ಪಾರ್ಟಿಗೆಂದು ಕರೆದು ಬಾಲಕಿಯ ಮೇಲೆ ಅತ್ಯಾಚಾರ ಮಾಡಿದರು
ಪಿಯು ಓದುತ್ತಿರುವ 17 ವರ್ಷದ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದ ಲಾಡ್ಜ್ವೊಂದರಲ್ಲಿ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ ಮಾಡಿದ ಆರೋಪದಲ್ಲಿ ನಾಲ್ವರನ್ನು ಕೆ.ಆರ್ ಪುರ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web 16 Nov 2017, 3:10 pm
17 ವರ್ಷದ ಬಾಲಕಿ ಮೇಲೆ ಸಾಮೂಹಿತ ಅತ್ಯಾಚಾರ
ನಾಲ್ವರು ಆರೋಪಿಗಳ ಬಂಧನ
ಪುಸಲಾಯಿಸಿ ಕರೆದುಕೊಂಡು ಹೋಗಿ ಕೃತ್ಯ
ಲಾಡ್ಜ್ ಮಾಲೀಕನಿಂದ ಸಹಕಾರ
ನಾಪತ್ತೆ ಪ್ರಕರಣ ದಾಖಲಿಸಿದ್ದ ಪೋಷಕರು
ಬೆಂಗಳೂರು/ಕೆ ಆರ್ಪುರ: ಪಿಯು ಓದುತ್ತಿರುವ 17 ವರ್ಷದ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದ ಲಾಡ್ಜ್ವೊಂದರಲ್ಲಿ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ ಮಾಡಿದ ಆರೋಪದಲ್ಲಿ ನಾಲ್ವರನ್ನು ಕೆ.ಆರ್ ಪುರ ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್ಪುರ ಪ್ರದೇಶಗಳಲ್ಲಿ ವಾಸವಿರುವ ಟೀ ಅಂಗಡಿಯೊಂದರ ಮಾಲೀಕ ಉಡುಪಿ ಮೂಲದ ರಾಘವೇಂದ್ರ (27), ಲಾಡ್ಜ್ ಮಾಲೀಕ ಮನೋರಂಜನ್ ಪಂಡಿತ್ (52), ದಾವಣಗೆರೆ ಮೂಲದ ಸಾಗರ್(22) ಹಾಗೂ ಮೈಸೂರಿನ ಮಂಜುನಾಥ ರಾಜ್ (32) ಬಂಧಿತರು.
ಒಡಿಶಾ ಮೂಲದ ಬಾಲಕಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಆಕೆಯ ಪಾಲಕರು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕಾಲೇಜಿಗೆ ಹೋಗಿದ್ದ ಆಕೆ ಅ.26ರಂದು ಮನೆಗೆ ಮರಳಿರಲಿಲ್ಲ. ಎಲ್ಲೆಡೆ ಹುಡುಕಾಟ ನಡೆಸಿದ ಪಾಲಕರು ನಾಲ್ಕು ದಿನಗಳ ಬಳಿಕ ಕೆ.ಆರ್ ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮಾಹಿತಿ ಆಧರಿಸಿ ವೈಟ್ಫೀಲ್ಡ್ನಲ್ಲಿರುವ ಲಾಡ್ಜ್ನಲ್ಲಿ ನವೆಂಬರ್ 4ರಂದು ಅಪ್ರಾಪ್ತೆಯನ್ನು ರಕ್ಷಣೆ ಮಾಡಿದ್ದಾರೆ. ಲಾಡ್ಜ್ ಮಾಲೀಕ ಸೇರಿ ನಾಲ್ವರು ಲಾಡ್ಜ್ನಲ್ಲಿ ಕೂಡಿ ಹಾಕಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಅಪ್ರಾಪ್ತೆ ಹೇಳಿಕೆ ನೀಡಿದ್ದಾಳೆ.
