ಆ್ಯಪ್ನಗರ

ಬೈಕ್‌ಗೆ ಒಂಟೆ ಡಿಕ್ಕಿ ಹೊಡೆದು ಬೆಂಗಳೂರಿನ ಸೆಲೆಬ್ರಿಟಿ ಬೈಕರ್‌ ಕಿಂಗ್‌ ರಿಚರ್ಡ್‌ ಶ್ರೀನಿವಾಸನ್‌ ಸಾವು!

​​ಬಿಎಂಡಬ್ಲ್ಯುಜಿಎಸ್‌ ಬೈಕ್‌ ಸವಾರಿ ಮಾಡುತ್ತಿದ್ದ ರಿಚರ್ಡ್‌, ದಿಢೀರನೇ ಅಡ್ಡ ಬಂದ ಒಂಟೆಗೆ ಗುದ್ದಿದ ಪರಿಣಾಮ ಕೆಳಗೆ ಬಿದ್ದಿದ್ದಾರೆ. ತಲೆಯಿಂದ ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ರಾಜಸ್ಥಾನದ ಪೊಲೀಸ್‌ ಅಧಿಕಾರಿ ಕರಣ್‌ ಸಿಂಗ್‌ ಚರಣ್‌ ಹೇಳಿದ್ದಾರೆ. ಬೆಂಗಳೂರಿನ ಖ್ಯಾತ ಬೈಕರ್ ಭಾರತದ ಪ್ರಮುಖ ಸೆಲೆಬ್ರಿಟಿ ಬೈಕರ್‌ಗಳಲ್ಲಿ ಶ್ರೀನಿವಾಸ್‌ ಕೂಡ ಒಬ್ಬರು.

Vijaya Karnataka Web 16 Jan 2021, 7:29 am
ಬೆಂಗಳೂರು: ಬೆಂಗಳೂರಿನ ಹೆಸರಾಂತ ಕ್ರಾಸ್‌ಕಂಟ್ರಿ ಬೈಕರ್‌ ಕಿಂಗ್‌ ರಿಚರ್ಡ್‌ ಶ್ರೀನಿವಾಸನ್‌ ಬುಧವಾರ ತಡರಾತ್ರಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಆಕಸ್ಮಿಕ ಸಾವಿಗೀಡಾಗಿದ್ದಾರೆ. ರಿಚರ್ಡ್‌ ಓಡಿಸುತ್ತಿದ್ದ ಬೈಕ್‌ಗೆ ಒಂಟೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
Vijaya Karnataka Web King Richard Srinivas


ಬೈಕ್‌ ಮೂಲಕ ಐದು ಖಂಡಗಳ 37 ದೇಶಗಳಲ್ಲಿ 65 ಸಾವಿರ ಕಿಲೋಮೀಟರ್‌ ಕ್ರಮಿಸಿದ್ದ ರಿಚರ್ಡ್‌ ಬುಧವಾರ ಜೈಸಲ್ಮೇರ್‌ನಲ್ಲಿದ್ದ ವೇಳೆ ಅವಘಡ ಸಂಭವಿಸಿದೆ. ಮರಣೋತ್ತರ ಪರೀಕ್ಷೆ ನಂತರ ಗುರುವಾರ ಪಾರ್ಥಿವ ಶರೀರವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಬಿಎಂಡಬ್ಲ್ಯುಜಿಎಸ್‌ ಬೈಕ್‌ ಸವಾರಿ ಮಾಡುತ್ತಿದ್ದ ರಿಚರ್ಡ್‌, ದಿಢೀರನೇ ಅಡ್ಡ ಬಂದ ಒಂಟೆಗೆ ಗುದ್ದಿದ ಪರಿಣಾಮ ಕೆಳಗೆ ಬಿದ್ದಿದ್ದಾರೆ. ತಲೆಯಿಂದ ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ರಾಜಸ್ಥಾನದ ಪೊಲೀಸ್‌ ಅಧಿಕಾರಿ ಕರಣ್‌ ಸಿಂಗ್‌ ಚರಣ್‌ ಹೇಳಿದ್ದಾರೆ. ಬೆಂಗಳೂರಿನ ಖ್ಯಾತ ಬೈಕರ್ ಭಾರತದ ಪ್ರಮುಖ ಸೆಲೆಬ್ರಿಟಿ ಬೈಕರ್‌ಗಳಲ್ಲಿ ಶ್ರೀನಿವಾಸ್‌ ಕೂಡ ಒಬ್ಬರು.

ಬೆಂಗಳೂರಿನಲ್ಲಿ ಇಂದು ರೈತ ಹೋರಾಟದ ರಾಷ್ಟ್ರೀಯ ನಾಯಕರೊಡನೆ ಮುಕ್ತ ಸಂವಾದ

ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ನೂರು ಕಿಲೋಮೀಟರ್ ಸ್ಪೀಡ್ ನಲ್ಲಿ ಬೈಕ್ ಓಡಿಸಬಲ್ಲ ನಿಸ್ಸೀಮ ಕಿಂಗ್ ರಿಚರ್ಡ್ ಶ್ರೀನಿವಾಸನ್ ಇದೀಗ ಬೈಕ್‌ ಬಳಿಯಲ್ಲೇ ಕೊನೆಯುಸಿರೆಳೆದಿರುವುದು ನಿಜಕ್ಕೂ ದುರಂತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