ವಿಕ ಸುದ್ದಿಲೋಕ ಬೆಂಗಳೂರು
ವಿದೇಶ ಪ್ರವಾಸದ ಕುರಿತು ಪ್ರವಾಸಿಗರಿಗೆ ಪಾಸ್ಪೋರ್ಟ್ ಸೇರಿದಂತೆ ಪ್ರಯಾಣ ದಾಖಲೆಗಳ ಕುರಿತು ಸೂಕ್ತ ಮಾಹಿತಿಯನ್ನು ಒದಗಿಸದ ಟ್ರಾವೆಲ್ಸ್ ಕಂಪನಿ ಥಾಮಸ್ ಕುಕ್ ಇಂಡಿಯಾಗೆ ಗ್ರಾಹಕರ ನ್ಯಾಯಾಲಯ ದಂಡ ವಿಧಿಸಿದೆ.
ನಗರದ ಸಹೋದರಿಯರಿಬ್ಬರು ಥೈಲ್ಯಾಂಡ್ ಪ್ರವಾಸಕ್ಕೆ ಟೂರ್ ಪ್ಯಾಕೇಜ್ ಬುಕ್ ಮಾಡಿ, ಮುಂಬೈನಿಂದ ವಿಮಾನ ಹತ್ತಬೇಕು ಎನ್ನುವ ಹಂತದಲ್ಲಿ ಪ್ರವಾಸ ರದ್ದಾಗಿತ್ತು. ಇದರಿಂದ ಬೇಸರಗೊಂಡಿದ್ದ ಸಹೋದರಿಯರು, ಟ್ರಾವೆಲ್ಸ್ ಕಂಪನಿ ವಿರುದ್ಧ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸಹೋದರಿಯರು ಪ್ರವಾಸಕ್ಕೆ ಪಡೆದಿದ್ದ ಪ್ಯಾಕೇಜ್ ಮೊತ್ತದ ಜೊತೆಗೆ, ಬೆಂಗಳೂರಿನಿಂದ ಮುಂಬೈಗೆ ತೆರಳಲು ಮತ್ತು ವಾಪಸ್ ಮರಳಲು ಮಾಡಿಸಿದ್ದ ಏರ್ ಟಿಕೆಟ್ ಶುಲ್ಕ, ಟ್ಯಾಕ್ಸಿ ಶುಲ್ಕ ಸೇರಿ 84,318 ರೂ. ಮತ್ತು ಕಾನೂನು ಹೋರಾಟದ ಶುಲ್ಕವಾಗಿ 10 ಸಾವಿರ ರೂ. ಪಾವತಿ ಮಾಡುವಂತೆ ಥಾಮಸ್ ಕುಕ್ ಕಂಪನಿಗೆ ನ್ಯಾಯಾಲಯ ಸೂಚಿಸಿದೆ.
ಕೃಂಬಿಗಲ್ ರಸ್ತೆ ನಿವಾಸಿಗಳಾದ ಸೋನಿಯಾ ಸಿಂಗ್ ಮತ್ತು ಸುಪ್ರಿಯಾ ಸಿಂಗ್ 2014ರಲ್ಲಿ ಮಲ್ಲೇಶ್ವರದಲ್ಲಿರುವ ಥಾಮಸ್ ಕುಕ್ ಇಂಡಿಯಾ ಕಚೇರಿಗೆ ತೆರಳಿ 3 ರಾತ್ರಿ, 4 ದಿನಗಳ 'ಸಿಂಪ್ಲಿ ಥೈಲ್ಯಾಂಡ್' ಹೆಸರಿನ ಟೂರ್ ಪ್ಯಾಕೇಜ್ ಬಗ್ಗೆ ವಿಚಾರಿಸಿದ್ದರು. ಇಬ್ಬರಿಗೆ 57,318 ರೂ. ಶುಲ್ಕ ತಗುಲುತ್ತದೆ ಎಂದಿದ್ದ ಕಂಪನಿ ಪ್ರತಿನಿಧಿಗಳು , ಮುಂಗಡವಾಗಿ 10 ಸಾವಿರ ರೂ.ಯನ್ನು ಸ್ವೀಕರಿಸಿದ್ದರು. ಮೊದಲ ಬಾರಿ ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಕಾರಣ ಏನಾದರೂ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕೇ ಎಂದು ಟ್ರಾವೆಲ್ಸ್ ಕಚೇರಿಯಲ್ಲಿ ಸಹೋದರಿಯರು ಕೇಳಿದ್ದರು. ಆದರೆ, ಪಾಸ್ಪೋರ್ಟ್ ದಾಖಲೆಗಳನ್ನು ತೆಗೆದುಕೊಂಡು ಪರಿಶೀಲಿಸಿದ್ದ ಟ್ರಾವೆಲ್ಸ್ ಕಚೇರಿ ಸಿಬ್ಬಂದಿ, ನಾವೇ ಎಲ್ಲ ವ್ಯವಸ್ಥೆ ಮಾಡುತ್ತೇವೆ. ಥೈಲ್ಯಾಂಡ್ ತಲುಪಿದ ಮೇಲೆ ವೀಸಾ ಕೊಡಲಾಗುತ್ತದೆ ಎಂದಿದ್ದರು.
