ಬೆಂಗಳೂರು: ಅಭಿವೃದ್ಧಿಯ ನೆಪದಲ್ಲಿ ನಗರದ ಮರಗಳನ್ನು ಕಡಿದು ಹಾಕುತ್ತಿರುವ ನಡೆಯ ಬಗ್ಗೆ ಪರಿಸರವಾದಿಗಳಿಂದ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿರುವುದರ ನಡುವೆಯೇ ಬೆಂಗಳೂರು ಹೊರವಲಯದಲ್ಲಿರುವ ದೊಡ್ಡಬಳ್ಳಾಪುರ ರಸ್ತೆ ಪಕ್ಕದ ಸಿಂಗನಾಯಕನಹಳ್ಳಿ ಕೆರೆ ಪುನರುಜ್ಜೀವನಗೊಳಿಸುವುದಕ್ಕಾಗಿ 6,316 ಮರಗಳಿಗೆ ಕತ್ತರಿ ಹಾಕಲು ಅರಣ್ಯ ಇಲಾಖೆ ಮುಂದಾಗಿದೆ. ಮರಗಳ ಕಟಾವಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಆಕ್ಷೇಪಣೆಗಳಿಗೆ ಆಹ್ವಾನಿಸಿದೆ. ಈ ಕೆರೆಯನ್ನು ಕಿರು ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಭಿವೃದ್ಧಿಪಡಿಸಲು ಮುಂದಾಗಿದ್ದು, ಇದರ ಪುನಶ್ಚೇತನಕ್ಕೆ 6,316 ಮರಗಳು ಅಡ್ಡಿಯಾಗಿವೆ ಎಂದು ಸಾರ್ವಜನಿಕ ಅಧಿಸೂಚನೆಯಲ್ಲಿ ಅರಣ್ಯ ಇಲಾಖೆ ತಿಳಿಸಿದೆ.
ಇದು ಹೆಬ್ಬಾಳ-ನಾಗವಾರ ಕಣಿವೆ ಯೋಜನೆಯ ಭಾಗವಾಗಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 65 ಕೆರೆಗಳನ್ನು ತುಂಬಿಸುವ ಉದ್ದೇಶ ಹೊಂದಲಾಗಿದೆ. ಸಾರ್ವಜನಿಕರು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಜೂನ್ 24ರ ಒಳಗೆ ಸಲ್ಲಿಸಬೇಕು ಎಂದು ಅರಣ್ಯ ಇಲಾಖೆ ಹೇಳಿದೆ. ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಜಾಲಿ ಮರ ಕಡಿಯಲು ಅಡ್ಡಿಯಿಲ್ಲ
ಈ ಪ್ರದೇಶದಲ್ಲಿ ಜಾಲಿ ಮರಗಳು ಅತ್ಯಧಿಕ ಸಂಖ್ಯೆಯಲ್ಲಿವೆ. ಇವುಗಳನ್ನು ತೆರವುಗೊಳಿಸುವುದರಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಅರಣ್ಯ ಇಲಾಖೆ ಹೇಳಿದೆ. ಆದರೆ ಇಲ್ಲಿ ಅಕೇಶಿಯಾ ಹಾಗೂ ಹೊಂಗೆಮರಗಳು ಕೂಡ ಅಧಿಕವಾಗಿವೆ. ಇವುಗಳಿಗೂ ಕೊಡಲಿ ಬೀಳಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶವು 1972ರ ವನ್ಯಜೀವಿ (ರಕ್ಷಣೆ) ಕಾಯ್ದೆಯಡಿಯಲ್ಲಿ ಬರುವ ನವಿಲುಗಳು, ನರಿಗಳು, ಹಾವು, ಹಕ್ಕಿಗಳು ಹಾಗೂ ಇತರೆ ಪ್ರಾಣಿಗಳ ತಾಣವಾಗಿದೆ.
