ಆ್ಯಪ್ನಗರ

ಬೆಂಗಳೂರು: ವಾಹನ ಸಂಚಾರ ನಿಷೇಧ ಕೋರಿ ಕೋರ್ಟ್‌ ಮೆಟ್ಟಿಲೇರಿದ 4 ತಿಂಗಳ ಮಗು

ಅರ್ಜಿದಾರರು ತನ್ನ ಮಗುವಿನ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ, 'ನಾನು ಹಲವು ದಿನಗಳಿಂದ ಪೋಷಕರ ಜತೆ ಕಬ್ಬನ್‌ಪಾರ್ಕ್ಗೆ ವಿಹಾರಕ್ಕೆ ಬರುತ್ತಿದ್ದೇನೆ. ಆದರೆ, ಕಬ್ಬನ್‌ ಪಾರ್ಕ್ನೊಳಗೆ ವಾಹನಗಳ ಸಂಚಾರದಿಂದಾಗಿ ಕಾರ್ಬನ್‌ ಮಾನಾಕ್ಸೈಡ್‌ ಹೆಚ್ಚಾಗಿದೆ.

Vijaya Karnataka Web 24 Dec 2020, 10:35 pm
ಬೆಂಗಳೂರು: ಕಬ್ಬನ್‌ ಪಾರ್ಕ್‌ನೊಳಗೆ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೋರಿ 4 ತಿಂಗಳ ಮಗುವಿನ ಮೂಲಕ ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಲಾಗಿದೆ.
Vijaya Karnataka Web ಹೈಕೋರ್ಟ್‌
ಹೈಕೋರ್ಟ್‌


ಮಗು ಕಿಯಾನ್‌ ಮೇದಿ ಕುಮಾರ್‌ ಪರವಾಗಿ ರಾಕೇಶ್‌ ಪ್ರಬಲ್‌ ಕುಮಾರ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮಧಿನಧಿವಿ ಆಲಿಸಿದ ಹಿರಿಯ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹಾಗೂ ನ್ಯಾ.ಆರ್‌. ನಟರಾಜ್‌ ಅವರಿದ್ದ ವಿಭಾಗೀಯ ಪೀಠ, ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಂಚಾರ ವಿಭಾಗದ ಹೆಚ್ಚುವರಿ ನಗರ ಪೊಲೀಸ್‌ ಆಯುಕ್ತ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ನಗರ ಭೂಸಾರಿಗೆ ನಿರ್ದೇಶನಾಲಯಕ್ಕೆ ನೋಟಿಸ್‌ ಜಾರಿ ಮಾಡಿದೆ.

ಅರ್ಜಿದಾರರು ತನ್ನ ಮಗುವಿನ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ, 'ನಾನು ಹಲವು ದಿನಗಳಿಂದ ಪೋಷಕರ ಜತೆ ಕಬ್ಬನ್‌ಪಾರ್ಕ್ಗೆ ವಿಹಾರಕ್ಕೆ ಬರುತ್ತಿದ್ದೇನೆ. ಆದರೆ, ಕಬ್ಬನ್‌ ಪಾರ್ಕ್ನೊಳಗೆ ವಾಹನಗಳ ಸಂಚಾರದಿಂದಾಗಿ ಕಾರ್ಬನ್‌ ಮಾನಾಕ್ಸೈಡ್‌ ಹೆಚ್ಚಾಗಿದೆ. 'ಮಾಲಿನ್ಯ ರಹಿತ ವಾತಾವರಣದಲ್ಲಿ ಆರೋಗ್ಯಯುತವಾಗಿ ಜೀವಿಸುವ ಸಂವಿಧಾನಬದ್ಧ ಹಕ್ಕು ಉಲ್ಲಂಘನೆಯಾಗುತ್ತಿದೆ. ಹಾಗಾಗಿ, ಪಾರ್ಕ್ ಒಳಗೆ ವಾಹನ ಸಂಚಾರ ನಿಷೇಧಿಸಲು ಸರಕಾರಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು' ಎಂದು ಕೋರಲಾಗಿದೆ.

ಲಾಕ್‌ ಡೌನ್‌ ಸಂದರ್ಭದಲ್ಲಿಪಾರ್ಕ್ನೊಳಗೆ ವಾಹನ ಸಂಚಾರವನ್ನು ಸರಕಾರ ನಿಷೇಧಿಸಿತ್ತು. ಅನ್‌ಲಾಕ್‌ ಪ್ರಕ್ರಿಯೆ ಆರಂಭವಾದ ಬಳಿಕ ಸೆಪ್ಟೆಂಬರ್‌ತಿಂಗಳಲ್ಲಿಮತ್ತೆ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಾಹನ ಸಂಚಾರ ನಿರ್ಬಂಧಿಸಿದ್ದ ವೇಳೆ ಪಾರ್ಕ್‌ನೊಳಗೆ ಮಾಲಿನ್ಯ ಕಡಿಮೆಯಾಗಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