* ರಾಮಚಂದ್ರ ಮೂರ್ತಿ ಚಲ್ಲಹಳ್ಳಿ ಯಲಹಂಕ
ಕ್ಷೇತ್ರದ ಕಾಂಗ್ರೆಸ್ ಪಕ್ಷ ದಲ್ಲಿ ನಾಲ್ಕು ಜನ ಟಿಕೆಟ್ಗಾಗಿ ಪೈಪೋಟಿಗೆ ಬಿದ್ದಿದ್ದು, ಯಾರು ಅಭ್ಯರ್ಥಿಯಾಗುತ್ತಾರೆಂದು ಕಾರ್ಯಕರ್ತರು ಗೊಂದಲದಲ್ಲಿ ಬಿದ್ದಿದ್ದಾರೆ. ಬಿಜೆಪಿ ಪ್ರಚಾರದ ವೈಖರಿಗೆ ಸುಮ್ಮನೆ ಕೂರಲಾಗದೆ, ಹೊರಹೋಗಿ ಮತಕೇಳಲಾಗದ ಸ್ಥಿತಿಯಲ್ಲಿದ್ದಾರೆ ಕಾರ್ಯಕರ್ತರು.
ಯಲಹಂಕ ಕ್ಷೇತ್ರದಿಂದ ಕೆಪಿಸಿಸಿ ಚುನಾವಣಾ ಸಮಿತಿಗೆ ಈಗಾಗಲೇ ಇಬ್ಬರು ಮಹಿಳೆಯರು ಸೇರಿದಂತೆ 14 ಜನ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದರೂ, ನಾಲ್ಕು ಜನ ಮುಖಂಡರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಟಿಕೆಟ್ ಆಕಾಂಕ್ಷಿಗಳು: ಹಾಲಿ ಕಾಂಗ್ರೆಸ್ನಲ್ಲಿ ಈ ಹಿಂದೆ ಚುನಾವಣೆಯಲ್ಲಿ ಪರಾಜಿತರಾಗಿದ್ದ ಎನ್.ಎಂ.ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ, ಕೇಶವ ರಾಜಣ್ಣ ಮತ್ತು ವಿಶೇಷ ಕೃಷಿ ಹಣ್ಣು ಮತ್ತು ಮಾರುಕಟ್ಟೆ ಸಮಿತಿಯ ನಿರ್ದೇಶಕ ಹನುಮಂತೇಗೌಡ ಪಕ್ಷ ದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಕಾಂಗ್ರೆಸ್ನಲ್ಲಿ ಟಿಕೆಟ್ ಅಷ್ಟು ಸುಲಭವಾಗಿ ದೊರೆಯುವುದಿಲ್ಲ ಎಂದು ಅರಿತಿರುವ ಸ್ಪರ್ಧಾಕಾಂಕ್ಷಿಗಳು ಗಾಡ್ ಫಾದರ್ಗಳ ಕೃಪಾಕಟಾಕ್ಷ ಕ್ಕೆ ಮೊರೆಹೋಗಿ ಅವರನ್ನೇ ನಂಬಿ ಕೆಪಿಸಿಸಿ ಕಚೇರಿ ಹಾಗೂ ಮುಖಂಡರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಅಲ್ಲಲ್ಲಿ ಅವಕಾಶ ಸಿಕ್ಕಾಗ ಸಣ್ಣಪುಟ್ಟ ಕೆಲಸಗಳಿಂದ ಜೈಕಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ.
ಗೋಪಾಲಕೃಷ್ಣ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ವೀರಪ್ಪ ಮೊಯ್ಲಿ ಅವರನ್ನು ನಂಬಿಕೊಂಡಿರುವ ಗೋಪಾಲಕೃಷ್ಣ ಅಲ್ಲಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡು, ಸ್ಥಳೀಯ ಮುಖಂಡರ ಬೆಂಬಲವನ್ನು ಪಡೆದುಕೊಂಡು ಕ್ಷೇತ್ರದ ಉಸ್ತುವಾರಿ ಮೊಯ್ಲಿಯವರೇ ಆಗಿರುವುದರಿಂದ ನಾನೇ ಟಿಕೆಟ್ ತೆಗೆದುಕೊಂಡು ಬರುವುದಾಗಿ ಹೇಳುತ್ತಿದ್ದಾರೆ.
ಎಂಎಲ್ಸಿ ನಾರಾಯಣಸ್ವಾಮಿ: ಹಾಲಿ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಇವರು ಸಿ.ಎಂ. ಸಿದ್ದರಾಮಯ್ಯ ಮತ್ತು ಸಚಿವರ ಬೆಂಬಲವಿದೆ ಮತ್ತು ಬಿಜೆಪಿಯ ಶಾಸಕ ಎಸ್.ಆರ್.ವಿಶ್ವನಾಥ್ಗೆ ಟಾಂಗ್ ನೀಡಲು ತಾನೊಬ್ಬನೇ ಸೂಕ್ತ ಎಂದು ಹೇಳಿಕೊಳ್ಳುತ್ತಿದ್ದಾರೆ. ಯಲಹಂಕ ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚಾಗಿದ್ದು, ಸರ್ಕಾರದ ಅಭಿವೃದ್ಧಿ ಕೆಲಸಗಳು, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪಕ್ಷ ದ ಕಾರ್ಯಕ್ರಮಗಳನ್ನು ಜನರಿಗೆ ಒತ್ತಿ ಹೇಳುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ.