ಜಾಲಿಮರಗಳನ್ನು ಕತ್ತರಿಸಲು ತಮಗೆ ಯಾವ ಅಭ್ಯಂತರವೂ ಇಲ್ಲ. ಆದರೆ ಅಕೇಶಿಯಾ ಮತ್ತು ಹೊಂಗೆ ಮರಗಳ ಕಟಾವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಇದು ರಿಯಲ್ ಎಸ್ಟೇಟ್ ಹುನ್ನಾರ
'ನೀರಿನ ಮೂಲವನ್ನು ಪುನಶ್ಚೇತನಗೊಳಿಸುವುದಕ್ಕೆ ಈ ಕ್ರಮವಾದರೆ, ಇಷ್ಟು ದಿನ ಸರಕಾರ ಏನು ಮಾಡುತ್ತಿತ್ತು? ಈ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ದರ ವೇಗವಾಗಿ ಹೆಚ್ಚುತ್ತಿದೆ. ಈ ನಡೆಗೆ ಅದೂ ಒಂದು ಕಾರಣ ಇರಬಹುದು. ಪಟ್ಟಭದ್ರ ಹಿತಾಸಕ್ತಿಯ ರಾಜಕಾರಣಿಗಳೂ ಈ ನಿರ್ಧಾರದಲ್ಲಿ ಭಾಗಿಯಾಗಿರಬಹುದು' ಎಂದು ಸ್ಥಳೀಯರೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮರಗಳನ್ನು ಕತ್ತರಿಸುವುದರಿಂದ ಜೀವ ವೈವಿಧ್ಯಕ್ಕೆ ಉಂಟಾಗುವ ಹಾನಿಯನ್ನು ಸರಿಪಡಿಸುವುದು ಬಹಳ ಕಷ್ಟ ಎಂದು ಪರಿಸರವಾದಿ ವಿಜಯ್ ನಿಶಾಂತ್ ಹೇಳಿದ್ದಾರೆ.
ಮರಗಳನ್ನು ಕತ್ತರಿಸುವ ಅಗತ್ಯವೇ ಇಲ್ಲ
'ಮರಗಳು ಹಾಗೂ ಕೆರೆಗಳು ಹೆಚ್ಚು ಜತೆಗೆ ಅಸ್ತಿತ್ವದಲ್ಲಿರುತ್ತವೆ. ಕೆರೆಯ ಪುನಶ್ಚೇತನಕ್ಕಾಗಿ ಮರಗಳನ್ನು ಕತ್ತರಿಸುವ ಅಗತ್ಯವೇ ಇಲ್ಲ. ಕೆರೆಗಳನ್ನು ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿಪಡಿಸಬಹುದು. ಅವುಗಳ ಸುತ್ತ ಪಾದಚಾರಿ ಮಾರ್ಗ, ವರ್ತುಲ ಕಟ್ಟೆಗಳು ಹಾಗೂ ಸೌಂದರ್ಯೀಕರಣದ ಅಗತ್ಯ ಯಾವಾಗಲೂ ಇರುವುದಿಲ್ಲ. ಮರಗಳು ಕೆರೆಯ ಅವಿಭಾಜ್ಯ ಅಂಗಗಳು. ಅವುಗಳನ್ನು ಕತ್ತರಿಸದೆಯೇ ಹಾಗೂ ಪರಿಸರ ವ್ಯವಸ್ಥೆಯನ್ನು ಉಳಿಸಿಕೊಂಡು ಪುನಶ್ಚೇತನ ಸಾಧ್ಯವಿದೆ' ಎಂದು ಕೆರೆಗಳ ತಜ್ಞ ರಾಮಪ್ರಸಾದ್ ವಿ. ತಿಳಿಸಿದ್ದಾರೆ.
'ಇಲ್ಲಿನ ಮರಗಳು ಸುಮಾರು 40 ವರ್ಷಗಳಷ್ಟು ಹಳೆಯದಾಗಿವೆ. ಅಧಿಕಾರಿಗಳು ಗಿಡಗಳನ್ನು ನೆಡಬೇಕು. ಕನಿಷ್ಠ ವರ್ಷಗಳವರೆಗೆ ಅವುಗಳನ್ನು ಬೆಳೆಯಲು ಬಿಡಬೇಕು. ಬಳಿಕ ನಾವು ಈ ಮರಗಳನ್ನು ಉರುಳಿಸುವ ಬಗ್ಗೆ ಚರ್ಚಿಸಬಹುದು. ಒಂದೇ ಹಂತದಲ್ಲಿ ಇಷ್ಟೊಂದು ಮರಗಳನ್ನು ಕಡಿಯುವುದು ಬೆಂಗಳೂರಿನ ವಾತಾವರಣದ ಮೇಲೆ ಭಾರಿ ಕೆಟ್ಟ ಪರಿಣಾಮ ಬೀರಲಿದೆ' ಎಂದು ಅವರು ಹೇಳಿದ್ದಾರೆ.
