಿತ್ತು. ಒಟ್ಟು ಮೂರು ಸುಪಾರಿ ಗ್ಯಾಂಗ್ಗಳನ್ನು ಒಟ್ಟಾಗಿಸಿ ವ್ಯವಸ್ಥಿತವಾಗಿ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾರ್ಚ್ ತಿಂಗಳಿನಲ್ಲೇ ಆಕಾಶ್ ಅಲಿಯಾಸ್ ಮಲೇರಿಯಾ, ಕ್ಯಾಟ್ರಾಜಾ ಮತ್ತು ಹೇಮಂತ್ಕುಮಾರ್ ಕಾಲಿಗೆ ಗುಂಡು ಬಿದ್ದಿತ್ತು. ಒಂದೇ ಕೇಸಿನಲ್ಲಿ ಮೂವರು ಆರೋಪಿಗಳು ಕಾಲಿಗೆ ಗುಂಡು ತಿಂದಿದ್ದು ಕಳೆದ 10 ವರ್ಷಗಳಲ್ಲಿ ಇದೇ ಮೊದಲು. ಬಳಿಕ ಸಿಸಿಬಿ ಈ ಪ್ರಕರಣದ ಆರೋಪಿಗಳ ಮೇಲೆ ಕೋಕ ಜಾರಿ ಮಾಡಿತು.
ಕಾರಣವೇ ಇಲ್ಲದೆ ಕೊಲೆ ಮಾಡಿದ್ದ ಶೀನ
2019 ರಲ್ಲಿ ಕಾಲಿಗೆ ಗುಂಡೇಟು ತಿಂದ ಆರೋಪಿಗಳಲ್ಲಿ ಶೀನ ಅಲಿಯಾಸ್ ಶ್ರೀನಿವಾಸ್ನ ವಿಕೃತತನ ಪೊಲೀಸರನ್ನು ರೊಚ್ಚಿಗೆಬ್ಬಿಸಿತ್ತು. ಈತ ಕಾರಣವೇ ಇಲ್ಲದೆ ಗಣೇಶ್ ಎನ್ನುವ ಎಲೆಕ್ಟ್ರೀಷಿಯನ್ನನ್ನು ಜೂ.17 ರಂದು ವೈಯಾಲಿಕಾವಲ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಮಾಡಿದ್ದ.
ಕೋಳಿಫಯಾಜ್ ಪುತ್ರ ಪಪ್ಪು
ಜೂ.20 ರಂದು ಸಿಸಿಬಿ ಪೊಲೀಸರು ಶಿವಾಜಿನಗರದ ರೌಡಿ ಪಪ್ಪು ಕಾಲಿಗೆ ಗುಂಡು ಹೊಡೆದು ಬಂಧಿಸಿದರು. 80ರ ದಶಕದ ಬೆಂಗಳೂರು ಭೂಗತ ಜಗತ್ತಿನ ದೊಡ್ಡ ರೌಡಿ ಕೋಳಿಫಯಾಜ್ನ ಪುತ್ರ ಪಪ್ಪು ರೌಡಿ ಚಟುವಟಿಕೆಗಳಿಗಿಂತ ಸುಲಿಗೆ, ದರೋಡೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ.