ಎಚ್.ಪಿ. ಪುಣ್ಯವತಿ ಬೆಂಗಳೂರು
ಬೆಂಗಳೂರು: ಹಣ್ಣುಗಳ ರಾಜ ಮಾವು ಕೊಯ್ಲಿಗೆ ಬಂದಿದೆ. ಕೊರೊನಾ ಆತಂಕದಿಂದಾಗಿ ಹಣ್ಣುಗಳನ್ನು ಸವಿಯುವ ಅವಕಾಶ ತಪ್ಪಿತೆಂದು ಕೊರಗುವ ಅಗತ್ಯವಿಲ್ಲ. ರಾಜ್ಯ ಮಾವು ಅಭಿವೃದ್ಧಿ ನಿಗಮವು ಮನೆ ಬಾಗಿಲಿಗೆ ಗುಣಮಟ್ಟದ, ರಾಸಾಯನಿಕ ಮುಕ್ತ ಮಾವು ತಲುಪಿಸಲು ಮುಂದಾಗಿದೆ. ದೂರವಾಣಿ ಅಥವಾ ಇ-ಮೇಲ್ ಮೂಲಕ ತಿಳಿಸಿದರೆ ಅಪಾರ್ಟ್ಮೆಂಟ್, ಬಡಾವಣೆಗಳಿಗೆ ರೈತರೇ ಮಾವುಗಳನ್ನು ಹೊತ್ತು ತರಲಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಈಗಾಗಲೆ ಮಾವು ಕೊಯ್ಲಿಗೆ ಬಂದಿದ್ದು ಮಾವು ಮಾರಾಟಕ್ಕೆಂದು ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಎಪಿಎಂಸಿ ಮಾರುಕಟ್ಟೆ ತೆರೆದಿದ್ದರೂ ಹೆಚ್ಚು ಅನುಕೂಲಕರವಾಗಿಲ್ಲ. ಹೀಗಾಗಿ ಅಪಾರ್ಟ್ಮೆಂಟ್, ಬಡಾವಣೆಗಳಿಗೆ ರೈತರಿಂದ ಮಾವು ಪೂರೈಸಲು ಉದ್ದೇಶಿಸಲಾಗಿದೆ. ರಾಜ್ಯ ಮಾವು ಅಭಿವೃದ್ಧಿ ನಿಗಮವು ರೈತರು ಮತ್ತು ಗ್ರಾಹಕರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸಲಿದೆ.
ಬೇಡಿಕೆ ಸಲ್ಲಿಸುವುದು ಹೇಗೆ?:
ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಅಪಾರ್ಟ್ಮೆಂಟ್ ನಿವಾಸಿಗಳ ಸಂಘಗಳು ಮುಂದೆ ಬಂದು ನಿವಾಸಿಗಳ ಪರವಾಗಿ ಮಾವು ಖರೀದಿಗಾಗಿ ನಿಗಮಕ್ಕೆ ಬೇಡಿಕೆ ಸಲ್ಲಿಸಿದರೆ ನಿಗಮವು ರೈತರಿಂದ ಹಣ್ಣು ಸರಬರಾಜು ಮಾಡಲಿದೆ. ಕಾವೇರಿ ಭವನದಲ್ಲಿರುವ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಕ್ಕೆ ದೂರವಾಣಿ ಇಲ್ಲವೇ ಇ-ಮೇಲ್ ಮೂಲಕ ಬೇಡಿಕೆ ಸಲ್ಲಿಸಬಹುದು. ಯಾವ ಬಡಾವಣೆ, ಅಪಾರ್ಟ್ಮೆಂಟ್ಗೆ ಎಷ್ಟು ಪ್ರಮಾಣದ ಮಾವು ಬೇಕು ? ವಿಳಾಸ ಇತ್ಯಾದಿ ಮಾಹಿತಿ ನೀಡಬೇಕು. ನಿಗದಿತ ದಿನಾಂಕದಂದು, ಹೇಳಿದ ಜಾಗಕ್ಕೆ ರೈತರು ಟೆಂಪೊಗಳಲ್ಲಿ ಮಾವು ಹೊತ್ತು ತರಲಿದ್ದಾರೆ.
