ಆ್ಯಪ್ನಗರ

ದಾಸರಹಳ್ಳಿ ಹೆದ್ದಾರಿ ಪಕ್ಕದಲ್ಲೇ ಕಸ ವಿಂಗಡಣೆ !

ಟಿ.ದಾಸರಹಳ್ಳಿಯಲ್ಲಿ ಬೆಂಗಳೂರು-ತುಮಕೂರು ಹೆದ್ದಾರಿಯ ಸರ್ವಿಸ್‌ ರಸ್ತೆ ಪಕ್ಕದಲ್ಲೇ ಬಿಬಿಎಂಪಿ ನೌಕರರು ಕಸ ವಿಂಗಡಣೆ ಮಾಡುತ್ತಿದ್ದು, ಆಸುಪಾಸಿನ ಪರಿಸರದಲ್ಲಿ ವಿಪರೀತ ದುರ್ವಾಸನೆ ಬೀರುತ್ತಿದೆ.

Vijaya Karnataka Web 11 Jun 2018, 10:45 am
ದಾಸರಹಳ್ಳಿ: ಟಿ.ದಾಸರಹಳ್ಳಿಯಲ್ಲಿ ಬೆಂಗಳೂರು-ತುಮಕೂರು ಹೆದ್ದಾರಿಯ ಸರ್ವಿಸ್‌ ರಸ್ತೆ ಪಕ್ಕದಲ್ಲೇ ಬಿಬಿಎಂಪಿ ನೌಕರರು ಕಸ ವಿಂಗಡಣೆ ಮಾಡುತ್ತಿದ್ದು, ಆಸುಪಾಸಿನ ಪರಿಸರದಲ್ಲಿ ವಿಪರೀತ ದುರ್ವಾಸನೆ ಬೀರುತ್ತಿದೆ.
Vijaya Karnataka Web dasarahalli


ಸುತ್ತಮುತ್ತಲ ಸ್ಥಳಗಳಿಂದ ಕಸ ತುಂಬಿಕೊಂಡು ಬರುವ ಆಟೋಗಳಲ್ಲಿನ ತ್ಯಾಜ್ಯವನ್ನು ರಸ್ತೆ ಬದಿ ಸುರಿದು, ವಿಂಗಡಿಸಿ ಲಾರಿಗಳಿಗೆ ತುಂಬುವ ಕೆಲಸ ಇಲ್ಲಿ ನಡೆಯುತ್ತದೆ. ಹೆದ್ದಾರಿಯಲ್ಲಿ ಪ್ರತಿದಿನ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಇವುಗಳಲ್ಲಿ ಸಾಗುವವರೆಲ್ಲರೂ ಮೂಗು ಮುಚ್ಚಿಕೊಂಡೇ ಸಾಗುವಂತಾಗಿದೆ. ಇದೀಗ ಮಳೆ ಬಂದು ತ್ಯಾಜ್ಯದ ನೀರು ರಸ್ತೆಗೂ ಹರಿದು ಬರುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳಿಗೂ ಕಿರಿಕಿರಿ ಆಗುತ್ತಿದೆ.

ಕಸದ ರಾಶಿಯಿಂದ ಸೊಳ್ಳೆ, ನೊಣದಂತಹ ಕ್ರಿಮಿ ಕೀಟಗಳು ಹೆಚ್ಚಾಗಿವೆ. ಹೆದ್ದಾರಿ ಪಕ್ಕವೇ ಕಸ ವಿಂಗಡಣೆ ಮಾಡುತ್ತಿದ್ದರೂ ಬಿಬಿಎಂಪಿ ಹಾಗೂ ಚುನಾಯಿತ ಪ್ರತಿನಿಧಿಗಳು ಮೌನವಹಿಸಿದ್ದಾರೆ. ಸಂಬಂಧಪಟ್ಟವರು ಇನ್ನಾದರೂ ಕಸ ವಿಂಗಡಣೆಗೆ ಪರ್ಯಾಯ ಸ್ಥಳ ಕಂಡುಕೊಂಡು ಜನರಿಗೆ ಎದುರಾಗಿರುವ ಸಮಸ್ಯೆಗೆ ಪರಿಹಾರ ದೊರಕಿಸಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