ಬೆಂಗಳೂರು : ''ಗಾಢ ನಿದ್ರೆಯಲ್ಲಿದ್ದಾಗ ಏಕಾಏಕಿ ಜೋರಾಗಿ ಮಂಚ ಅಲುಗಾಡಿದ ಕಾರಣ ಕ್ಷಣಾರ್ಧದಲ್ಲೇ ಎಚ್ಚರವಾಯಿತು. ಕಣ್ಣು ಬಿಟ್ಟರೆ ಸಂಪೂರ್ಣ ಕಟ್ಟಡವೇ ಅಲುಗಾಡುತ್ತಿತ್ತು. ಗುಡುಗಿನಂತೆ ಸದ್ದು ಕೇಳಿಸುತ್ತಿತ್ತು. ಭೂಕಂಪ ಎಂದು ಭಾವಿಸಿ ಭಯದಲ್ಲಿ ಕೊಠಡಿಯಲ್ಲಿನ ಬಾಲ್ಕನಿಯ ಕಡೆಗೆ ಓಡಿದೆ. ಹೊರಗೆ ನೋಡಿದರೆ ಪಕ್ಕದಲ್ಲಿನ ಕಟ್ಟಡದಿಂದ ಭಾರಿ ಪ್ರಮಾಣದ ಧೂಳು ಬರುತ್ತಿತ್ತು. ನಂತರ ಜನರ ಕಿರುಚಾಟ, ಕೂಗಾಟದ ಸದ್ದು ಮಾತ್ರ ಕೇಳಿಸುತ್ತಿತ್ತು. ನನ್ನ ಜೀವ ಉಳಿದಿದ್ದೇ ದೊಡ್ಡದು ಅನಿಸುತ್ತಿದೆ...''
ಕುಸಿದಿರುವ ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲಿನ ಸಾಯಿ ಆದಿ ಅಂಬಲ್ ಕಟ್ಟಡದ 2ನೇ ಮಹಡಿಯಲ್ಲಿ ಬಾಡಿಗೆಗೆ ವಾಸವಿರುವ ಕುಶಾಲ್ ಎಂಬುವರ ಆತಂಕದ ನುಡಿಗಳಿವು. ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಕುಶಾಲ್, 10 ತಿಂಗಳಿಂದ ಇಲ್ಲಿ ಬಾಡಿಗೆಗೆ ವಾಸವಿದ್ದಾರೆ.
''ರಾತ್ರಿ 1.58 ಆಗಿರಬಹುದು. ಬೆಡ್ ಅಲುಗಾಡಿತು. ಬಾಲ್ಕನಿಯಿಂದ ಹೊರ ಬಂದಾಗ ಅನಾಹುತ ಆಗಿರುವುದು ಗೊತ್ತಾಗಿಯಿತು. ಬಾಗಿಲು ಜಾಮ್ ಆಗಿದ್ದ ಕಾರಣ ಅದನ್ನು ತೆರೆಯಲು ಆಗಲಿಲ್ಲ. ಆದರೂ, ಬಲ ಪ್ರಯೋಗಿಸಿ ಹೇಗೋ ಬಾಗಿಲು ತೆಗೆದುಕೊಂಡು ಹೊರ ಬಂದೆ. ನಂತರ ಕೆಳ ಭಾಗಕ್ಕೆ ಹೋಗಲು ಸಾಧ್ಯವೇ ಇರಲಿಲ್ಲ. ಹೀಗಾಗಿ, 1ನೇ ಮಹಡಿಗೆ ಬಂದು ಗ್ರಿಲ್ ಇಲ್ಲದ ಕಿಟಕಿ ಮೂಲಕ ಪಕ್ಕದಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ಅಳವಡಿಸಲಾಗಿದ್ದ ಕಟ್ಟಿಗೆಗಳ ಮೇಲೆ ಕಾಲಿಟ್ಟು, ಅಲ್ಲಿಂದ ಕಾಂಪೌಂಡ್ ಮೇಲೆ ಕಾಲಿಟ್ಟು ಹರಸಾಹಸ ಪಟ್ಟು ಕೆಳಗೆ ಇಳಿದೆ. ಕೆಳಭಾಗದಲ್ಲಿ ಕೂಗಾಟ ಕಿರುಚಾಟ ಕೇಳಿಸುತ್ತಿತ್ತು. ಎಲ್ಲರಿಗೂ ತಮ್ಮ ತಮ್ಮ ಜೀವ ಉಳಿಸಿಕೊಳ್ಳುವ ಆತುರ. ಮೇಲಿನ ಮಹಡಿಯವರು ಕೂಡಾ ಕೆಳಗೆ ಬಂದು ಒಬ್ಬೊಬ್ಬರಾಗಿಯೇ ಕೆಳಗಿಳಿದರು'' ಎಂದು ಕುಶಾಲ್ ವಿವರಿಸಿದರು.
