ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಈಗ ಬ್ರ್ಯಾಂಡ್ ಅಂಬಾಸಿಡರ್
ಶಾಲೆಗಳ ಪುನಶ್ಚೇತನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಪ್ರತಿಭಾನ್ವೇಷಣೆ ಮೊದಲಾದ ಚಟುವಟಿಕೆಗಳನ್ನೊಳಗೊಂಡ ‘ನ್ಯಾಷನಲ್ ಎಂಡೇವರ್ ಫಾರ್ ಸ್ಟೂಡೆಂಟ್ಸ್ ಟ್ರಾನ್ಸ್ಫಾರ್ಮೇಷನ್’ ಕಾರ್ಯಕ್ರಮವನ್ನು ಹೆಚ್ಚು ಪ್ರಚಾರ ಮಾಡಲು ಅಣ್ಣಾಮಲೈ ಅವರನ್ನು ರಾಯಭಾರಿಯಾಗಿಸಲಾಗಿದೆ.
Vijaya Karnataka 16 Jan 2020, 8:56 pm
ಬೆಂಗಳೂರು: ಅಕ್ಷಯ ಪಾತ್ರ ಫೌಂಡೇಷನ್ ತನ್ನ ‘ನೆಸ್ಟ್’ ಕಾರ್ಯಕ್ರಮಕ್ಕೆ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರನ್ನು ರಾಯಭಾರಿಯಾಗಿ ನಿಯೋಜಿಸಿದೆ.
ಶಾಲೆಗಳ ಪುನಶ್ಚೇತನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಪ್ರತಿಭಾನ್ವೇಷಣೆ ಮೊದಲಾದ ಚಟುವಟಿಕೆಗಳನ್ನೊಳಗೊಂಡ ‘ನ್ಯಾಷನಲ್ ಎಂಡೇವರ್ ಫಾರ್ ಸ್ಟೂಡೆಂಟ್ಸ್ ಟ್ರಾನ್ಸ್ಫಾರ್ಮೇಷನ್’ ಕಾರ್ಯಕ್ರಮವನ್ನು ಹೆಚ್ಚು ಪ್ರಚಾರ ಮಾಡಲು ಅಣ್ಣಾಮಲೈ ಅವರನ್ನು ರಾಯಭಾರಿಯಾಗಿಸಲಾಗಿದೆ.
‘‘ಈ ಕಾರ್ಯಕ್ರಮದಲ್ಲಿ ರಾಯಭಾರಿಯಾಗಿ ಪಾಲ್ಗೊಳ್ಳುವುದು ನನಗೆ ಗೌರವ ತಂದಿದೆ. ಶಾಲೆಗಳಲ್ಲಿ ಮಕ್ಕಳ ಹಿನ್ನೆಲೆಯನ್ನು ಪರಿಗಣಿಸದೆ ಅವರಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಲಿದ್ದೇನೆ. ಶಾಲಾ ಮಟ್ಟದಲ್ಲೇ ಮಕ್ಕಳನ್ನು ಉತ್ತೇಜಿಸಿದರೆ ಅವರು ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ಬೆಳೆಯುತ್ತಾರೆ," ಎಂದು ಅಣ್ಣಾಮಲೈ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಫೌಂಡೇಷನ್ ಉಪಾಧ್ಯಕ್ಷ ಚಂಚಲಪತಿ ದಾಸ, "ಮಕ್ಕಳು ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಈ ಕಾರ್ಯಕ್ರಮಕ್ಕೆ ಯುವ ನಾಯಕರೊಬ್ಬರು ರಾಯಭಾರಿಯಾಗಿರುವುದು ಸಂತಸ ತಂದಿದೆ,’’ ಎಂದರು.
ಶಾಲೆಗಳ ಪುನಶ್ಚೇತನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಪ್ರತಿಭಾನ್ವೇಷಣೆ ಮೊದಲಾದ ಚಟುವಟಿಕೆಗಳನ್ನೊಳಗೊಂಡ ‘ನ್ಯಾಷನಲ್ ಎಂಡೇವರ್ ಫಾರ್ ಸ್ಟೂಡೆಂಟ್ಸ್ ಟ್ರಾನ್ಸ್ಫಾರ್ಮೇಷನ್’ ಕಾರ್ಯಕ್ರಮವನ್ನು ಹೆಚ್ಚು ಪ್ರಚಾರ ಮಾಡಲು ಅಣ್ಣಾಮಲೈ ಅವರನ್ನು ರಾಯಭಾರಿಯಾಗಿಸಲಾಗಿದೆ.
‘‘ಈ ಕಾರ್ಯಕ್ರಮದಲ್ಲಿ ರಾಯಭಾರಿಯಾಗಿ ಪಾಲ್ಗೊಳ್ಳುವುದು ನನಗೆ ಗೌರವ ತಂದಿದೆ. ಶಾಲೆಗಳಲ್ಲಿ ಮಕ್ಕಳ ಹಿನ್ನೆಲೆಯನ್ನು ಪರಿಗಣಿಸದೆ ಅವರಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಲಿದ್ದೇನೆ. ಶಾಲಾ ಮಟ್ಟದಲ್ಲೇ ಮಕ್ಕಳನ್ನು ಉತ್ತೇಜಿಸಿದರೆ ಅವರು ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ಬೆಳೆಯುತ್ತಾರೆ," ಎಂದು ಅಣ್ಣಾಮಲೈ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಫೌಂಡೇಷನ್ ಉಪಾಧ್ಯಕ್ಷ ಚಂಚಲಪತಿ ದಾಸ, "ಮಕ್ಕಳು ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಈ ಕಾರ್ಯಕ್ರಮಕ್ಕೆ ಯುವ ನಾಯಕರೊಬ್ಬರು ರಾಯಭಾರಿಯಾಗಿರುವುದು ಸಂತಸ ತಂದಿದೆ,’’ ಎಂದರು.