ಮೊದಲ ವಿದೇಶ ಪ್ರವಾಸವಾಗಿದ್ದರಿಂದ ಸಹೋದರಿಯರು ಭಾರಿ ಉತ್ಸಾಹದಿಂದ 2014ರ ನ.24ರಂದು ಬೆಂಗಳೂರಿನಿಂದ ಮುಂಬೈಗೆ ವಿಮಾನದಲ್ಲಿ ತೆರಳಿದ್ದರು. ಮುಂಬೈನಿಂದ ಬ್ಯಾಂಕಾಕ್ಗೆ ತೆರಳಬೇಕಿತ್ತು. ಮುಂಬೈ ವಿಮಾನ ನಿಲ್ದಾಣದ ಅಂತಾರಾಷ್ಟ್ರೀಯ ನಿರ್ಗಮನ ಗೇಟ್ಗೆ ತೆರಳಿದ ಸಹೋದರಿಯರು ಬ್ಯಾಂಕಾಕ್ ಏರ್ವೇಸ್ ಕೌಂಟರ್ಗೆ ತೆರಳಿ ಬೋರ್ಡಿಂಗ್ ಪಾಸ್ ಪಡೆಯಲು ಮುಂದಾದರು.
''ನಿಮ್ಮ ಪಾಸ್ಪೋರ್ಟ್ ಇನ್ನು ಎರಡೇ ತಿಂಗಳಲ್ಲಿ ಮುಗಿಯುತ್ತದೆ. ಥೈಲ್ಯಾಂಡ್ಗೆ ತೆರಳಿ ವೀಸಾ ಪಡೆಯಬೇಕಿದ್ದರೆ (ವೀಸಾ ಆನ್ ಅರೈವಲ್) ಪಾಸ್ಪೋರ್ಟ್ನ ಅವಧಿ ಕನಿಷ್ಠ 6 ತಿಂಗಳು ಇರಬೇಕು. ಹೀಗಾಗಿ, ನಿಮಗೆ ಬೋರ್ಡಿಂಗ್ಗೆ ಅವಕಾಶ ಇಲ್ಲ'' ಎಂದು ಸಿಬ್ಬಂದಿ ಹೇಳುತ್ತಿದ್ದಂತೆ ಸಹೋದರಿಯರಿಯರಿಗೆ ತೀವ್ರ ಆಘಾತವಾಗಿತ್ತು. ಬಳಿಕ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು.
''ಪ್ರವಾಸಿಗರಿಗೆ ಪ್ರವಾಸದ ಕುರಿತು ಟ್ರಾವೆಲ್ಸ್ ಕಂಪನಿಗಳು ನೀತಿ, ನಿಯಮ ಸೇರಿದಂತೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ಒದಗಿಸಬೇಕು. ಪಾಸ್ಪೋರ್ಟ್, ವೀಸಾ ನಿಯಮದ ಕುರಿತು ಮುಂಚಿತವಾಗಿ ತಿಳಿಸಿ ಅದನ್ನು ಸಿದ್ದಪಡಿಸಿಕೊಳ್ಳುವ ವ್ಯವಸ್ಥೆ ಮಾಡಬೇಕು. ಪ್ರವಾಸ ರದ್ದಾಗಿ ಅವರಿಗೆ ಮಾನಸಿಕ ಒತ್ತಡ ಉಂಟಾಗಿದೆ. ಕಂಪನಿಯು ಲೋಪ ಎಸಗಿ ನಿರ್ಲಕ್ಷ್ಯತನ ತೋರಿದೆ'' ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ವಿದೇಶ ಪ್ರವಾಸದ ಕುರಿತು ಪ್ರವಾಸಿಗರಿಗೆ ಪಾಸ್ಪೋರ್ಟ್ ಸೇರಿದಂತೆ ಪ್ರಯಾಣ ದಾಖಲೆಗಳ ಕುರಿತು ಸೂಕ್ತ ಮಾಹಿತಿಯನ್ನು ಒದಗಿಸದ ಟ್ರಾವೆಲ್ಸ್ ಕಂಪನಿ ಥಾಮಸ್ ಕುಕ್ ಇಂಡಿಯಾಗೆ ಗ್ರಾಹಕರ ನ್ಯಾಯಾಲಯ ದಂಡ ವಿಧಿಸಿದೆ.