ದಿಕ್ಕೇ ತೋಚದಂತಾಯಿತು
''ರಾತ್ರಿ ತಡವಾಗಿ ಮಲಗಿದ್ದೆ. ನಿದ್ರೆ ಪೂರ್ಣವಾಗಿ ಹತ್ತಿರಲ್ಲಿ. ಅಷ್ಟರಲ್ಲೇ ಭಾರಿ ಸದ್ದಿನೊಂದಿಗೆ ಕಂಪನವಾಯಿತು. ಯೋಚನೆ ಮಾಡದೇ ಮಗನನ್ನು ಹೆಗಲ ಮೇಲೆ ಹೊತ್ತು, ಪತ್ನಿ ಮತ್ತು ಮನೆಗೆ ಬಂದಿದ್ದ ಅತಿಥಿಯ ಜೊತೆಗೆ ಕೆಳಗೆ ಇಳಿಯಲು ಮುಂದಾದೆವು. ಹೊರಗೆ ಹೋಗಬೇಕೆಂದರೆ ದಾರಿಯೇ ಇರಲಿಲ್ಲ. ಒಂದು ಕ್ಷಣ ದಿಕ್ಕು ದೋಚದಂತಾಯಿತು'' ಎಂದು ಮಂಜೀತ್ ಸಿಂಗ್ ಹೇಳಿದರು.
''3 ವರ್ಷಗಳಿಂದ ಈ ಮನೆಯಲ್ಲಿ ಬಾಡಿಗೆಗೆ ಇದ್ದೇನೆ. ಮೊದಲನೇ ಮಹಡಿಯಿಂದ ಕೆಳಗೆ ಹೇಗೆ ಬಂದೆವು ಎನ್ನುವುದೇ ಗೊತ್ತಾಗಲಿಲ್ಲ. ಕಟ್ಟಿಗೆ ತುಂಡುಗಳ ಮೇಲೆ ಕಾಲಿಟ್ಟು ಸ್ಥಳೀಯರ ನೆರವಿನೊಂದಿಗೆ ಹೊರಗೆ ಬಂದೆವು. ರಾತ್ರಿಯಿಂದ ಬೀದಿಯಲ್ಲೇ ನಿಂತಿದ್ದೇವೆ. ಸ್ನೇಹಿತರು, ಸಂಬಂಧಿಕರು ಬಂದು ಧೈರ್ಯ ತುಂಬುತ್ತಿದ್ದಾರೆ. ಜೀವ ಉಳಿಯಿತಲ್ಲ ಎಂಬ ಸಮಾಧಾನ ,''ಎಂದು ಮಂಜೀತ್ ಹೇಳಿದರು.
ಕಿಟಕಿ ಮೂಲಕ ಇಳಿದ ಗರ್ಭಿಣಿ
ಸಾಯಿ ಆದಿ ಅಂಬಲ್ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದ ಗರ್ಭಿಣಿಯಬ್ಬರು ಕಿಟಕಿಯಿಂದ ಹೊರ ಬಂದು, ಕಟ್ಟಡ ನಿರ್ಮಾಣಕ್ಕೆ ಇರಿಸಲಾಗಿದ್ದ ಕಟ್ಟಿಗೆಗಳ ಮೇಲೆ ಕಾಲಿಟ್ಟು ಕೆಳಗೆ ಇಳಿದು ಬಚಾವ್ ಆಗಿದ್ದಾರೆ.
