ಆನೇಕಲ್ (ಬೆಂಗಳೂರು): ಫಾಸ್ಟ್ಟ್ಯಾಗ್ ಸಮರ್ಪಕವಾಗಿ ಸ್ಕ್ಯಾನ್ ಆಗದೆ ಹಣ ಕಟ್ಟುವ ವಿಚಾರದಲ್ಲಿ ವಾಗ್ವಾದ ಉಂಟಾಗಿ ಟೋಲ್ ಸಿಬ್ಬಂದಿ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ. ಈ ಸಂಬಂಧ 7 ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅತ್ತಿಬೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 7ರ ಟೋಲ್ ಬಳಿ ಜಗದೀಶ್ ಎಂಬುವವರು ಚಲಾಯಿಸುತ್ತಿದ್ದ ಪಿಕಪ್ ವಾಹನ ಹೊಸೂರು ಕಡೆಯಿಂದ ಬೆಂಗಳೂರಿನತ್ತ ಬರುತ್ತಿದ್ದಾಗ ವಾಹನದ ಫಾಸ್ಟ್ ಟ್ಯಾಗ್ ರೀಡ್ ಆಗಿರಲಿಲ್ಲ. ಹಣ ಕಟ್ಟಿ ತೆರಳುವಂತೆ ಟೋಲ್ ಬೂತ್ನಲ್ಲಿದ್ದ ಮಹಿಳೆ ತಿಳಿಸಿದ್ದರು. ಫಾಸ್ಟ್ಟ್ಯಾಗ್ ಇರುವ ಕಾರಣ ಹಣ ಕಟ್ಟುವುದಿಲ್ಲ ಎಂದು ಜಗದೀಶ್ ಪಟ್ಟು ಹಿಡಿದಿದ್ದರು.
ಈ ವೇಳೆ ವಾಗ್ವಾದ ತಾರಕಕ್ಕೇರಿದೆ. ಟೋಲ್ ಕೇಂದ್ರದ ಮಹಿಳೆ ಜಗದೀಶ್ ಕಪಾಳಕ್ಕೆ ಹೊಡೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಜಗದೀಶ್ ಧ್ವನಿ ಏರಿಸಿ ಮಾತನಾಡಿದ್ದಾರೆ. ಈ ವೇಳೆ ಟೋಲ್ನಲ್ಲಿದ್ದ ಸಿಬ್ಬಂದಿ ಅಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಟೋಲ್ ಕೇಂದ್ರದ ಕಚೇರಿಗೆ ಎಳೆದೊಯ್ದು ಪೈಪ್ ಹಾಗೂ ರಾಡ್ನಿಂದ ಥಳಿಸಿದ್ದಾರೆ. ಬಿಡಿಸಲು ಮುಂದಾದ ಜಗದೀಶ್ ಅವರ ಸಹಾಯಕನ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಟೋಲ್ನಲ್ಲಿ ಹಣ ಪಾವತಿಸಿದರೂ ಮಾನಸಿಕ ಹಿಂಸೆ!
ಚಾಲಕನ ಮೇಲೆ ಹಲ್ಲೆ ಖಂಡಿಸಿ ಆನೇಕಲ್ನಲ್ಲಿ ಚಾಲಕರ ಸಂಘದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಟೋಲ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಲಾಯಿತು. ತನಿಖೆ ನಡೆಸಿದ ಪೊಲೀಸರು 7 ಟೋಲ್ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಟ್ಯಾಗ್ ಬಂದರೂ ಫಾಸ್ಟ್ ಆಗಿಲ್ಲ, ಕಿಲೋಮೀಟರ್ ಗಟ್ಟಲೆ ಕ್ಯೂ ತಪ್ಪಿಲ್ಲ!
ಈ ವೇಳೆ ವಾಗ್ವಾದ ತಾರಕಕ್ಕೇರಿದೆ. ಟೋಲ್ ಕೇಂದ್ರದ ಮಹಿಳೆ ಜಗದೀಶ್ ಕಪಾಳಕ್ಕೆ ಹೊಡೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಜಗದೀಶ್ ಧ್ವನಿ ಏರಿಸಿ ಮಾತನಾಡಿದ್ದಾರೆ. ಈ ವೇಳೆ ಟೋಲ್ನಲ್ಲಿದ್ದ ಸಿಬ್ಬಂದಿ ಅಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಟೋಲ್ ಕೇಂದ್ರದ ಕಚೇರಿಗೆ ಎಳೆದೊಯ್ದು ಪೈಪ್ ಹಾಗೂ ರಾಡ್ನಿಂದ ಥಳಿಸಿದ್ದಾರೆ. ಬಿಡಿಸಲು ಮುಂದಾದ ಜಗದೀಶ್ ಅವರ ಸಹಾಯಕನ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಟೋಲ್ನಲ್ಲಿ ಹಣ ಪಾವತಿಸಿದರೂ ಮಾನಸಿಕ ಹಿಂಸೆ!
ಚಾಲಕನ ಮೇಲೆ ಹಲ್ಲೆ ಖಂಡಿಸಿ ಆನೇಕಲ್ನಲ್ಲಿ ಚಾಲಕರ ಸಂಘದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಟೋಲ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಲಾಯಿತು. ತನಿಖೆ ನಡೆಸಿದ ಪೊಲೀಸರು 7 ಟೋಲ್ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಟ್ಯಾಗ್ ಬಂದರೂ ಫಾಸ್ಟ್ ಆಗಿಲ್ಲ, ಕಿಲೋಮೀಟರ್ ಗಟ್ಟಲೆ ಕ್ಯೂ ತಪ್ಪಿಲ್ಲ!