ನಗರದ ಸಹೋದರಿಯರಿಬ್ಬರು ಥೈಲ್ಯಾಂಡ್ ಪ್ರವಾಸಕ್ಕೆ ಟೂರ್ ಪ್ಯಾಕೇಜ್ ಬುಕ್ ಮಾಡಿ, ಮುಂಬೈನಿಂದ ವಿಮಾನ ಹತ್ತಬೇಕು ಎನ್ನುವ ಹಂತದಲ್ಲಿ ಪ್ರವಾಸ ರದ್ದಾಗಿತ್ತು. ಇದರಿಂದ ಬೇಸರಗೊಂಡಿದ್ದ ಸಹೋದರಿಯರು, ಟ್ರಾವೆಲ್ಸ್ ಕಂಪನಿ ವಿರುದ್ಧ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸಹೋದರಿಯರು ಪ್ರವಾಸಕ್ಕೆ ಪಡೆದಿದ್ದ ಪ್ಯಾಕೇಜ್ ಮೊತ್ತದ ಜೊತೆಗೆ, ಬೆಂಗಳೂರಿನಿಂದ ಮುಂಬೈಗೆ ತೆರಳಲು ಮತ್ತು ವಾಪಸ್ ಮರಳಲು ಮಾಡಿಸಿದ್ದ ಏರ್ ಟಿಕೆಟ್ ಶುಲ್ಕ, ಟ್ಯಾಕ್ಸಿ ಶುಲ್ಕ ಸೇರಿ 84,318 ರೂ. ಮತ್ತು ಕಾನೂನು ಹೋರಾಟದ ಶುಲ್ಕವಾಗಿ 10 ಸಾವಿರ ರೂ. ಪಾವತಿ ಮಾಡುವಂತೆ ಥಾಮಸ್ ಕುಕ್ ಕಂಪನಿಗೆ ನ್ಯಾಯಾಲಯ ಸೂಚಿಸಿದೆ.
ಕೃಂಬಿಗಲ್ ರಸ್ತೆ ನಿವಾಸಿಗಳಾದ ಸೋನಿಯಾ ಸಿಂಗ್ ಮತ್ತು ಸುಪ್ರಿಯಾ ಸಿಂಗ್ 2014ರಲ್ಲಿ ಮಲ್ಲೇಶ್ವರದಲ್ಲಿರುವ ಥಾಮಸ್ ಕುಕ್ ಇಂಡಿಯಾ ಕಚೇರಿಗೆ ತೆರಳಿ 3 ರಾತ್ರಿ, 4 ದಿನಗಳ 'ಸಿಂಪ್ಲಿ ಥೈಲ್ಯಾಂಡ್' ಹೆಸರಿನ ಟೂರ್ ಪ್ಯಾಕೇಜ್ ಬಗ್ಗೆ ವಿಚಾರಿಸಿದ್ದರು. ಇಬ್ಬರಿಗೆ 57,318 ರೂ. ಶುಲ್ಕ ತಗುಲುತ್ತದೆ ಎಂದಿದ್ದ ಕಂಪನಿ ಪ್ರತಿನಿಧಿಗಳು , ಮುಂಗಡವಾಗಿ 10 ಸಾವಿರ ರೂ.ಯನ್ನು ಸ್ವೀಕರಿಸಿದ್ದರು. ಮೊದಲ ಬಾರಿ ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಕಾರಣ ಏನಾದರೂ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕೇ ಎಂದು ಟ್ರಾವೆಲ್ಸ್ ಕಚೇರಿಯಲ್ಲಿ ಸಹೋದರಿಯರು ಕೇಳಿದ್ದರು. ಆದರೆ, ಪಾಸ್ಪೋರ್ಟ್ ದಾಖಲೆಗಳನ್ನು ತೆಗೆದುಕೊಂಡು ಪರಿಶೀಲಿಸಿದ್ದ ಟ್ರಾವೆಲ್ಸ್ ಕಚೇರಿ ಸಿಬ್ಬಂದಿ, ನಾವೇ ಎಲ್ಲ ವ್ಯವಸ್ಥೆ ಮಾಡುತ್ತೇವೆ. ಥೈಲ್ಯಾಂಡ್ ತಲುಪಿದ ಮೇಲೆ ವೀಸಾ ಕೊಡಲಾಗುತ್ತದೆ ಎಂದಿದ್ದರು.