''ನಾನು ನನ್ನ ಸೊಸೆ, ಮಗ ಮನೆಯಲ್ಲಿದ್ದೆವು. ಆಕೆ ಗರ್ಭಿಣಿ. ಕಟ್ಟಡ ಕುಸಿದು ಬಾಗಿಲುಗಳು ಬ್ಲಾಕ್ ಆಗಿದ್ದವು. ಆದರೂ, ಒಳಗಿದ್ದ ಟೈಲ್ಸ್, ಕಟ್ಟಿಗೆ ತುಂಡುಗಳನ್ನು ಬಳಸಿ ಬಲವಾಗಿ ಹೊಡೆದು ಬಾಗಿಲು ಮುರಿದೆವು. ನಂತರ ಒಂದನೇ ಮಹಡಿಗೆ ಬಂದು ಅಲ್ಲಿಂದ ಕಟ್ಟಿಗೆಗಳ ಮೇಲೆ ಮತ್ತು ಮುರಿದ ಕಾಂಪೌಂಡ್ ಮೇಲೆ ಕಾಲಿಟ್ಟು ಹೊರ ಬಂದೆವು. ಸ್ಥಳೀಯರು ಕೆಳಗೆ ಇಳಿಯಲು ನೆರವಾದರು. ಅಗ್ನಿಶಾಮಕ ರಕ್ಷಣಾ ಸಿಬ್ಬಂದಿ ಬರುವವರೆಗೂ ಕಾಯುವ ತಾಳ್ಮೆ ಇರಲಿಲ್ಲ. ಕಟ್ಟಡದಲ್ಲಿ ಬಿರುಕುಗಳು ಇದ್ದ ಕಾರಣ ಏನಾಗುತ್ತದೋ ಎಂದು ಭಯ ಕಾಡುತ್ತಿತ್ತು,'' ಎಂದು ವೃದ್ಧೆ ಗಾಯತ್ರಿ ಹೇಳಿದರು.
''ಕಟ್ಟಡದಲ್ಲಿ ಹಲವು ತಿಂಗಳುಗಳಿಂದ ಬಾಡಿಗೆಗೆ ಇದ್ದೆವು. ಇತ್ತೀಚೆಗಷ್ಟೇ ಸಾಲ ಮಾಡಿ ಖರೀದಿ ಮಾಡಿದ್ದೇವೆ. ಆದರೆ, ಅಷ್ಟರಲ್ಲೇ ಕಟ್ಟಡ ಕುಸಿದಿರುವುದು ದಿಕ್ಕು ತೋಚದಂತಾಗಿದೆ. ಆದರೆ, ಜೀವ ಉಳಿಯಿತು,'' ಎಂದು ಗಾಯತ್ರಿ ಹೇಳಿದರು.
ವಾಹನಗಳು ಜಖಂ
ಸಾಯಿ ಆದಿ ಅಂಬಲ್ ಅಪಾರ್ಟ್ಮೆಂಟ್ನಲ್ಲಿ ನೆಲಮಹಡಿಯಲ್ಲಿ ನಿಲ್ಲಿಸಲಾಗಿದ್ದ 2 ಕಾರು, 3 ಬೈಕ್ಗಳು ಅಪ್ಪಚ್ಚಿಯಾಗಿವೆ.
ಶವ ಹೊರ ತೆಗೆಯಲು ಹರಸಾಹಸ
ಒಳಗೆ ಸಿಲುಕಿದವರು ಮತ್ತು ಶವಗಳನ್ನು ತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟರು. ನಿರ್ಮಾಣ ಹಂತದ ಕಟ್ಟಡದ ನೆಲಮಹಡಿಯಲ್ಲಿ ಒಳಗೆ ಹೋಗಲು ಜಾಗವೇ ಇರಲಿಲ್ಲ. ಹೀಗಾಗಿ, ಒಂದು ಬದಿಯಲ್ಲಿ ಗೋಡೆಯನ್ನು ಕೊರೆದು ಅದರ ಮೂಲಕ ಒಳಗೆ ಹೋದರು. ಆದರೆ, ಅಲ್ಲಿಂದ ಮುಂದಕ್ಕೆ ಕಾರ್ಮಿಕರು ಇರುವ ಕಡೆ ಹೋಗಲು ಕೆಳಗೆ ಜಾಗ ಇಲ್ಲದ ಕಾರಣ ಕೆಳಗೆ ಮತ್ತೊಂದು ರಂಧ್ರವನ್ನು ಕೊರೆದು ಕೆಳಗೆ ಇಳಿದರು. ಗಾಯಗೊಂಡಿದ್ದ ನಾಲ್ವರನ್ನು ರಕ್ಷಿಸಲಾಯಿತು. ಉಳಿದ ಇಬ್ಬರ ಶವಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಮತ್ತೊಬ್ಬನ ಶವದ ಅರ್ಧ ಭಾಗದ ಮೇಲೆ ಗೋಡೆ ಭಾಗ ನಿಂತಿದ್ದ ಕಾರಣ ಅದನ್ನು ತೆರವು ಮಾಡಲು ಸಂಜೆವರೆಗೂ ಸಮಯ ತೆಗೆದುಕೊಳ್ಳಲಾಯಿತು.