ಇತ್ತೀಚೆಗಷ್ಟೇ ಬಿಬಿಎಂಪಿಯು ನಮ್ಮ ಮೆಟ್ರೋ ಯೋಜನೆಗಾಗಿ 1,293 ಮರಗಳಿಗೆ ಕೊಡಲಿಯೇಟು ಹಾಕುವುದಕ್ಕೆ ಅನುಮೋದನೆ ಪಡೆದುಕೊಂಡಿತ್ತು.
ಇದು ಹೆಬ್ಬಾಳ-ನಾಗವಾರ ಕಣಿವೆ ಯೋಜನೆಯ ಭಾಗವಾಗಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 65 ಕೆರೆಗಳನ್ನು ತುಂಬಿಸುವ ಉದ್ದೇಶ ಹೊಂದಲಾಗಿದೆ. ಸಾರ್ವಜನಿಕರು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಜೂನ್ 24ರ ಒಳಗೆ ಸಲ್ಲಿಸಬೇಕು ಎಂದು ಅರಣ್ಯ ಇಲಾಖೆ ಹೇಳಿದೆ. ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಜಾಲಿ ಮರ ಕಡಿಯಲು ಅಡ್ಡಿಯಿಲ್ಲ
ಈ ಪ್ರದೇಶದಲ್ಲಿ ಜಾಲಿ ಮರಗಳು ಅತ್ಯಧಿಕ ಸಂಖ್ಯೆಯಲ್ಲಿವೆ. ಇವುಗಳನ್ನು ತೆರವುಗೊಳಿಸುವುದರಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಅರಣ್ಯ ಇಲಾಖೆ ಹೇಳಿದೆ. ಆದರೆ ಇಲ್ಲಿ ಅಕೇಶಿಯಾ ಹಾಗೂ ಹೊಂಗೆಮರಗಳು ಕೂಡ ಅಧಿಕವಾಗಿವೆ. ಇವುಗಳಿಗೂ ಕೊಡಲಿ ಬೀಳಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶವು 1972ರ ವನ್ಯಜೀವಿ (ರಕ್ಷಣೆ) ಕಾಯ್ದೆಯಡಿಯಲ್ಲಿ ಬರುವ ನವಿಲುಗಳು, ನರಿಗಳು, ಹಾವು, ಹಕ್ಕಿಗಳು ಹಾಗೂ ಇತರೆ ಪ್ರಾಣಿಗಳ ತಾಣವಾಗಿದೆ.
ಜಾಲಿಮರಗಳನ್ನು ಕತ್ತರಿಸಲು ತಮಗೆ ಯಾವ ಅಭ್ಯಂತರವೂ ಇಲ್ಲ. ಆದರೆ ಅಕೇಶಿಯಾ ಮತ್ತು ಹೊಂಗೆ ಮರಗಳ ಕಟಾವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಇದು ರಿಯಲ್ ಎಸ್ಟೇಟ್ ಹುನ್ನಾರ
'ನೀರಿನ ಮೂಲವನ್ನು ಪುನಶ್ಚೇತನಗೊಳಿಸುವುದಕ್ಕೆ ಈ ಕ್ರಮವಾದರೆ, ಇಷ್ಟು ದಿನ ಸರಕಾರ ಏನು ಮಾಡುತ್ತಿತ್ತು? ಈ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ದರ ವೇಗವಾಗಿ ಹೆಚ್ಚುತ್ತಿದೆ. ಈ ನಡೆಗೆ ಅದೂ ಒಂದು ಕಾರಣ ಇರಬಹುದು. ಪಟ್ಟಭದ್ರ ಹಿತಾಸಕ್ತಿಯ ರಾಜಕಾರಣಿಗಳೂ ಈ ನಿರ್ಧಾರದಲ್ಲಿ ಭಾಗಿಯಾಗಿರಬಹುದು' ಎಂದು ಸ್ಥಳೀಯರೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮರಗಳನ್ನು ಕತ್ತರಿಸುವುದರಿಂದ ಜೀವ ವೈವಿಧ್ಯಕ್ಕೆ ಉಂಟಾಗುವ ಹಾನಿಯನ್ನು ಸರಿಪಡಿಸುವುದು ಬಹಳ ಕಷ್ಟ ಎಂದು ಪರಿಸರವಾದಿ ವಿಜಯ್ ನಿಶಾಂತ್ ಹೇಳಿದ್ದಾರೆ.