ಮೊದಲ ವಿದೇಶ ಪ್ರವಾಸವಾಗಿದ್ದರಿಂದ ಸಹೋದರಿಯರು ಭಾರಿ ಉತ್ಸಾಹದಿಂದ 2014ರ ನ.24ರಂದು ಬೆಂಗಳೂರಿನಿಂದ ಮುಂಬೈಗೆ ವಿಮಾನದಲ್ಲಿ ತೆರಳಿದ್ದರು. ಮುಂಬೈನಿಂದ ಬ್ಯಾಂಕಾಕ್ಗೆ ತೆರಳಬೇಕಿತ್ತು. ಮುಂಬೈ ವಿಮಾನ ನಿಲ್ದಾಣದ ಅಂತಾರಾಷ್ಟ್ರೀಯ ನಿರ್ಗಮನ ಗೇಟ್ಗೆ ತೆರಳಿದ ಸಹೋದರಿಯರು ಬ್ಯಾಂಕಾಕ್ ಏರ್ವೇಸ್ ಕೌಂಟರ್ಗೆ ತೆರಳಿ ಬೋರ್ಡಿಂಗ್ ಪಾಸ್ ಪಡೆಯಲು ಮುಂದಾದರು.
''ನಿಮ್ಮ ಪಾಸ್ಪೋರ್ಟ್ ಇನ್ನು ಎರಡೇ ತಿಂಗಳಲ್ಲಿ ಮುಗಿಯುತ್ತದೆ. ಥೈಲ್ಯಾಂಡ್ಗೆ ತೆರಳಿ ವೀಸಾ ಪಡೆಯಬೇಕಿದ್ದರೆ (ವೀಸಾ ಆನ್ ಅರೈವಲ್) ಪಾಸ್ಪೋರ್ಟ್ನ ಅವಧಿ ಕನಿಷ್ಠ 6 ತಿಂಗಳು ಇರಬೇಕು. ಹೀಗಾಗಿ, ನಿಮಗೆ ಬೋರ್ಡಿಂಗ್ಗೆ ಅವಕಾಶ ಇಲ್ಲ'' ಎಂದು ಸಿಬ್ಬಂದಿ ಹೇಳುತ್ತಿದ್ದಂತೆ ಸಹೋದರಿಯರಿಯರಿಗೆ ತೀವ್ರ ಆಘಾತವಾಗಿತ್ತು. ಬಳಿಕ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು.
''ಪ್ರವಾಸಿಗರಿಗೆ ಪ್ರವಾಸದ ಕುರಿತು ಟ್ರಾವೆಲ್ಸ್ ಕಂಪನಿಗಳು ನೀತಿ, ನಿಯಮ ಸೇರಿದಂತೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ಒದಗಿಸಬೇಕು. ಪಾಸ್ಪೋರ್ಟ್, ವೀಸಾ ನಿಯಮದ ಕುರಿತು ಮುಂಚಿತವಾಗಿ ತಿಳಿಸಿ ಅದನ್ನು ಸಿದ್ದಪಡಿಸಿಕೊಳ್ಳುವ ವ್ಯವಸ್ಥೆ ಮಾಡಬೇಕು. ಪ್ರವಾಸ ರದ್ದಾಗಿ ಅವರಿಗೆ ಮಾನಸಿಕ ಒತ್ತಡ ಉಂಟಾಗಿದೆ. ಕಂಪನಿಯು ಲೋಪ ಎಸಗಿ ನಿರ್ಲಕ್ಷ್ಯತನ ತೋರಿದೆ'' ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.