ಕುಸಿದಿರುವ ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲಿನ ಸಾಯಿ ಆದಿ ಅಂಬಲ್ ಕಟ್ಟಡದ 2ನೇ ಮಹಡಿಯಲ್ಲಿ ಬಾಡಿಗೆಗೆ ವಾಸವಿರುವ ಕುಶಾಲ್ ಎಂಬುವರ ಆತಂಕದ ನುಡಿಗಳಿವು. ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಕುಶಾಲ್, 10 ತಿಂಗಳಿಂದ ಇಲ್ಲಿ ಬಾಡಿಗೆಗೆ ವಾಸವಿದ್ದಾರೆ.
''ರಾತ್ರಿ 1.58 ಆಗಿರಬಹುದು. ಬೆಡ್ ಅಲುಗಾಡಿತು. ಬಾಲ್ಕನಿಯಿಂದ ಹೊರ ಬಂದಾಗ ಅನಾಹುತ ಆಗಿರುವುದು ಗೊತ್ತಾಗಿಯಿತು. ಬಾಗಿಲು ಜಾಮ್ ಆಗಿದ್ದ ಕಾರಣ ಅದನ್ನು ತೆರೆಯಲು ಆಗಲಿಲ್ಲ. ಆದರೂ, ಬಲ ಪ್ರಯೋಗಿಸಿ ಹೇಗೋ ಬಾಗಿಲು ತೆಗೆದುಕೊಂಡು ಹೊರ ಬಂದೆ. ನಂತರ ಕೆಳ ಭಾಗಕ್ಕೆ ಹೋಗಲು ಸಾಧ್ಯವೇ ಇರಲಿಲ್ಲ. ಹೀಗಾಗಿ, 1ನೇ ಮಹಡಿಗೆ ಬಂದು ಗ್ರಿಲ್ ಇಲ್ಲದ ಕಿಟಕಿ ಮೂಲಕ ಪಕ್ಕದಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ಅಳವಡಿಸಲಾಗಿದ್ದ ಕಟ್ಟಿಗೆಗಳ ಮೇಲೆ ಕಾಲಿಟ್ಟು, ಅಲ್ಲಿಂದ ಕಾಂಪೌಂಡ್ ಮೇಲೆ ಕಾಲಿಟ್ಟು ಹರಸಾಹಸ ಪಟ್ಟು ಕೆಳಗೆ ಇಳಿದೆ. ಕೆಳಭಾಗದಲ್ಲಿ ಕೂಗಾಟ ಕಿರುಚಾಟ ಕೇಳಿಸುತ್ತಿತ್ತು. ಎಲ್ಲರಿಗೂ ತಮ್ಮ ತಮ್ಮ ಜೀವ ಉಳಿಸಿಕೊಳ್ಳುವ ಆತುರ. ಮೇಲಿನ ಮಹಡಿಯವರು ಕೂಡಾ ಕೆಳಗೆ ಬಂದು ಒಬ್ಬೊಬ್ಬರಾಗಿಯೇ ಕೆಳಗಿಳಿದರು'' ಎಂದು ಕುಶಾಲ್ ವಿವರಿಸಿದರು.