ಮರಗಳನ್ನು ಕತ್ತರಿಸುವ ಅಗತ್ಯವೇ ಇಲ್ಲ
'ಮರಗಳು ಹಾಗೂ ಕೆರೆಗಳು ಹೆಚ್ಚು ಜತೆಗೆ ಅಸ್ತಿತ್ವದಲ್ಲಿರುತ್ತವೆ. ಕೆರೆಯ ಪುನಶ್ಚೇತನಕ್ಕಾಗಿ ಮರಗಳನ್ನು ಕತ್ತರಿಸುವ ಅಗತ್ಯವೇ ಇಲ್ಲ. ಕೆರೆಗಳನ್ನು ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿಪಡಿಸಬಹುದು. ಅವುಗಳ ಸುತ್ತ ಪಾದಚಾರಿ ಮಾರ್ಗ, ವರ್ತುಲ ಕಟ್ಟೆಗಳು ಹಾಗೂ ಸೌಂದರ್ಯೀಕರಣದ ಅಗತ್ಯ ಯಾವಾಗಲೂ ಇರುವುದಿಲ್ಲ. ಮರಗಳು ಕೆರೆಯ ಅವಿಭಾಜ್ಯ ಅಂಗಗಳು. ಅವುಗಳನ್ನು ಕತ್ತರಿಸದೆಯೇ ಹಾಗೂ ಪರಿಸರ ವ್ಯವಸ್ಥೆಯನ್ನು ಉಳಿಸಿಕೊಂಡು ಪುನಶ್ಚೇತನ ಸಾಧ್ಯವಿದೆ' ಎಂದು ಕೆರೆಗಳ ತಜ್ಞ ರಾಮಪ್ರಸಾದ್ ವಿ. ತಿಳಿಸಿದ್ದಾರೆ.
'ಇಲ್ಲಿನ ಮರಗಳು ಸುಮಾರು 40 ವರ್ಷಗಳಷ್ಟು ಹಳೆಯದಾಗಿವೆ. ಅಧಿಕಾರಿಗಳು ಗಿಡಗಳನ್ನು ನೆಡಬೇಕು. ಕನಿಷ್ಠ ವರ್ಷಗಳವರೆಗೆ ಅವುಗಳನ್ನು ಬೆಳೆಯಲು ಬಿಡಬೇಕು. ಬಳಿಕ ನಾವು ಈ ಮರಗಳನ್ನು ಉರುಳಿಸುವ ಬಗ್ಗೆ ಚರ್ಚಿಸಬಹುದು. ಒಂದೇ ಹಂತದಲ್ಲಿ ಇಷ್ಟೊಂದು ಮರಗಳನ್ನು ಕಡಿಯುವುದು ಬೆಂಗಳೂರಿನ ವಾತಾವರಣದ ಮೇಲೆ ಭಾರಿ ಕೆಟ್ಟ ಪರಿಣಾಮ ಬೀರಲಿದೆ' ಎಂದು ಅವರು ಹೇಳಿದ್ದಾರೆ.
ಇತ್ತೀಚೆಗಷ್ಟೇ ಬಿಬಿಎಂಪಿಯು ನಮ್ಮ ಮೆಟ್ರೋ ಯೋಜನೆಗಾಗಿ 1,293 ಮರಗಳಿಗೆ ಕೊಡಲಿಯೇಟು ಹಾಕುವುದಕ್ಕೆ ಅನುಮೋದನೆ ಪಡೆದುಕೊಂಡಿತ್ತು.