ಆ್ಯಪ್ನಗರ

ಬೆನ್ನ ಮೇಲೆ ಆಹಾರ ಧಾನ್ಯ ಹೊತ್ತು ನಡೆದ ಮಾಜಿ ಶಾಸಕ

ಬೆಳಗ್ಗೆ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಅವುಗಳನ್ನು ಅರ್ಹರಿಗೆ ತಲುಪಿಸಲು ತಮ್ಮ ಕಚೇರಿಯ ಬಳಿ ಖುದ್ದು ವಿತರಣೆಯ ಉಸ್ತುವಾರಿ ವಹಿಸಿದ್ದಾರೆ. ಕೆಲವೊಮ್ಮೆ ಸ್ವಯಂ ಸೇವಕರು ಬಾರದಿದ್ದಲ್ಲಿ ತಾವೇ ಆಹಾರಧಾನ್ಯದ ಕಿಟ್‌ ಒಳಗೊಂಡ ಮೂಟೆಯನ್ನು ವಾಹನಕ್ಕೆ ಸಾಗಿಸಲು ಕೈಜೋಡಿಸಿದ್ದಾರೆ.

Vijaya Karnataka Web 6 Apr 2020, 9:47 pm
ಬೆಂಗಳೂರು: ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡವರಿಗೆ ಆಹಾರಧಾನ್ಯ ವಿತರಿಸಲು ಸ್ವತಃ ಬೆನ್ನ ಮೇಲೆ ಮೂಟೆ ಹೊತ್ತು ಮಾಜಿ ಶಾಸಕರೊಬ್ಬರು ಗಮನ ಸೆಳೆದಿದ್ದಾರೆ.
Vijaya Karnataka Web ಅರ್‌ವಿ ದೇವರಾಜ್
ಅರ್‌ವಿ ದೇವರಾಜ್


ಈ ಮಾಜಿ ಶಾಸಕ ಕಳೆದ ಹತ್ತು ದಿನಗಳಿಂದ ತಾವು ಪ್ರತಿನಿಧಿಸುತ್ತಿದ್ದ ವಿಧಾನಸಭೆ ಕ್ಷೇತ್ರದ ನಾನಾ ಪ್ರದೇಶಗಳ ಬಡವರು ಹಾಗೂ ಕೊಳೆಗೇರಿ ನಿವಾಸಿಗಳಿಗೆ ಸ್ವಂತ ಹಣದಿಂದ ಆಹಾರಧಾನ್ಯ ಹಾಗೂ ತರಕಾರಿ ಪೂರೈಸುತ್ತಿದ್ದಾರೆ. ನಿತ್ಯ ಸಾವಿರ ಮಂದಿಗೆ ಊಟ ವಿತರಿಸುವುದರ ಜತೆಗೆ ಇಷ್ಟೇ ಸಂಖ್ಯೆಯಲ್ಲಿ ಅಗತ್ಯವಿರುವವರಿಗೆ ದಿನಬಳಕೆ ವಸ್ತುಗಳನ್ನು ನೀಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಳಗ್ಗೆ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಅವುಗಳನ್ನು ಅರ್ಹರಿಗೆ ತಲುಪಿಸಲು ತಮ್ಮ ಕಚೇರಿಯ ಬಳಿ ಖುದ್ದು ವಿತರಣೆಯ ಉಸ್ತುವಾರಿ ವಹಿಸಿದ್ದಾರೆ. ಕೆಲವೊಮ್ಮೆ ಸ್ವಯಂ ಸೇವಕರು ಬಾರದಿದ್ದಲ್ಲಿ ತಾವೇ ಆಹಾರಧಾನ್ಯದ ಕಿಟ್‌ ಒಳಗೊಂಡ ಮೂಟೆಯನ್ನು ವಾಹನಕ್ಕೆ ಸಾಗಿಸಲು ಕೈಜೋಡಿಸಿದ್ದಾರೆ. ಅಂದ ಹಾಗೆ ಆ ಮಾಜಿ ಶಾಸಕರ ಹೆಸರು ಆರ್‌.ವಿ.ದೇವರಾಜ್‌. ಮಾಜಿ ಶಾಸಕ ದೇವರಾಜ್‌ ಅವರು ಈ ಹಿಂದೆ ಚಿಕ್ಕಪೇಟೆ ಹಾಗೂ ಚಾಮರಾಜಪೇಟೆ ಮತಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