ಪಾರ್ಟಿ ನೆಪದಲ್ಲಿ ಕರೆದೊಯ್ದರು
ನ.26ರಂದು ಕಾಲೇಜಿಗೆ ತೆರಳಿದ್ದ ಯುವತಿಗೆ ಕರೆ ಮಾಡಿದ್ದ ರಾಘವೇಂದ್ರ, ಹೊಟೇಲ್ವೊಂದರಲ್ಲಿ ಪಾರ್ಟಿ ಆಯೋಜಿಸಿದ್ದೇನೆ. ಅಲ್ಲಿಗೆ ಬರುವಂತೆ ಆಹ್ವಾನ ನೀಡಿದ್ದ. ಸಂಜೆ ಮನೆಗೆ ಹೊರಡುತ್ತಿದ್ದ ಯುವತಿಯನ್ನು ಸ್ನೇಹಿತರಾದ ಮಂಜುನಾಥ ರಾಜ್ ಹಾಗೂ ಸಾಗರ್ ಮೂಲಕ ಹೊಟೇಲ್ಗೆ ಕರೆಸಿಕೊಂಡಿದ್ದ. ಬಳಿಕ ಆರೋಪಿ ರಾಘವೇಂದ್ರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಕೊಠಡಿಯಲ್ಲಿ ಕೂಡಿ ಹಾಕಿ ಮಂಜುನಾಥ ರಾಜ್ ಹಾಗೂ ಸಾಗರ್ ಕೂಡಾ ಅತ್ಯಾಚಾರ ಎಸಗಿದ್ದಾರೆ. ಇದೇ ರೀತಿ ಆರೋಪಿಗಳು ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಕೆಲ ದಿನಗಳ ಬಳಿಕ ಯುವತಿಯನ್ನು ಕೂಡಿ ಹಾಕಿ ಮೂವರು ಅತ್ಯಾಚಾರ ಎಸಗಿರುವ ವಿಚಾರ ಲಾಡ್ಜ್ ಮಾಲೀಕ ಮನೋರಂಜನ್ಗೆ ಗೊತ್ತಾಗಿದೆ. ಆದರೆ, ಈ ವಿಷಯವನ್ನು ಪೊಲೀಸರಿಗೆ ತಿಳಿಸಬೇಡ ಎಂದು ಹೇಳಿದ ಮೂವರು ಆರೋಪಿಗಳು, ಆತನಿಗೂ ಅತ್ಯಾಚಾರ ಮಾಡಲು ಆಹ್ವಾನ ಕೊಟ್ಟಿದ್ದರು.
ಯುವತಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದ ಪೊಲೀಸರು, ಅಪ್ರಾಪ್ತೆಯ ಪೋನ್ ಸಂಖ್ಯೆಗೆ ಬಂದಿರುವ ಕರೆಗಳ ಸಂಖ್ಯೆ ಆಧರಿಸಿ ಕ್ಲಾಸಿಕಲ್ ಇನ್ ಲಾಡ್ಜ್ ಮೇಲೆ ದಾಳಿ ನಡೆಸಿ ಆಕೆಯನ್ನು ರಕ್ಷಿಸಿದ್ದಾರೆ.
ನ.6ರಂದು ಲಾಡ್ಜ್ ಮಾಲೀಕ ಮನೋರಂಜನ್ ಪಂಡೀತ್ನನ್ನು ಬಂಧಿಸಿ ನಂತರ ಉಳಿದ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಅಪ್ರಾಪ್ತೆ ಹಾಗೂ ಆರೋಪಿಗಳ ವ್ಯೆದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅತ್ಯಾಚಾರ ನಡೆದಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದರು.
ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಅಪಹರಣ, ಬಲವಂತವಾಗಿ ಕೂಡಿಡುವುದು ಹಾಗೂ ಪೊಕ್ಸೋ ಕಾಯ್ದೆ ಅನ್ವಯ ಕೇಸ್ ದಾಖಲಿಸಲಾಗಿದೆ
ನಾಲ್ವರು ಆರೋಪಿಗಳ ಬಂಧನ
ಪುಸಲಾಯಿಸಿ ಕರೆದುಕೊಂಡು ಹೋಗಿ ಕೃತ್ಯ
ಲಾಡ್ಜ್ ಮಾಲೀಕನಿಂದ ಸಹಕಾರ
ನಾಪತ್ತೆ ಪ್ರಕರಣ ದಾಖಲಿಸಿದ್ದ ಪೋಷಕರು
ಬೆಂಗಳೂರು/ಕೆ ಆರ್ಪುರ: ಪಿಯು ಓದುತ್ತಿರುವ 17 ವರ್ಷದ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದ ಲಾಡ್ಜ್ವೊಂದರಲ್ಲಿ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ ಮಾಡಿದ ಆರೋಪದಲ್ಲಿ ನಾಲ್ವರನ್ನು ಕೆ.ಆರ್ ಪುರ ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್ಪುರ ಪ್ರದೇಶಗಳಲ್ಲಿ ವಾಸವಿರುವ ಟೀ ಅಂಗಡಿಯೊಂದರ ಮಾಲೀಕ ಉಡುಪಿ ಮೂಲದ ರಾಘವೇಂದ್ರ (27), ಲಾಡ್ಜ್ ಮಾಲೀಕ ಮನೋರಂಜನ್ ಪಂಡಿತ್ (52), ದಾವಣಗೆರೆ ಮೂಲದ ಸಾಗರ್(22) ಹಾಗೂ ಮೈಸೂರಿನ ಮಂಜುನಾಥ ರಾಜ್ (32) ಬಂಧಿತರು.
