ಆ್ಯಪ್ನಗರ

ನಗರಕ್ಕೆ ಮಳೆ ಆತಂಕ ಇಲ್ಲ

ಗಜ ಚಂಡಮಾರುತ ರಾಜ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರದು. ಅದರಿಂದ ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

Vijaya Karnataka 15 Nov 2018, 5:00 am
ಬೆಂಗಳೂರು : ಗಜ ಚಂಡಮಾರುತ ರಾಜ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರದು. ಅದರಿಂದ ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
Vijaya Karnataka Web gaja cyclone wont affect bangalore much
ನಗರಕ್ಕೆ ಮಳೆ ಆತಂಕ ಇಲ್ಲ


ಬೆಂಗಳೂರಿನ ಮೇಲೂ ಪರಿಣಾಮ ಬೀರದ ಕಾರಣ ಭಾರಿ ಮಳೆ ಬೀಳದು. ದಕ್ಷಿಣ ಒಳನಾಡಿನ ಕೆಲವೆಡೆ ಹಾಗೂ ಕರಾವಳಿ ಭಾಗದಲ್ಲಿ ಸಾಧಾರಣವಾದ ಮಳೆ ಬೀಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ನಗರದಲ್ಲಿ ಮಳೆ ಸುರಿಯುವುದೆಂದು ಹೇಳಲಾಗಿತ್ತು. ಆದರೆ, ಮಾರುತದ ಪಥ ಸ್ವಲ್ಪಮಟ್ಟಿಗೆ ಬದಲಾದ ಕಾರಣ ರಾಜ್ಯದತ್ತ ಮಳೆ ಮೋಡಗಳು ಆವರಿಸಿಕೊಳ್ಳುವುದು ಕ್ಷೀಣಿಸಿದೆ. ಇದರಿಂದ ಭಾರಿ ಮಳೆ ಬದಲು ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ. ದೀಪಾವಳಿ ಬಳಿಕ ಮಳೆಯಾಗುವ ಊಹೆಯೂ ಸದ್ಯಕ್ಕೆ ಸುಳ್ಳಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