ಆ್ಯಪ್ನಗರ

ಇಸ್ಕಾನ್‌ ದೇವಾಲಯದಲ್ಲಿ ಏ.18ರಿಂದ 29ರವರೆಗೆ ಶ್ರೀ ಬ್ರಹ್ಮರಥೋತ್ಸವ

ಇಸ್ಕಾನ್‌ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ಅಂಗವಾಗಿ ಏ.18ರಿಂದ 29ರವರೆಗೆ ಹಲವು ಧಾರ್ಮಿಕ ಮತ್ತು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Vijaya Karnataka 10 Apr 2019, 5:00 am
ಬೆಂಗಳೂರು: ಇಸ್ಕಾನ್‌ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ಅಂಗವಾಗಿ ಏ.18ರಿಂದ 29ರವರೆಗೆ ಹಲವು ಧಾರ್ಮಿಕ ಮತ್ತು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
Vijaya Karnataka Web 7EF7FDFD-78D7-4828-9CFA-A0A2B2C8C468


ಏ.17ರಂದು ಸಂಜೆ 6ಗಂಟೆಗೆ ಗರುಡ ಪಾಠ ಪ್ರತಿಷ್ಠಾಹ, ವೈನತೇಯ ಹೋಮ ನಡೆಯಲಿದೆ. ಏ.18ರಂದು ಬೆಳಗ್ಗೆ 8 ಗಂಟೆಗೆ ಗರುಡ ಅಭಿಷೇಕ, ಧ್ವಜ ಆರೋಹಣ, ಅಷ್ಟ ದಿಕ್ಪಾಲಕ ಆವಾಹನ, ಸಂಜೆ 6.15ಕ್ಕೆ ಅನಂತ ಶೇಷ ವಾಹನ ಏರ್ಪಡಿಸಲಾಗಿದೆ. ಏ.19ರಂದು ಸಂಜೆ 6.15ಕ್ಕೆ ಚಂದ್ರ ಪ್ರಭ ವಾಹನ, 20ರಂದು ಸಂಜೆ 6ಕ್ಕೆ ಮಹಾಪಲ್ಲಕ್ಕಿ ನಡೆದರೆ, ಸಂಜೆ 6.30ಕ್ಕೆ ಸಿಂಗಪುರದ ರಿದಮ್ಸ್‌ ಆರ್ಟಿಸ್ಟಿಕ್‌ ಸೊಸೈಟಿ ವತಿಯಿಂದ 'ದತ್ತಾತ್ರೇಯೋಪಾದೇಶಂ' ಕುರಿತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಏ.21ರಂದು ಬೆಳಗ್ಗೆ 6.15ರಿಂದ ಕಾರ್ಯಕ್ರಮಗಳು ಆರಂಭವಾಗಲಿವೆ. ಸಂಜೆ 6.30ಕ್ಕೆ ರಿದಮ್ಸ್‌ ಆರ್ಟಿಸ್ಟಿಕ್‌ ಸೊಸೈಟಿ ಸಹಯೋಗದೊಂದಿಗೆ 'ಭೂಲೋಕ ವೈಕುಂಠ' ಕುರಿತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಏ.22ರಂದು ಸಂಜೆ 6.15ಕ್ಕೆ ಗರುಡ ವಾಹನ, 23ರಂದು ಹನುಮದ್‌ ವಾಹನ, 24ರಂದು ಹಂಸ ವಾಹನ, 25ರಂದು ಅಶ್ವ ವಾಹನ, 26ರಂದು ಗಜ ವಾಹನ, 27ರಂದು ಸಂಜೆ 6ಕ್ಕೆ ಬ್ರಹ್ಮ ರಥ ಏರ್ಪಡಿಸಲಾಗಿದೆ. ಅಂದು ಸಂಜೆ 6.30ಕ್ಕೆ ಚೆನ್ನೈನ ಕೂಚಿಪುಡಿ ಆರ್ಟ್‌ ಅಕಾಡೆಮಿಯಿಂದ ಕೃಷ್ಣನ ಕುರಿತು 'ನೀಲಗಾತ್ರಾಮೃತಂ' ಕುರಿತು ಕೂಚಿಪುಡಿ ನೃತ್ಯ ನಡೆಯಲಿದೆ. ಏ.28ರಂದು ಬೆಳಗ್ಗೆ 11ಕ್ಕೆ ಕಲ್ಯಾಣೋತ್ಸವ ನಡೆದರೆ, ಸಂಜೆ 6ಕ್ಕೆ ಚೂರ್ಣ ಅಭಿಷೇಕ ಹಾಗೂ ಕೊನೆಯ ದಿನವಾದ ಏ.29ರಂದು ಸಂಜೆ 6ಕ್ಕೆ ಪುಷ್ಪ ಪಲ್ಲಕ್ಕಿ, ತೆಪ್ಪೋತ್ಸವ ಹಾಗೂ ರಾತ್ರಿ 8ಕ್ಕೆ ಧ್ವಜ ಆರೋಹಣ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಲ್ಲಿರುವ ಇಸ್ಕಾನ್‌ ದೇವಾಲಯ ಆವರಣದ ಬಯಲು ರಂಗ ಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ, ಮುಖ್ಯ ಪ್ರಾಂಗಣಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