ಮೊಬೈಲ್ ನಂಬರ್: 9480885800, 9449352139, 9886363743,
ಯಾವ ಹಣ್ಣು ಲಭ್ಯ
ಮೊದಲ ಹಂತದಲ್ಲಿ ರಾಮನಗರ ಜಿಲ್ಲೆಯಲ್ಲಿ ಬೆಳೆದಿರುವ ಬಾದಾಮಿ ಮಾವು ಹೆಚ್ಚಿನ ಪ್ರಮಾಣದಲ್ಲಿ ಸಿಗಲಿದೆ. ರಾಜಗಿರಿ, ಕೇಸರ್ ಮತ್ತಿತರ ತಳಿಗಳೂ ಸ್ವಲ್ಪ ಪ್ರಮಾಣದಲ್ಲಿ ಬೆಳೆಯಾಗಿದ್ದು, ಇವುಗಳನ್ನೂ ರೈತರು ಮಾರಲಿದ್ದಾರೆ. ಇದಾದ ಬಳಿಕ ಕೋಲಾರ, ಚಿಕ್ಕಬಳ್ಳಾಪುರ ಮತ್ತಿತರ ಜಿಲ್ಲೆಗಳ ಮಾವನ್ನು ರೈತರು ಹೊತ್ತು ತರಲಿದ್ದಾರೆ.
ರಪ್ತು ಬಂದ್
ಕೊರೊನಾ ಕಾರಣದಿಂದ ರಾಜ್ಯದ ಮಾವನ್ನು ಬೇರೆ ರಾಜ್ಯಗಳಿಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಹೊರ ದೇಶಗಳಿಗೂ ರಫ್ತು ಮಾಡಲಾಗುತ್ತಿಲ್ಲ. ಸ್ಥಳೀಯ ಮಾರುಕಟ್ಟೆಗಳಲ್ಲೂ ಮಾರಾಟಕ್ಕೆ ಸಮಸ್ಯೆ ಎದುರಾಗಿದೆ. ಇದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಾಪ್ಕಾಮ್ಸ್ ದರದಲ್ಲಿ ಮಾರಾಟ
''ಹಾಪ್ಕಾಮ್ಸ್ ನಲ್ಲಿ ಯಾವ ದರ ನಿಗದಿಪಡಿಸಲಾಗಿದೆಯೊ ಅದೇ ಬೆಲೆಗೆ ಮಾರಲು ರೈತರಿಗೆ ಸೂಚನೆ ನೀಡಲಾಗುವುದು,'' ಎಂದು ಮಾವು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಸಿ.ಜಿ. ನಾಗರಾಜ್ ತಿಳಿಸಿದರು.
ಬೆಂಗಳೂರು: ಹಣ್ಣುಗಳ ರಾಜ ಮಾವು ಕೊಯ್ಲಿಗೆ ಬಂದಿದೆ. ಕೊರೊನಾ ಆತಂಕದಿಂದಾಗಿ ಹಣ್ಣುಗಳನ್ನು ಸವಿಯುವ ಅವಕಾಶ ತಪ್ಪಿತೆಂದು ಕೊರಗುವ ಅಗತ್ಯವಿಲ್ಲ. ರಾಜ್ಯ ಮಾವು ಅಭಿವೃದ್ಧಿ ನಿಗಮವು ಮನೆ ಬಾಗಿಲಿಗೆ ಗುಣಮಟ್ಟದ, ರಾಸಾಯನಿಕ ಮುಕ್ತ ಮಾವು ತಲುಪಿಸಲು ಮುಂದಾಗಿದೆ. ದೂರವಾಣಿ ಅಥವಾ ಇ-ಮೇಲ್ ಮೂಲಕ ತಿಳಿಸಿದರೆ ಅಪಾರ್ಟ್ಮೆಂಟ್, ಬಡಾವಣೆಗಳಿಗೆ ರೈತರೇ ಮಾವುಗಳನ್ನು ಹೊತ್ತು ತರಲಿದ್ದಾರೆ.