ಒಡಿಶಾ ಮೂಲದ ಬಾಲಕಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಆಕೆಯ ಪಾಲಕರು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕಾಲೇಜಿಗೆ ಹೋಗಿದ್ದ ಆಕೆ ಅ.26ರಂದು ಮನೆಗೆ ಮರಳಿರಲಿಲ್ಲ. ಎಲ್ಲೆಡೆ ಹುಡುಕಾಟ ನಡೆಸಿದ ಪಾಲಕರು ನಾಲ್ಕು ದಿನಗಳ ಬಳಿಕ ಕೆ.ಆರ್ ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮಾಹಿತಿ ಆಧರಿಸಿ ವೈಟ್ಫೀಲ್ಡ್ನಲ್ಲಿರುವ ಲಾಡ್ಜ್ನಲ್ಲಿ ನವೆಂಬರ್ 4ರಂದು ಅಪ್ರಾಪ್ತೆಯನ್ನು ರಕ್ಷಣೆ ಮಾಡಿದ್ದಾರೆ. ಲಾಡ್ಜ್ ಮಾಲೀಕ ಸೇರಿ ನಾಲ್ವರು ಲಾಡ್ಜ್ನಲ್ಲಿ ಕೂಡಿ ಹಾಕಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಅಪ್ರಾಪ್ತೆ ಹೇಳಿಕೆ ನೀಡಿದ್ದಾಳೆ.
ಪಾರ್ಟಿ ನೆಪದಲ್ಲಿ ಕರೆದೊಯ್ದರು
ನ.26ರಂದು ಕಾಲೇಜಿಗೆ ತೆರಳಿದ್ದ ಯುವತಿಗೆ ಕರೆ ಮಾಡಿದ್ದ ರಾಘವೇಂದ್ರ, ಹೊಟೇಲ್ವೊಂದರಲ್ಲಿ ಪಾರ್ಟಿ ಆಯೋಜಿಸಿದ್ದೇನೆ. ಅಲ್ಲಿಗೆ ಬರುವಂತೆ ಆಹ್ವಾನ ನೀಡಿದ್ದ. ಸಂಜೆ ಮನೆಗೆ ಹೊರಡುತ್ತಿದ್ದ ಯುವತಿಯನ್ನು ಸ್ನೇಹಿತರಾದ ಮಂಜುನಾಥ ರಾಜ್ ಹಾಗೂ ಸಾಗರ್ ಮೂಲಕ ಹೊಟೇಲ್ಗೆ ಕರೆಸಿಕೊಂಡಿದ್ದ. ಬಳಿಕ ಆರೋಪಿ ರಾಘವೇಂದ್ರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಕೊಠಡಿಯಲ್ಲಿ ಕೂಡಿ ಹಾಕಿ ಮಂಜುನಾಥ ರಾಜ್ ಹಾಗೂ ಸಾಗರ್ ಕೂಡಾ ಅತ್ಯಾಚಾರ ಎಸಗಿದ್ದಾರೆ. ಇದೇ ರೀತಿ ಆರೋಪಿಗಳು ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಕೆಲ ದಿನಗಳ ಬಳಿಕ ಯುವತಿಯನ್ನು ಕೂಡಿ ಹಾಕಿ ಮೂವರು ಅತ್ಯಾಚಾರ ಎಸಗಿರುವ ವಿಚಾರ ಲಾಡ್ಜ್ ಮಾಲೀಕ ಮನೋರಂಜನ್ಗೆ ಗೊತ್ತಾಗಿದೆ. ಆದರೆ, ಈ ವಿಷಯವನ್ನು ಪೊಲೀಸರಿಗೆ ತಿಳಿಸಬೇಡ ಎಂದು ಹೇಳಿದ ಮೂವರು ಆರೋಪಿಗಳು, ಆತನಿಗೂ ಅತ್ಯಾಚಾರ ಮಾಡಲು ಆಹ್ವಾನ ಕೊಟ್ಟಿದ್ದರು.
ಯುವತಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದ ಪೊಲೀಸರು, ಅಪ್ರಾಪ್ತೆಯ ಪೋನ್ ಸಂಖ್ಯೆಗೆ ಬಂದಿರುವ ಕರೆಗಳ ಸಂಖ್ಯೆ ಆಧರಿಸಿ ಕ್ಲಾಸಿಕಲ್ ಇನ್ ಲಾಡ್ಜ್ ಮೇಲೆ ದಾಳಿ ನಡೆಸಿ ಆಕೆಯನ್ನು ರಕ್ಷಿಸಿದ್ದಾರೆ.
ನ.6ರಂದು ಲಾಡ್ಜ್ ಮಾಲೀಕ ಮನೋರಂಜನ್ ಪಂಡೀತ್ನನ್ನು ಬಂಧಿಸಿ ನಂತರ ಉಳಿದ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಅಪ್ರಾಪ್ತೆ ಹಾಗೂ ಆರೋಪಿಗಳ ವ್ಯೆದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅತ್ಯಾಚಾರ ನಡೆದಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದರು.
ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಅಪಹರಣ, ಬಲವಂತವಾಗಿ ಕೂಡಿಡುವುದು ಹಾಗೂ ಪೊಕ್ಸೋ ಕಾಯ್ದೆ ಅನ್ವಯ ಕೇಸ್ ದಾಖಲಿಸಲಾಗಿದೆ