ದಿಕ್ಕೇ ತೋಚದಂತಾಯಿತು
''ರಾತ್ರಿ ತಡವಾಗಿ ಮಲಗಿದ್ದೆ. ನಿದ್ರೆ ಪೂರ್ಣವಾಗಿ ಹತ್ತಿರಲ್ಲಿ. ಅಷ್ಟರಲ್ಲೇ ಭಾರಿ ಸದ್ದಿನೊಂದಿಗೆ ಕಂಪನವಾಯಿತು. ಯೋಚನೆ ಮಾಡದೇ ಮಗನನ್ನು ಹೆಗಲ ಮೇಲೆ ಹೊತ್ತು, ಪತ್ನಿ ಮತ್ತು ಮನೆಗೆ ಬಂದಿದ್ದ ಅತಿಥಿಯ ಜೊತೆಗೆ ಕೆಳಗೆ ಇಳಿಯಲು ಮುಂದಾದೆವು. ಹೊರಗೆ ಹೋಗಬೇಕೆಂದರೆ ದಾರಿಯೇ ಇರಲಿಲ್ಲ. ಒಂದು ಕ್ಷಣ ದಿಕ್ಕು ದೋಚದಂತಾಯಿತು'' ಎಂದು ಮಂಜೀತ್ ಸಿಂಗ್ ಹೇಳಿದರು.
''3 ವರ್ಷಗಳಿಂದ ಈ ಮನೆಯಲ್ಲಿ ಬಾಡಿಗೆಗೆ ಇದ್ದೇನೆ. ಮೊದಲನೇ ಮಹಡಿಯಿಂದ ಕೆಳಗೆ ಹೇಗೆ ಬಂದೆವು ಎನ್ನುವುದೇ ಗೊತ್ತಾಗಲಿಲ್ಲ. ಕಟ್ಟಿಗೆ ತುಂಡುಗಳ ಮೇಲೆ ಕಾಲಿಟ್ಟು ಸ್ಥಳೀಯರ ನೆರವಿನೊಂದಿಗೆ ಹೊರಗೆ ಬಂದೆವು. ರಾತ್ರಿಯಿಂದ ಬೀದಿಯಲ್ಲೇ ನಿಂತಿದ್ದೇವೆ. ಸ್ನೇಹಿತರು, ಸಂಬಂಧಿಕರು ಬಂದು ಧೈರ್ಯ ತುಂಬುತ್ತಿದ್ದಾರೆ. ಜೀವ ಉಳಿಯಿತಲ್ಲ ಎಂಬ ಸಮಾಧಾನ ,''ಎಂದು ಮಂಜೀತ್ ಹೇಳಿದರು.
ಕಿಟಕಿ ಮೂಲಕ ಇಳಿದ ಗರ್ಭಿಣಿ
ಸಾಯಿ ಆದಿ ಅಂಬಲ್ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದ ಗರ್ಭಿಣಿಯಬ್ಬರು ಕಿಟಕಿಯಿಂದ ಹೊರ ಬಂದು, ಕಟ್ಟಡ ನಿರ್ಮಾಣಕ್ಕೆ ಇರಿಸಲಾಗಿದ್ದ ಕಟ್ಟಿಗೆಗಳ ಮೇಲೆ ಕಾಲಿಟ್ಟು ಕೆಳಗೆ ಇಳಿದು ಬಚಾವ್ ಆಗಿದ್ದಾರೆ.
''ನಾನು ನನ್ನ ಸೊಸೆ, ಮಗ ಮನೆಯಲ್ಲಿದ್ದೆವು. ಆಕೆ ಗರ್ಭಿಣಿ. ಕಟ್ಟಡ ಕುಸಿದು ಬಾಗಿಲುಗಳು ಬ್ಲಾಕ್ ಆಗಿದ್ದವು. ಆದರೂ, ಒಳಗಿದ್ದ ಟೈಲ್ಸ್, ಕಟ್ಟಿಗೆ ತುಂಡುಗಳನ್ನು ಬಳಸಿ ಬಲವಾಗಿ ಹೊಡೆದು ಬಾಗಿಲು ಮುರಿದೆವು. ನಂತರ ಒಂದನೇ ಮಹಡಿಗೆ ಬಂದು ಅಲ್ಲಿಂದ ಕಟ್ಟಿಗೆಗಳ ಮೇಲೆ ಮತ್ತು ಮುರಿದ ಕಾಂಪೌಂಡ್ ಮೇಲೆ ಕಾಲಿಟ್ಟು ಹೊರ ಬಂದೆವು. ಸ್ಥಳೀಯರು ಕೆಳಗೆ ಇಳಿಯಲು ನೆರವಾದರು. ಅಗ್ನಿಶಾಮಕ ರಕ್ಷಣಾ ಸಿಬ್ಬಂದಿ ಬರುವವರೆಗೂ ಕಾಯುವ ತಾಳ್ಮೆ ಇರಲಿಲ್ಲ. ಕಟ್ಟಡದಲ್ಲಿ ಬಿರುಕುಗಳು ಇದ್ದ ಕಾರಣ ಏನಾಗುತ್ತದೋ ಎಂದು ಭಯ ಕಾಡುತ್ತಿತ್ತು,'' ಎಂದು ವೃದ್ಧೆ ಗಾಯತ್ರಿ ಹೇಳಿದರು.