ಕೇಶವ ರಾಜಣ್ಣ: ಕೇಶವ ರಾಜಣ್ಣ ಕಾಂಗ್ರೆಸ್ ಪಕ್ಷ ಕ್ಕೆ ಯುವ ನಾಯಕನಂತಿದ್ದು, ವಿದ್ಯುತ್ ಖಾತೆ ಮಂತ್ರಿ ಪ್ರಭಾವಿ ಡಿ ಕೆ ಶಿವಕುಮಾರ್ ಅವರ ಕೃಪಾಕಟಾಕ್ಷ ವಿದೆ. ಏನೇ ಆದರೂ ನಾನು ಟಿಕೆಟ್ ತಂದೇ ತರುತ್ತೇನೆಂದು ಕಳೆದ ಒಂದೂವರೆ ವರ್ಷದಿಂದ ಕಾಂಗ್ರೆಸ್ ಪರವಾಗಿ ಅರ್ನಾ ಹಾಲಿನ ಡೇರಿ ಹೆಸರಿನಲ್ಲಿ ಪ್ರಚಾರದ ಹುಮ್ಮಸ್ಸಿನಲ್ಲಿದ್ದಾರೆ.
ಜೆಡಿಎಸ್ ಹನುಮಂತೇಗೌಡ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೇಶಕ ಹಾಗೂ ಜೆಡಿಎಸ್ ಮಾಜಿ ಮುಖಂಡ ಹನುಮಂತೇಗೌಡ ಕಾಂಗ್ರೆಸ್ನಿಂದ ಶತಾಯ ಗತಾಯ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ಹೇಳುತ್ತಿದ್ದಾರೆ.
ಕಾರ್ಯಕರ್ತರಿಗೆ ಗೊಂದಲ: ಪಕ್ಷ ದ ಕಾರ್ಯಕರ್ತರಿಗೆ ಮಾತ್ರ ಇವರಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಯಾರಿಗೆ ಪಕ್ಷ ಟಿಕೆಟ್ ನೀಡುತ್ತಾರೆ. ಮತದಾರನಿಗೆ ಯಾರ ಹೆಸರೇಳಿ ಪ್ರಚಾರಮಾಡುವುದು ಎನ್ನುವ ಗೊಂದಲದಲ್ಲಿ ಸಿಲುಕಿದ್ದಾರೆ.
ಕ್ಷೇತ್ರದ ಕಾಂಗ್ರೆಸ್ ಪಕ್ಷ ದಲ್ಲಿ ನಾಲ್ಕು ಜನ ಟಿಕೆಟ್ಗಾಗಿ ಪೈಪೋಟಿಗೆ ಬಿದ್ದಿದ್ದು, ಯಾರು ಅಭ್ಯರ್ಥಿಯಾಗುತ್ತಾರೆಂದು ಕಾರ್ಯಕರ್ತರು ಗೊಂದಲದಲ್ಲಿ ಬಿದ್ದಿದ್ದಾರೆ. ಬಿಜೆಪಿ ಪ್ರಚಾರದ ವೈಖರಿಗೆ ಸುಮ್ಮನೆ ಕೂರಲಾಗದೆ, ಹೊರಹೋಗಿ ಮತಕೇಳಲಾಗದ ಸ್ಥಿತಿಯಲ್ಲಿದ್ದಾರೆ ಕಾರ್ಯಕರ್ತರು.
ಯಲಹಂಕ ಕ್ಷೇತ್ರದಿಂದ ಕೆಪಿಸಿಸಿ ಚುನಾವಣಾ ಸಮಿತಿಗೆ ಈಗಾಗಲೇ ಇಬ್ಬರು ಮಹಿಳೆಯರು ಸೇರಿದಂತೆ 14 ಜನ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದರೂ, ನಾಲ್ಕು ಜನ ಮುಖಂಡರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಟಿಕೆಟ್ ಆಕಾಂಕ್ಷಿಗಳು: ಹಾಲಿ ಕಾಂಗ್ರೆಸ್ನಲ್ಲಿ ಈ ಹಿಂದೆ ಚುನಾವಣೆಯಲ್ಲಿ ಪರಾಜಿತರಾಗಿದ್ದ ಎನ್.ಎಂ.ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ, ಕೇಶವ ರಾಜಣ್ಣ ಮತ್ತು ವಿಶೇಷ ಕೃಷಿ ಹಣ್ಣು ಮತ್ತು ಮಾರುಕಟ್ಟೆ ಸಮಿತಿಯ ನಿರ್ದೇಶಕ ಹನುಮಂತೇಗೌಡ ಪಕ್ಷ ದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಕಾಂಗ್ರೆಸ್ನಲ್ಲಿ ಟಿಕೆಟ್ ಅಷ್ಟು ಸುಲಭವಾಗಿ ದೊರೆಯುವುದಿಲ್ಲ ಎಂದು ಅರಿತಿರುವ ಸ್ಪರ್ಧಾಕಾಂಕ್ಷಿಗಳು ಗಾಡ್ ಫಾದರ್ಗಳ ಕೃಪಾಕಟಾಕ್ಷ ಕ್ಕೆ ಮೊರೆಹೋಗಿ ಅವರನ್ನೇ ನಂಬಿ ಕೆಪಿಸಿಸಿ ಕಚೇರಿ ಹಾಗೂ ಮುಖಂಡರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಅಲ್ಲಲ್ಲಿ ಅವಕಾಶ ಸಿಕ್ಕಾಗ ಸಣ್ಣಪುಟ್ಟ ಕೆಲಸಗಳಿಂದ ಜೈಕಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ.
