ಯಲಹಂಕ: ಸೋಮವಾರ (ಸೆ. 30)ದಂದು ತಾಲೂಕಿನ ಕಾಕೋಳು ಗ್ರಾಮ ತಳಿರು ತೋರಣದಿಂದ ಕಂಗೊಳಿಸುತ್ತಿತ್ತು. ರಸ್ತೆಯುದ್ದಕ್ಕೂ ರಂಗೋಲಿ ಹಾಕಲಾಗಿತ್ತು. ಊರಿನ ಎಲ್ಲೇ ನೋಡಿದರೂ ಹಬ್ಬದ ವಾತಾವರಣ ನೆಲೆಸಿತ್ತು. ಶಾಲಾ ವಿದ್ಯಾರ್ಥಿಗಳಂತೂ ಕಳಸ ಹೊತ್ತು ಸಂಭ್ರಮಿಸುತ್ತಿದ್ದರು...
ಅದು 35 ವರ್ಷಗಳ ಸೇವೆ ಸಲ್ಲಿಸಿದ ಕಾಕೋಳು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಓಂಕಾರ್ ನಾಯಕ್ ಅವರ ಬೀಳ್ಕೊಡುಗೆ ಸಮಾರಂಭವಾಗಿತ್ತು. ಮುಖ್ಯ ಶಿಕ್ಷಕ ಹಾಗೂ ಅವರ ಧರ್ಮಪತ್ನಿಯನ್ನು ಬೆಳ್ಳಿ ರಥದಲ್ಲಿಕೂರಿಸಿದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಅವರನ್ನು ಮೆರವಣಿಗೆಯಲ್ಲಿಕರೆತಂದರು. ಶಾಲೆಯ ವಿದ್ಯಾರ್ಥಿಗಳು ಮಂಗಳ ವಾದ್ಯದೊಂದಿಗೆ ಹೆಜ್ಜೆ ಹಾಕುತ್ತಾ ನಿವೃತ್ತ ಶಿಕ್ಷಕರಿಗೆ ಜೈಕಾರ ಹಾಕುತ್ತಿದ್ದರೆ, ಹಳೆ ವಿದ್ಯಾರ್ಥಿಗಳು ಹೂಮಳೆಗರೆದರು. ಕಳೆದ 35 ವರ್ಷಗಳಿಂದ ಆತ್ಮೀಯ ಒಡನಾಟವಿಟ್ಟುಕೊಂಡಿದ್ದ ಗ್ರಾಮದ ಹಿರಿಯರು ಅವರಿಗೆ ಕೈಮುಗಿದರೆ, ವಿದ್ಯಾರ್ಥಿಗಳು ನೆನಪಿನ ಕಾಣಿಕೆ ನೀಡಿ ಕಣ್ಣೀರಿನೊಂದಿಗೆ ಅವರನ್ನು ಬೀಳ್ಕೊಟ್ಟರು. ಇದನ್ನೆಲ್ಲನೋಡಿ ಮುಖ್ಯ ಶಿಕ್ಷಕರ ಕಣ್ಣಲ್ಲಿಆನಂದಬಾಷ್ಪ ಹರಿಯುತ್ತಿತ್ತು. ಅದೊಂದು ಅಪರೂಪದ, ಅನಿರ್ವಚನೀಯ ಅನುಭವವಾಗಿತ್ತು.
''ನಿಮ್ಮ ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು. ನಿಮ್ಮೆಲ್ಲರ ಅಭಿಮಾನಕ್ಕೆ ನಾನು ಆಭಾರಿಯಾಗಿದ್ದೇನೆ,'' ಎಂದೆನ್ನುತ್ತಾ ಓಂಕಾರ್ ನಾಯಕ್ ಅವರು ಭಾವುಕರಾದರು.
ಕಾರ್ಯಕ್ರಮದಲ್ಲಿಭಾಗವಹಿಸಿದವರಿಗೆ ಹಳೆ ವಿದ್ಯಾರ್ಥಿಗಳಿಂದ ಹೋಳಿಗೆಯೂಟದ ವ್ಯವಸ್ಥೆ ಮಾಡಲಾಗಿತ್ತು.
ಅದು 35 ವರ್ಷಗಳ ಸೇವೆ ಸಲ್ಲಿಸಿದ ಕಾಕೋಳು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಓಂಕಾರ್ ನಾಯಕ್ ಅವರ ಬೀಳ್ಕೊಡುಗೆ ಸಮಾರಂಭವಾಗಿತ್ತು. ಮುಖ್ಯ ಶಿಕ್ಷಕ ಹಾಗೂ ಅವರ ಧರ್ಮಪತ್ನಿಯನ್ನು ಬೆಳ್ಳಿ ರಥದಲ್ಲಿಕೂರಿಸಿದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಅವರನ್ನು ಮೆರವಣಿಗೆಯಲ್ಲಿಕರೆತಂದರು. ಶಾಲೆಯ ವಿದ್ಯಾರ್ಥಿಗಳು ಮಂಗಳ ವಾದ್ಯದೊಂದಿಗೆ ಹೆಜ್ಜೆ ಹಾಕುತ್ತಾ ನಿವೃತ್ತ ಶಿಕ್ಷಕರಿಗೆ ಜೈಕಾರ ಹಾಕುತ್ತಿದ್ದರೆ, ಹಳೆ ವಿದ್ಯಾರ್ಥಿಗಳು ಹೂಮಳೆಗರೆದರು. ಕಳೆದ 35 ವರ್ಷಗಳಿಂದ ಆತ್ಮೀಯ ಒಡನಾಟವಿಟ್ಟುಕೊಂಡಿದ್ದ ಗ್ರಾಮದ ಹಿರಿಯರು ಅವರಿಗೆ ಕೈಮುಗಿದರೆ, ವಿದ್ಯಾರ್ಥಿಗಳು ನೆನಪಿನ ಕಾಣಿಕೆ ನೀಡಿ ಕಣ್ಣೀರಿನೊಂದಿಗೆ ಅವರನ್ನು ಬೀಳ್ಕೊಟ್ಟರು. ಇದನ್ನೆಲ್ಲನೋಡಿ ಮುಖ್ಯ ಶಿಕ್ಷಕರ ಕಣ್ಣಲ್ಲಿಆನಂದಬಾಷ್ಪ ಹರಿಯುತ್ತಿತ್ತು. ಅದೊಂದು ಅಪರೂಪದ, ಅನಿರ್ವಚನೀಯ ಅನುಭವವಾಗಿತ್ತು.
''ನಿಮ್ಮ ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು. ನಿಮ್ಮೆಲ್ಲರ ಅಭಿಮಾನಕ್ಕೆ ನಾನು ಆಭಾರಿಯಾಗಿದ್ದೇನೆ,'' ಎಂದೆನ್ನುತ್ತಾ ಓಂಕಾರ್ ನಾಯಕ್ ಅವರು ಭಾವುಕರಾದರು.
ಕಾರ್ಯಕ್ರಮದಲ್ಲಿಭಾಗವಹಿಸಿದವರಿಗೆ ಹಳೆ ವಿದ್ಯಾರ್ಥಿಗಳಿಂದ ಹೋಳಿಗೆಯೂಟದ ವ್ಯವಸ್ಥೆ ಮಾಡಲಾಗಿತ್ತು.