''ಕಟ್ಟಡದಲ್ಲಿ ಹಲವು ತಿಂಗಳುಗಳಿಂದ ಬಾಡಿಗೆಗೆ ಇದ್ದೆವು. ಇತ್ತೀಚೆಗಷ್ಟೇ ಸಾಲ ಮಾಡಿ ಖರೀದಿ ಮಾಡಿದ್ದೇವೆ. ಆದರೆ, ಅಷ್ಟರಲ್ಲೇ ಕಟ್ಟಡ ಕುಸಿದಿರುವುದು ದಿಕ್ಕು ತೋಚದಂತಾಗಿದೆ. ಆದರೆ, ಜೀವ ಉಳಿಯಿತು,'' ಎಂದು ಗಾಯತ್ರಿ ಹೇಳಿದರು.
ವಾಹನಗಳು ಜಖಂ
ಸಾಯಿ ಆದಿ ಅಂಬಲ್ ಅಪಾರ್ಟ್ಮೆಂಟ್ನಲ್ಲಿ ನೆಲಮಹಡಿಯಲ್ಲಿ ನಿಲ್ಲಿಸಲಾಗಿದ್ದ 2 ಕಾರು, 3 ಬೈಕ್ಗಳು ಅಪ್ಪಚ್ಚಿಯಾಗಿವೆ.
ಶವ ಹೊರ ತೆಗೆಯಲು ಹರಸಾಹಸ
ಒಳಗೆ ಸಿಲುಕಿದವರು ಮತ್ತು ಶವಗಳನ್ನು ತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟರು. ನಿರ್ಮಾಣ ಹಂತದ ಕಟ್ಟಡದ ನೆಲಮಹಡಿಯಲ್ಲಿ ಒಳಗೆ ಹೋಗಲು ಜಾಗವೇ ಇರಲಿಲ್ಲ. ಹೀಗಾಗಿ, ಒಂದು ಬದಿಯಲ್ಲಿ ಗೋಡೆಯನ್ನು ಕೊರೆದು ಅದರ ಮೂಲಕ ಒಳಗೆ ಹೋದರು. ಆದರೆ, ಅಲ್ಲಿಂದ ಮುಂದಕ್ಕೆ ಕಾರ್ಮಿಕರು ಇರುವ ಕಡೆ ಹೋಗಲು ಕೆಳಗೆ ಜಾಗ ಇಲ್ಲದ ಕಾರಣ ಕೆಳಗೆ ಮತ್ತೊಂದು ರಂಧ್ರವನ್ನು ಕೊರೆದು ಕೆಳಗೆ ಇಳಿದರು. ಗಾಯಗೊಂಡಿದ್ದ ನಾಲ್ವರನ್ನು ರಕ್ಷಿಸಲಾಯಿತು. ಉಳಿದ ಇಬ್ಬರ ಶವಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಮತ್ತೊಬ್ಬನ ಶವದ ಅರ್ಧ ಭಾಗದ ಮೇಲೆ ಗೋಡೆ ಭಾಗ ನಿಂತಿದ್ದ ಕಾರಣ ಅದನ್ನು ತೆರವು ಮಾಡಲು ಸಂಜೆವರೆಗೂ ಸಮಯ ತೆಗೆದುಕೊಳ್ಳಲಾಯಿತು.