ಗೋಪಾಲಕೃಷ್ಣ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ವೀರಪ್ಪ ಮೊಯ್ಲಿ ಅವರನ್ನು ನಂಬಿಕೊಂಡಿರುವ ಗೋಪಾಲಕೃಷ್ಣ ಅಲ್ಲಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡು, ಸ್ಥಳೀಯ ಮುಖಂಡರ ಬೆಂಬಲವನ್ನು ಪಡೆದುಕೊಂಡು ಕ್ಷೇತ್ರದ ಉಸ್ತುವಾರಿ ಮೊಯ್ಲಿಯವರೇ ಆಗಿರುವುದರಿಂದ ನಾನೇ ಟಿಕೆಟ್ ತೆಗೆದುಕೊಂಡು ಬರುವುದಾಗಿ ಹೇಳುತ್ತಿದ್ದಾರೆ.
ಎಂಎಲ್ಸಿ ನಾರಾಯಣಸ್ವಾಮಿ: ಹಾಲಿ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಇವರು ಸಿ.ಎಂ. ಸಿದ್ದರಾಮಯ್ಯ ಮತ್ತು ಸಚಿವರ ಬೆಂಬಲವಿದೆ ಮತ್ತು ಬಿಜೆಪಿಯ ಶಾಸಕ ಎಸ್.ಆರ್.ವಿಶ್ವನಾಥ್ಗೆ ಟಾಂಗ್ ನೀಡಲು ತಾನೊಬ್ಬನೇ ಸೂಕ್ತ ಎಂದು ಹೇಳಿಕೊಳ್ಳುತ್ತಿದ್ದಾರೆ. ಯಲಹಂಕ ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚಾಗಿದ್ದು, ಸರ್ಕಾರದ ಅಭಿವೃದ್ಧಿ ಕೆಲಸಗಳು, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪಕ್ಷ ದ ಕಾರ್ಯಕ್ರಮಗಳನ್ನು ಜನರಿಗೆ ಒತ್ತಿ ಹೇಳುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ.
ಕೇಶವ ರಾಜಣ್ಣ: ಕೇಶವ ರಾಜಣ್ಣ ಕಾಂಗ್ರೆಸ್ ಪಕ್ಷ ಕ್ಕೆ ಯುವ ನಾಯಕನಂತಿದ್ದು, ವಿದ್ಯುತ್ ಖಾತೆ ಮಂತ್ರಿ ಪ್ರಭಾವಿ ಡಿ ಕೆ ಶಿವಕುಮಾರ್ ಅವರ ಕೃಪಾಕಟಾಕ್ಷ ವಿದೆ. ಏನೇ ಆದರೂ ನಾನು ಟಿಕೆಟ್ ತಂದೇ ತರುತ್ತೇನೆಂದು ಕಳೆದ ಒಂದೂವರೆ ವರ್ಷದಿಂದ ಕಾಂಗ್ರೆಸ್ ಪರವಾಗಿ ಅರ್ನಾ ಹಾಲಿನ ಡೇರಿ ಹೆಸರಿನಲ್ಲಿ ಪ್ರಚಾರದ ಹುಮ್ಮಸ್ಸಿನಲ್ಲಿದ್ದಾರೆ.
ಜೆಡಿಎಸ್ ಹನುಮಂತೇಗೌಡ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೇಶಕ ಹಾಗೂ ಜೆಡಿಎಸ್ ಮಾಜಿ ಮುಖಂಡ ಹನುಮಂತೇಗೌಡ ಕಾಂಗ್ರೆಸ್ನಿಂದ ಶತಾಯ ಗತಾಯ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ಹೇಳುತ್ತಿದ್ದಾರೆ.
ಕಾರ್ಯಕರ್ತರಿಗೆ ಗೊಂದಲ: ಪಕ್ಷ ದ ಕಾರ್ಯಕರ್ತರಿಗೆ ಮಾತ್ರ ಇವರಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಯಾರಿಗೆ ಪಕ್ಷ ಟಿಕೆಟ್ ನೀಡುತ್ತಾರೆ. ಮತದಾರನಿಗೆ ಯಾರ ಹೆಸರೇಳಿ ಪ್ರಚಾರಮಾಡುವುದು ಎನ್ನುವ ಗೊಂದಲದಲ್ಲಿ ಸಿಲುಕಿದ್ದಾರೆ.