ಬೇಡಿಕೆ ಸಲ್ಲಿಸುವುದು ಹೇಗೆ?:
ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಅಪಾರ್ಟ್ಮೆಂಟ್ ನಿವಾಸಿಗಳ ಸಂಘಗಳು ಮುಂದೆ ಬಂದು ನಿವಾಸಿಗಳ ಪರವಾಗಿ ಮಾವು ಖರೀದಿಗಾಗಿ ನಿಗಮಕ್ಕೆ ಬೇಡಿಕೆ ಸಲ್ಲಿಸಿದರೆ ನಿಗಮವು ರೈತರಿಂದ ಹಣ್ಣು ಸರಬರಾಜು ಮಾಡಲಿದೆ. ಕಾವೇರಿ ಭವನದಲ್ಲಿರುವ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಕ್ಕೆ ದೂರವಾಣಿ ಇಲ್ಲವೇ ಇ-ಮೇಲ್ ಮೂಲಕ ಬೇಡಿಕೆ ಸಲ್ಲಿಸಬಹುದು. ಯಾವ ಬಡಾವಣೆ, ಅಪಾರ್ಟ್ಮೆಂಟ್ಗೆ ಎಷ್ಟು ಪ್ರಮಾಣದ ಮಾವು ಬೇಕು ? ವಿಳಾಸ ಇತ್ಯಾದಿ ಮಾಹಿತಿ ನೀಡಬೇಕು. ನಿಗದಿತ ದಿನಾಂಕದಂದು, ಹೇಳಿದ ಜಾಗಕ್ಕೆ ರೈತರು ಟೆಂಪೊಗಳಲ್ಲಿ ಮಾವು ಹೊತ್ತು ತರಲಿದ್ದಾರೆ.
ಮೊಬೈಲ್ ನಂಬರ್: 9480885800, 9449352139, 9886363743,
ಯಾವ ಹಣ್ಣು ಲಭ್ಯ
ಮೊದಲ ಹಂತದಲ್ಲಿ ರಾಮನಗರ ಜಿಲ್ಲೆಯಲ್ಲಿ ಬೆಳೆದಿರುವ ಬಾದಾಮಿ ಮಾವು ಹೆಚ್ಚಿನ ಪ್ರಮಾಣದಲ್ಲಿ ಸಿಗಲಿದೆ. ರಾಜಗಿರಿ, ಕೇಸರ್ ಮತ್ತಿತರ ತಳಿಗಳೂ ಸ್ವಲ್ಪ ಪ್ರಮಾಣದಲ್ಲಿ ಬೆಳೆಯಾಗಿದ್ದು, ಇವುಗಳನ್ನೂ ರೈತರು ಮಾರಲಿದ್ದಾರೆ. ಇದಾದ ಬಳಿಕ ಕೋಲಾರ, ಚಿಕ್ಕಬಳ್ಳಾಪುರ ಮತ್ತಿತರ ಜಿಲ್ಲೆಗಳ ಮಾವನ್ನು ರೈತರು ಹೊತ್ತು ತರಲಿದ್ದಾರೆ.
ರಪ್ತು ಬಂದ್
ಕೊರೊನಾ ಕಾರಣದಿಂದ ರಾಜ್ಯದ ಮಾವನ್ನು ಬೇರೆ ರಾಜ್ಯಗಳಿಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಹೊರ ದೇಶಗಳಿಗೂ ರಫ್ತು ಮಾಡಲಾಗುತ್ತಿಲ್ಲ. ಸ್ಥಳೀಯ ಮಾರುಕಟ್ಟೆಗಳಲ್ಲೂ ಮಾರಾಟಕ್ಕೆ ಸಮಸ್ಯೆ ಎದುರಾಗಿದೆ. ಇದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಾಪ್ಕಾಮ್ಸ್ ದರದಲ್ಲಿ ಮಾರಾಟ
''ಹಾಪ್ಕಾಮ್ಸ್ ನಲ್ಲಿ ಯಾವ ದರ ನಿಗದಿಪಡಿಸಲಾಗಿದೆಯೊ ಅದೇ ಬೆಲೆಗೆ ಮಾರಲು ರೈತರಿಗೆ ಸೂಚನೆ ನೀಡಲಾಗುವುದು,'' ಎಂದು ಮಾವು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಸಿ.ಜಿ. ನಾಗರಾಜ್ ತಿಳಿಸಿದರು.